ತಾಲೂಕಿನಾದ್ಯಂತ ಹಲವೆಡೆ ನೆರೆ ಸದೃಶ ಸ್ಥಿತಿ
Team Udayavani, Jun 12, 2018, 2:25 AM IST
ಬೆಳ್ತಂಗಡಿ: ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ಹಲವೆಡೆ ನೀರು ಸ್ಥಗಿತಗೊಂಡ ಪರಿಣಾಮ ಸಾರ್ವಜನಿಕರು ಸಂಕಷ್ಟ ಆನುಭವಿಸುವಂತಾಯಿತು. ತಾಲೂಕಿನ ಎಲ್ಲಾ ನದಿಗಳು ಉಕ್ಕಿ ಹರಿಯುತ್ತಿದ್ದು, ಸಣ್ಣ ಪುಟ್ಟ ಡ್ಯಾಂಗಳು ತುಂಬಿ ಹರಿದಿವೆ. ಮುಖ್ಯವಾಗಿ ಉಜಿರೆ ಬಳಿ ಹಲವು ಬಾರಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಜನಸಾಮನ್ಯರು ಸಂಕಷ್ಟ ಅನುಭವಿಸುವಂತಾಯಿತು. ರವಿವಾರ ರಾತ್ರಿ ಹಾಗೂ ಸೋಮವಾರ ಬೆಳಗ್ಗೆ ಸುರಿದ ಮಳೆಗೆ ಉಜಿರೆ ಪರಿಸರದಲ್ಲಿ ನೆರೆ ಸದೃಶ ದೃಶ್ಯ ಕಂಡು ಬಂತು.
ಬೆಳ್ತಂಗಡಿಯಿಂದ ಉಜಿರೆಗೆ ತೆರಳುವ ದಾರಿಯಲ್ಲಿ ಉಜಿರೆ ಸಮೀಪದ ಪೆಟ್ರೋಲ್ ಬಂಕ್ ಬಳಿ ನೀರುನಿಂತು ಸಮಸ್ಯೆ ಎದುರಾಗಿದೆ. ಹಲವಾರು ದಿನಗಳಿಂದ ಸಮಸ್ಯೆ ಇದ್ದರೂ ಸ್ಥಳೀಯ ಗ್ರಾಪಂ ಹಾಗೂ ಹೆದ್ದಾರಿ ಸಹಾಯದಿಂದ ಚರಂಡಿ ಹೂಳು ತೆಗೆಯದೆ, ಕಸದ ರಾಶಿಯಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿತು. ಸ್ಥಳಕ್ಕೆ ಸ್ಥಳೀಯ ಪಿಡಿ.ಒ ಗಾಯತ್ರಿ, ತಾ.ಪಂ. ಇಒ ಬಸವರಾಜ ಅಯ್ಯಣ್ಣನವರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯ ಪಾಲಕ ಅಭಿಯಂತರ ಯಶವಂತ್, ಸ್ಥಳೀಯ ಗ್ರಾ.ಪಂ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಕ್ರಮಕೈಗೊಂಡರು.
ಗುಡ್ಡ ಕುಸಿತ
ತಾಲೂಕಿನ ಚಾರ್ಮಾಡಿ ಬಳಿ ಸೋಮನಾಥ್ ಎಂಬುವವರ ಮನೆ ಬಳಿ ಗುಡ್ಡ ಕುಸಿದಿದೆ. ಚಾರ್ಮಾಡಿ ವ್ಯಾಪ್ತಿಯಲ್ಲಿ ಕತ್ತರಿ ಗುಡ್ಡವನ್ನು ಸಂಪರ್ಕಿಸುವ ರಸ್ತೆಯಲ್ಲಿರುವ ಕೆರೆ ಬಳಿ ಕುಸಿತವಾಗಿದ್ದು, ಸಂಪರ್ಕ ಕಡಿದುಕೊಳ್ಳುವ ಭೀತಿ ಎದುರಾಗಿದೆ.
ಸಾರ್ವಜನಿಕರಿಂದ ಶ್ರಮದಾನ
ಅಧಿಕಾರಿಗಳು ಸಮರ್ಪಕ ಮಳೆ ನಿರ್ವಹಣೆ ಕಾರ್ಯ ಮಾಡದನ್ನು ಗಮನಿಸಿ ಸಾರ್ವಜನಿಕರು ಸಹಾಯ ಹಸ್ತ ಚಾಚುತ್ತಿದ್ದ ದೃಶ್ಯ ಕಂಡುಬಂದಿದೆ. ಉಜಿರೆಯಲ್ಲೂ ಸಾರ್ವಜನಿಕರೂ ಚರಂಡಿ ಕಸ ತೆಗೆಯಲು ಸಹಕರಿಸಿ ದರು. ಲಾೖಲ ಸೇತುವೆ ಬಳಿ ನೀರು ನಿಲ್ಲುತ್ತಿದ್ದು, ಆಟೋ ಶಂಕರ್ ಅವರು ನೀರು ಚರಂಡಿಗೆ ಹರಿಯಲು ಶ್ರಮದಾನ ಮಾಡಿದರು. ಚಾರ್ಮಾಡಿ ಯಲ್ಲಿ ರಕ್ಷಣಾ ಕಾರ್ಯ ನಡೆಸಲು ಹಸನಬ್ಬ ಅವರ ತಂಡ ಸಿದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ಉಳಿದ ಪ್ರದೇಶಗಳಲ್ಲೂ ಜನತೆ ಸ್ವಯಂ ಪ್ರೇರಿತವಾಗಿ ಸಾರ್ವಜನಿಕ ಸೇವೆ ಮಾಡುತ್ತಿದ್ದಾರೆ.
ನೀರಿನ ಮಟ್ಟ ಹೆಚ್ಚಳ
ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಕುಕ್ಕಾವು ಬಳಿ ಕಿಲ್ಲೂರು ಸಂಪರ್ಕಿಸುವ ಸಾರ್ವಜನಿಕರು ಬಳಸುತ್ತಿದ್ದ ಡ್ಯಾಂ ಮುಳುಗಿದೆ. ಕೊಲ್ಲಿ- ಕಿಲ್ಲೂರು ನಡುವೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ನೇತ್ರಾವತಿ ನೀರಿನ ಹರಿವು ಹೆಚ್ಚಳವಾಗಿದ್ದು ಕಂಡುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
Dharmasthala; ಕೆಎಸ್ಸಾರ್ಟಿಸಿ ಬಸ್ನಡಿ ಸಿಲುಕಿ ಮಹಿಳೆ ಸಾವು
ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್ ವಶಕ್ಕೆ
Aranthodu ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ