ಮಂಗಳೂರು: ವೈದ್ಯಕೀಯ ಉಪಕರಣ ಸರಬರಾಜು ಮಾಡುವುದಾಗಿ ನಂಬಿಸಿ 27.39 ಲಕ್ಷ ರೂ. ವಂಚನೆ
Team Udayavani, Jul 8, 2022, 6:35 AM IST
ಮಂಗಳೂರು: ವೈದ್ಯಕೀಯ ಉಪಕರಣ ಸರಬರಾಜು ಮಾಡುವುದಾಗಿ ನಂಬಿಸಿ, 27.39 ಲಕ್ಷ ರೂ. ಪಡೆದು ವಂಚಿಸಿದ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೈದ್ಯಕೀಯ ಉಪಕರಣಗಳ ಮಾರಾಟ ಮತ್ತು ಸೇವೆ ವ್ಯಾಪಾರ ಮಾಡುತ್ತಿರುವ ಮುರಳೀಧರ ಶೆಟ್ಟಿ ಅವರು 2020ರಲ್ಲಿ ಆರೋಪಿ ಅಮಿತ್ ಸುರೇಶ್ ಶೇವಾಲೆ ಎಂಬಾತನಿಗೆ ವೈದ್ಯಕೀಯ ಉಪಕರಣಗಳ ಸರಬರಾಜಿಗೆ ಒಪ್ಪಂದ ಮಾಡಿಕೊಂಡು 12,00,075 ಲಕ್ಷ ರೂ. ಮುರಳೀಧರ ಶೆಟ್ಟಿ ಅವರು ನೀಡಿದ್ದರು.
ಆದರೆ ಆತ ಉಪಕರಣಗಳನ್ನು ತಲುಪಿಸದೆ ವಂಚನೆ ಮಾಡಿದ್ದ. ಪುಣೆಗೆ ಹೋಗಿ ಹಲವಾರು ಬಾರಿ ಮಾತುಕತೆ ನಡೆಸಿದಾಗ ಚೆಕ್ಗಳನ್ನು ನೀಡಿದ್ದು, ಅವು ಬೌನ್ಸ್ ಆಗಿವೆ. ನಂತರ 2021ರಲ್ಲಿ ಒಪ್ಪಂದ ಮಾಡಿಕೊಂಡು ಆರೋಪಿ 15,39,075 ರೂ. ಪಾವತಿಸಿಕೊಂಡು ನಂಬಿಕೆ ದ್ರೋಹ ಮಾಡಿದ್ದಾನೆ ಎಂದು ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ