ಈಜುಕೊಳವಾದ ಕೂಳೂರು ಮೇಲ್ಸೇತುವೆ
Team Udayavani, May 15, 2018, 8:25 AM IST
ಕೂಳೂರು : ಕೂಳೂರು ಹೆದ್ದಾರಿ ಬದಿ ಸರಿಯಾದ ಚರಂಡಿ ಇಲ್ಲದ ಕಾರಣ ರವಿವಾರ ರಾತ್ರಿ ಸುರಿದ ಭಾರೀ ಮಳೆಗೆ ಕೂಳೂರು ಮೇಲ್ಸೇತುವೆ ಈಜು ಕೊಳವಾಯಿತು. ಸಮೀಪದಲ್ಲೇ ಫಲ್ಗುಣಿ ನದಿಯಿದ್ದರೂ ಮಳೆಗಾಲದಲ್ಲಿ ನೀರು ಮಾತ್ರ ಸರಾಗವಾಗಿ ಹರಿಯದೆ ಹೆದ್ದಾರಿಯಲ್ಲಿಯೇ ನಿಂತು ವಾಹನ ಓಡಾಟಕ್ಕೆ ಅಡಚಣೆಯಾಗುತ್ತಿದೆ. ಕೂಳೂರು ಚರ್ಚ್ ಗುಡ್ಡೆಯಿಂದ ಹರಿಯುವ ಮಳೆ ನೀರು ನೇರವಾಗಿ ಹೆದ್ದಾರಿಗೆ ಬರುತ್ತಿದ್ದು ಮೇಲ್ಸೇತುವೆ ಹಾಗೂ ಕೂಳೂರು ಕಾವೂರು ರಸ್ತೆಯಲ್ಲಿಯೇ ಹರಿಯುತ್ತದೆ. ಈ ಭಾಗದಲ್ಲಿ ಸೇತುವೆಯ ತಡೆಗೋಡೆಯೂ ಕುಸಿದು ಬಿದ್ದಿದ್ದು ಮಳೆಗಾಲದಲ್ಲಿ ರಾತ್ರಿ ಸಂಚಾರ ಅಪಾಯಕಾರಿಯಾಗಿದೆ. ಮಳೆಗೆ ನೆರೆ ನೀರು ನಿಲ್ಲುತ್ತಿದ್ದು ಮಳೆಗಾಲದಲ್ಲಿ ಇನ್ನಷ್ಟು ಸಮಸ್ಯೆಯಾಗಬಹುದು. ಈ ಕುರಿತು ಹೆದ್ದಾರಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಾಗರಿಕ ಸಮಿತಿಯ ಗುರುಚಂದ್ರ ಹೆಗ್ಡೆ ಒತ್ತಾಯಿಸಿದ್ದಾರೆ.
ಮಳೆ ನೀರು ಹರಿಯುತ್ತಿಲ್ಲ
ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಹೆದ್ದಾರಿ ಇಲಾಖೆ ಮಳೆ ನೀರು ಹರಿಯಲು ಚರಂಡಿ ನಿರ್ಮಿಸಿದ್ದರೂ ತಾಂತ್ರಿಕವಾಗಿ ಚರಂಡಿ ನಿರ್ಮಾಣ ಸರಿಯಿರದ ಕಾರಣ ಮಳೆ ನೀರು ಸರಾಗವಾಗಿ ಹರಿಯುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ