ಆಂಬ್ಯುಲೆನ್ಸ್ ಚಲಾಯಿಸಿ ಜಾಗೃತಿ ಮೂಡಿಸಿದ ಮಾಜಿ ಸಚಿವ ಅಭಯಚಂದ್ರ ಜೈನ್
Team Udayavani, May 8, 2021, 4:03 PM IST
ಹಳೆಯಂಗಡಿ : ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಸಸಿಹಿತ್ಲು ಅಗ್ಗಿದಕಳಿಯ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿಯ ಸಂಯೋಜನೆಯಲ್ಲಿ ಶನಿವಾರ ಆರಂಭಗೊಂಡ ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಹಳೆಯಂಗಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವತಹ ಚಲಾಯಿಸಿ ,ಸೇವೆಯ ಬಗ್ಗೆ ಜಾಗೃತಿ ಮೂಡಿಸಿ, ತುರ್ತು ಸಂದರ್ಭ ಬಂದಲ್ಲಿ ಜನರ ಸೇವೆಗೆ ತಾನು ಸಹ ಕೋವಿಡ್ ವಾರಿಯರ್ಸ್ ಆಗಿ ಆಂಬ್ಯುಲೆನ್ಸ್ ಚಲಾಯಿಸಲು ಸಿದ್ಧನಿದ್ದೇನೆ ಜನರ ಆರೋಗ್ಯ, ಸಾಮಾಜಿಕ ಬದ್ಧತೆಗಾಗಿ ಅವರನ್ನು ರಕ್ಷಿಸುವಲ್ಲಿ ನನ್ನ ರಾಜಕೀಯ ಸಮಾಜ ಸೇವೆಗೆ ಮೀಸಲು ಎಂದು ಪ್ರತಿಕ್ರಿಯಿಸಿದರು.
ಈ ಸಂದರ್ಭದಲ್ಲಿ ಅವರಿಗೆ ಮಿಥುನ್ ರೈ ಸಾಥ್ ನೀಡಿದರು.