ಉಳ್ಳಾಲ ಕೋಡಿಯಲ್ಲಿ ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್ ಅವಘಡ : 10 ಮಂದಿಯ ರಕ್ಷಣೆ
Team Udayavani, May 23, 2021, 9:47 AM IST
ಉಳ್ಳಾಲ: ಮಂಗಳೂರಿನ ದಕ್ಕೆಯಿಂದ ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್ ಉಳ್ಳಾಲ ಕೋಡಿಯಲ್ಲಿ ಅವಘಡಕ್ಕೀಡಾಗಿ ದಡಕ್ಕೆ ಬಂದು ಅಪ್ಪಳಿಸಿದ್ದು ಬೋಟ್ ನಲ್ಲಿದ್ದ 10 ಮಂದಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಉಳ್ಳಾಲದ ಅಶ್ರಫ್ ಎಂಬವರಿಗೆ ಸೇರಿದ ಅಝಾನ್ ಹೆಸರಿನ ಬೋಟ್ ಎಂದು ತಿಳಿದು ಬಂದಿದೆ. ಭಾನುವಾರ ನಸುಕಿನ ಜಾವ ಆಳಸಮುದ್ರ ಮೀನುಗಾರಿಕೆಗೆ ಹೊರಟಿದ್ದು, ಬೋಟ್ ನಲ್ಲಿದ್ದ ಹತ್ತು ಮೀನುಗಾರರಲ್ಲಿ ಕನ್ಯಾಕುಮಾರಿ ಮೂಲದ ಐದು ಮಂದಿ ಮೀನುಗಾರರು ಕುಡಿತದ ಮತ್ತಿನಲ್ಲಿದ್ದು ದಡಕ್ಕೆ ಅಪ್ಪಳಿಸಿದಾಗ ಮೀನುಗಾರರು ವಾಂತಿ ಮಾಡುತ್ತಿದ್ದರು. ಚಾಲಕ ಇನ್ನೋರ್ವನ ಕೈಯಲ್ಲಿ ಬೋಟ್ ನೀಡಿದ ಪರಿಣಾಮ ಘಟನೆ ಸಂಭವಿಸಿದೆ.
ಉಳ್ಳಾಲ ಪೊಲೀಸರಿಂದ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಮೂರು ಮದುವೆ, ಒಂದು ಅಂತ್ಯಸಂಸ್ಕಾರ: ಈ ಗ್ರಾಮದಲ್ಲಿ ಒಂದೇ ದಿನ 95 ಜನರಿಗೆ ಕೋವಿಡ್ ಪಾಸಿಟಿವ್