ಪೂಪಾಡಿಕಟ್ಟೆ- ಪೆರ್ಲ ರಸ್ತೆಯಲ್ಲಿ ನೀರು
Team Udayavani, Aug 10, 2018, 1:50 AM IST
ಪುಂಜಾಲಕಟ್ಟೆ: ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದ್ದು ನದಿ ಬದಿಯ ಸ್ಥಳಗಳಲ್ಲಿ ನೀರು ಒಳ ನುಗ್ಗಿತು. ಅಜಿಲಮೊಗರು, ಸರಪಾಡಿ, ಪೆರ್ಲ, ಬೀಯಪಾದೆ ಮೊದಲಾದ ಕಡೆಗಳಲ್ಲಿ ನೀರು ರಸ್ತೆಗೆ ನುಗ್ಗಿ ಜಲಾವೃತಗೊಂಡು ಸಂಚಾರಕ್ಕೆ ಅಡಚಣೆಯಾಗಿತ್ತು. ಅಜಿಲಮೊಗರು ಮಸೀದಿಯ ಸುತ್ತಮುತ್ತ ನೀರು ತುಂಬಿ ದ್ವೀಪದಂತಾಗಿತ್ತು.
ಸರಪಾಡಿ ಗ್ರಾಮದ ಪೂಪಾಡಿಕಟ್ಟೆ, ಪೆರ್ಲ, ಬೀಯಪಾದೆ ರಸ್ತೆಯಲ್ಲಿ ನೀರು ತುಂಬಿ ಸಂಚಾರಕ್ಕೆ ತೊಡಕುಂಟಾಗಿ ಸಂಪರ್ಕ ಕಡಿದಿತ್ತು. ಈ ಭಾಗದ ಹಲವು ಕಡೆ ತೋಟಗಳಿಗೆ ನೀರು ನುಗ್ಗಿ ಕೃಷಿಗೆ ಹಾನಿಯಾಗಿದೆ. ಎಎಂಆರ್ ಅಣೆಕಟ್ಟಿನಿಂದಾಗಿ ನೀರು ನಿಲುಗಡೆಗೊಂಡು ಈ ಪರಿಸ್ಥಿತಿ ಉಂಟಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!