ರೇಬಿಸ್‌ ಗೆ ನಾಟಿ ಔಷಧ ರಾಮಬಾಣ ; 5,000 ಜನರಿಗೆ ಚಿಕಿತ್ಸೆ


Team Udayavani, Jun 2, 2018, 4:40 AM IST

rabies.jpg

ಆಲಂಕಾರು: ಹುಚ್ಚುನಾಯಿ ಕಚ್ಚಿದರೆ ರೇಬಿಸ್‌ ರೋಗದ ಸಾಧ್ಯತೆ ಹೆಚ್ಚು. ಅದರಿಂದ ಪಾರಾಗಲು ರೇಬಿಸ್‌ ನಿರೋಧಕ ಚುಚ್ಚುಮದ್ದಿನ ಮೊರೆಹೋಗುತ್ತಾರೆ. ಇದರ ಮಧ್ಯೆ ಪುತ್ತೂರು ತಾಲೂಕು ಆಲಂಕಾರು ಗ್ರಾಮದ ಕೇಪುಳು ನಿವಾಸಿ ಅಣ್ಣಿ ಪೂಜಾರಿ ಎಂಬ ಪಂಡಿತರು 37 ವರ್ಷಗಳಿಂದ ಗಿಡಮೂಲಿಕೆಗಳನ್ನು ಬಳಸಿ ಔಷಧ ನೀಡುತ್ತಿದ್ದಾರೆ. ಈ ಔಷಧವನ್ನು ಒಂದು ಸಲ ತೆಗೆದುಕೊಂಡರೆ, ರೇಬಿಸ್‌ ವೈರಾಣು ನಿವಾರಣೆಯಾಗುತ್ತದೆ ಎಂದು ಇವರಿಂದ ಚಿಕಿತ್ಸೆ ಪಡೆದ ಅನೇಕರು ಹೇಳಿದ್ದಾರೆ.


ತಮ್ಮ ತಾಯಿಯ ತಾಯಿಯಿಂದ (ಅಜ್ಜಿ) ಈ ಔಷಧ ಕ್ರಮ ಕಲಿತ ಅಣ್ಣಿ ಪೂಜಾರಿ (66) ಈ ತನಕ 5 ಸಾವಿರಕ್ಕೂ ಅಧಿಕ ಜನರಿಗೆ ಹುಚ್ಚು ನಾಯಿ ಕಡಿತಕ್ಕೆ ಔಷಧ ಕೊಟ್ಟಿದ್ದಾರೆ. ಮನುಷ್ಯರಿಗೆ ಮಾತ್ರವಲ್ಲದೆ, ಜಾನುವಾರು, ನಾಯಿ, ಕೋಳಿ, ಸಾಕು ಹಂದಿಗಳಿಗೂ ನಾಟಿ ಪದ್ಧತಿಯ ಔಷಧ ನೀಡಿ, ಗುಣಪಡಿಸಿದ್ದಾರೆ. ಅವರ ಈ ಸಾಧನೆಗೆ ಆಲಂಕಾರು ಸಿ.ಎ. ಬ್ಯಾಂಕ್‌, ಮೂರ್ತೆದಾರರ ಸೇವಾ ಸಹಕಾರಿ ಸಂಘ, ಬಿಲ್ಲವ ಸಂಘ ಮುಂತಾದವು ಅವರನ್ನು ಸಮ್ಮಾನಿಸಿ, ಗೌರವಿಸಿವೆ. ಹುಚ್ಚು ನಾಯಿ ಕಚ್ಚಿದ ಮೇಲೆ ಮನುಷ್ಯರಿಗಾದರೆ 42ನೇ ದಿನ, ಪ್ರಾಣಿಗಳಿಗೆ ಕೇವಲ 20 ದಿನಗಳಲ್ಲಿ ರೇಬಿಸ್‌ ರೋಗ ಶುರುವಾಗುತ್ತದೆ. ಉಲ್ಬಣಿಸಿದ ಮೇಲೆ ಯಾವ ಚಿಕಿತ್ಸೆಯೂ ಫ‌ಲ ನೀಡುವುದಿಲ್ಲ. ಆಮೇಲೆ ಮೂರು ದಿನಗಳಷ್ಟೇ ಆಯಸ್ಸು.

ಅಣ್ಣಿ ಪೂಜಾರಿ ಅವರು ಕೊಡುವ ಔಷಧಕ್ಕೆ ದರ ನಿಗದಿಯಿಲ್ಲ. ಚಿಕಿತ್ಸೆ ಪಡೆದವರು ತಮಗೆ ತೋಚಿದಷ್ಟು ಹಣ ಕೊಡುತ್ತಾರೆ. ಹಲವು ಜನರಿಗೆ ಉಚಿತವಾಗಿ ಔಷಧ ವಿತರಿಸಿದ್ದೂ ಇದೆ. ಈ ಔಷಧಕ್ಕೆ ಯಾವುದೇ ಪಥ್ಯವಿಲ್ಲ. ಆದರೆ. ಚಿಕಿತ್ಸೆ ಪಡೆದ ದಿನ ಮದ್ಯ ಸೇವಿಸುವಂತಿಲ್ಲ. ರಾತ್ರಿ ಊಟ ಮಾಡಿದ ಮೇಲೆ ಔಷಧ ಸೇವಿಸಿ ನಿದ್ರಿಸಬೇಕು. ಬೆಳಗ್ಗೆ ತಲೆಯ ಮೇಲೆ ತಣ್ಣೀರು ಸ್ನಾನ ಮಾಡಿ, ತಣ್ಣೀರನ್ನೇ ಕುಡಿಯಬೇಕು. ಆಮೇಲೆ ದೈನಂದಿನ ಕೆಲಸಗಳಿಗೆ ಹೋಗಲು ಯಾವುದೇ ಅಡ್ಡಿಯಿಲ್ಲ.

ಶೀಘ್ರ ಗುಣಮುಖ
ಕೇಪುಳು ಅಣ್ಣಿ ಪೂಜಾರಿ ಅವರ ಸಹೋದರಿ ರಾಮಕುಂಜದಲ್ಲಿ ಔಷಧ ನೀಡುತ್ತಾರೆ. ಈಗ ಎಲ್ಲ ಕಡೆಗಳಲ್ಲಿ ರಬ್ಬರ್‌ ಕೃಷಿಯಿಂದಾಗಿ ಗಿಡ ಮೂಲಿಕೆಗಳು ನಾಶವಾಗಿವೆ. ಗಿಡಮೂಲಿಕೆಗಳಿಗಾಗಿ ಉಪ್ಪಿನಂಗಡಿ, ಕಡಬ, ಸುಬ್ರಹ್ಮಣ್ಯದ ವರೆಗೆ ಅಲೆದಾಡಬೇಕಾಗುತ್ತದೆ ಎನ್ನುತ್ತಾರೆ, ಅಣ್ಣಿ ಪೂಜಾರಿ (ಮೊ. 9880140030). ರೇಬಿಸ್‌ಗೆ ಮಾತ್ರವಲ್ಲದೆ ವಿಷಕಾರಿ ಜೇಡ ಕಚ್ಚಿದರೂ ಮೂರು ದಿನಗಳ ಔಷಧ ನೀಡಿ, ಗುಣಪಡಿಸುತ್ತಾರೆ. ಮೂಲವ್ಯಾಧಿಗೂ ಚಿಕಿತ್ಸೆ ನೀಡುತ್ತಾರೆ. 

— ಸದಾನಂದ ಆಲಂಕಾರು

ಟಾಪ್ ನ್ಯೂಸ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

9-fusion

Drama: ಪ್ರೇಕ್ಷಕರ ಮನಗೆದ್ದ “ಸೀತಾರಾಮ ಚರಿತಾ”

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.