ಸರಕಾರಿ ಬಸ್‌ಗಳಲ್ಲೂ  ಉಚಿತ ವೈ ಫೈ!


Team Udayavani, Jan 31, 2018, 11:22 AM IST

31-22.jpg

ಮಂಗಳೂರು: ಹಳ್ಳಿಗಳಲ್ಲಿ ಸಂಚರಿಸುವ ಸರಕಾರಿ ಬಸ್‌ಗಳಲ್ಲಿ ಪ್ರಯಾಣಿಸಿ ಉಚಿತ ಇಂಟರ್ನೆಟ್‌ ಮೂಲಕ ಜಗತ್ತಿನ ಸಂಗತಿಯನ್ನು ತುದಿ ಬೆರಳಿನಲ್ಲಿ ನೋಡುವ ವಿಶೇಷ ಸೌಕರ್ಯವನ್ನು ಕೆಎಸ್‌ಆರ್‌ಟಿಸಿ ಒದಗಿಸಲು ಮುಂದಾಗಿದೆ. ಆಧು ನಿಕ ಸೌಲಭ್ಯಗಳನ್ನು ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದಿಂದ ಹೊರಡುವ ಎಲ್ಲ ಶ್ರೇಣಿಯ ಬಸ್‌ಗಳಿಗೂ ವೈ ಫೈ ಮೂಲಕ ಉಚಿತ ಇಂಟರ್ನೆಟ್‌ ಸೌಲಭ್ಯ ಕಲ್ಪಿಸುವ ಪ್ರಾರಂಭಿಕ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಫೆ. 15ರ ಸುಮಾರಿಗೆ ಅನುಷ್ಠಾನವಾಗುವ ನಿರೀಕ್ಷೆ ಇದೆ. 

ಮೊದಲ ಹಂತದಲ್ಲಿ ಮಂಗಳೂರು ವಿಭಾಗದಿಂದ ಹೊರಡುವ ಕೆಎಸ್‌ಆರ್‌ಟಿಸಿ ರಾಜಹಂಸ, ವೋಲ್ವೋ, ಸ್ಲಿàಪರ್‌ ಬಸ್‌ಗಳಿಗೆ ವೈ ಫೈ ಸಿಸ್ಟಂ ಅಳವಡಿಸುವ ಕಾರ್ಯ ಕೆಎಸ್‌ಆರ್‌ಟಿಸಿ ಮಂಗಳೂರಿನ ಕುಂಟಿಕಾನ ಘಟಕ ದಲ್ಲಿ ಸದ್ಯ ನಡೆಯುತ್ತಿದೆ. ಬೆಂಗಳೂರು ಹಾಗೂ ಮೈಸೂರು ಘಟಕ ವ್ಯಾಪ್ತಿಯ ಸರಕಾರಿ ಬಸ್‌ಗಳಿಗೂ ವೈ ಫೈ ಅಳವಡಿಕೆ ಕೆಲಸ ಆರಂಭ ವಾಗಿದೆ. ಬೆಂಗಳೂರಿನ ಬಿಎಂಟಿಸಿಯ ಕೆಲವು ಬಸ್‌ಗಳಲ್ಲಿ ವೈ ಫೈ ವ್ಯವಸ್ಥೆಯನ್ನು ಈಗಾಗಲೇ ಜಾರಿ ಗೊಳಿಸಲಾಗಿದೆ.

ಕೆಎಸ್‌ಆರ್‌ಟಿಸಿಯ ಎಲ್ಲ ಬಸ್‌ಗಳಿಗೂ ಇಂಟರ್ನೆಟ್‌ ಸೌಲಭ್ಯವನ್ನು ಉಚಿತವಾಗಿ ಕಲ್ಪಿಸಿಕೊಡುವ ನಿಟ್ಟಿ ನಲ್ಲಿ ರಾಜ್ಯ ಸರಕಾರ ಪ್ರತಿಷ್ಠಿತ ಕೆಪಿಐಟಿ ಕಂಪೆನಿಯ ಜತೆಗೆ ಒಪ್ಪಂದ ಮಾಡಿ ಕೊಂಡಿದೆ. ಇದರಂತೆ ಕಂಪೆನಿಯ ಪ್ರಮುಖ ತಾಂತ್ರಿಕ ಸಿಬಂದಿ ರಾಜ್ಯಕ್ಕೆ ಆಗಮಿಸಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ವೈ ಫೈ ಅಳವಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಹಳ್ಳಿಯ ಬಸ್‌ಗಳಿಗೂ ವೈ ಫೈ
ಪ್ರಸ್ತುತ  ಪ್ರಥಮ ದರ್ಜೆಯ ಕೆಎಸ್‌ ಆರ್‌ಟಿಸಿ ಬಸ್‌ಗಳಲ್ಲಿ ವೈ ಫೈ ಅಳವಡಿಸಲಾಗುತ್ತಿದ್ದು, ಎರಡನೇ ಹಂತದಲ್ಲಿ ಮಂಗಳೂರು ವಿಭಾಗ ದಿಂದ ಹೊರಡುವ ಎಲ್ಲ ಸರಕಾರಿ ಬಸ್‌ ಗಳಿಗೂ ವೈ ಫೈ ಅಳವಡಿಕೆ ನಡೆಯ ಲಿದೆ. ಹಳ್ಳಿಗಳಿಗೆ ಸಂಚರಿಸುವ ಬಸ್‌ ಗಳಲ್ಲೂ ಕೂಡ ಪ್ರಯಾಣಿಕರು ಉಚಿತವಾಗಿ ಇಂಟರ್‌ನೆಟ್‌ ಸೌಕರ್ಯ ಪಡೆದುಕೊಳ್ಳಬಹುದು. 

ಮಂಗಳೂರು ವಿಭಾಗದಲ್ಲಿ 590 ಬಸ್‌ಗಳಿದ್ದು, ಇದರಲ್ಲಿ ಸಂಚ ರಿಸು ತ್ತಿರುವ 540 ಬಸ್‌ಗಳಿಗೂ ವೈ ಫೈ ಅಳ ವಡಿಸಲಾಗುತ್ತದೆ. ಸರ್ವಿಸ್‌ ಪ್ರೊವೈಡರ್‌ ಗಳನ್ನು ಬಸ್‌ ಗಳಲ್ಲಿ ಅಳ ವಡಿಸು ತ್ತಿದ್ದು, ಇದು ಪೂರ್ಣಗೊಂಡ ಕೆಲವೇ ದಿನಗಳಲ್ಲಿ ಪ್ರಯಾಣಿಕರಿಗೆ ಉಚಿತ ಇಂಟರ್ನೆಟ್‌ ಸೌಕರ್ಯ ಬಸ್‌ಗಳಲ್ಲಿ ದೊರೆಯಲಿದೆ. ಕೆಎಸ್‌ಆರ್‌ಟಿಸಿ ಮಂಗಳೂರು ನಿಯಂತ್ರಣಾಧಿಕಾರಿ ದೀಪಕ್‌ ಕುಮಾರ್‌ “ಉದಯವಾಣಿ’ ಜತೆಗೆ ಮಾತ  ನಾಡಿ “ಮಂಗಳೂರು- ಕಾಸರ  ಗೋಡು, ನರ್ಮ್ ಬಸ್‌ ಸಹಿತ ಎಲ್ಲ  ಶ್ರೇಣಿಯ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲೂ ವೈ ಫೈ ವ್ಯವಸ್ಥೆ ಅಳವಡಿಸುವ ಪ್ರಕ್ರಿಯೆ ನಡೆ ಯು ತ್ತಿದೆ. ಪ್ರಯಾಣಿಕರಿಗೆ ಸಂಚರಿಸುವ ವೇಳೆಯಲ್ಲಿ ಉಚಿತವಾಗಿ ಇಂಟರ್ನೆಟ್‌ ಸೇವೆ ಲಭ್ಯವಾಗಿ ಉಲ್ಲಾಸ  ದಾಯಕ ಪ್ರಯಾಣದ ಗುರಿ ನಮ್ಮದು’ ಎಂದು ತಿಳಿಸಿದ್ದಾರೆ.

ಖಾಸಗಿ ಬಸ್‌ನಲ್ಲೂ  ಇದೆ
ಕರಾವಳಿಯ ಕೆಲವೇ ಕೆಲವು ಖಾಸಗಿ ಬಸ್‌ಗಳಲ್ಲಿ ವೈ ಫೈ ಸೌಲಭ್ಯವಿದೆ. ವರ್ಷದ ಹಿಂದೆಯೇ ಕೆಲವು ಬಸ್‌ಗಳಲ್ಲಿ ಇದನ್ನು ಅಳವಡಿಸಲಾಗಿದೆ.

ಕಂಡಕ್ಟರ್‌ ನೀಡುವ ಪಾಸ್‌ವರ್ಡ್‌!
ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ವೈ ಫೈ ವ್ಯವಸ್ಥೆ ಅನುಷ್ಠಾನಕ್ಕೆ ಬಂದ ಮೇಲೆ ಆ ಬಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಬಯಸಿದಲ್ಲಿ ಉಚಿತವಾಗಿ ಇಂಟರ್ನೆಟ್‌ ಬಳಸಬಹುದು. ಬಸ್‌ನೊಳಗೆ ಕುಳಿತ ಬಳಿಕ ಪ್ರಯಾಣಿಕ ತನ್ನ ಮೊಬೈಲ್‌ನಲ್ಲಿ ವೈ ಫೈ ಅನ್ನು ಆನ್‌ ಮಾಡಿದಾಗ ಪಾಸ್‌ವಾರ್ಡ್‌ ನಿರೀಕ್ಷಿಸುತ್ತದೆ. ಆಗ ಬಸ್‌ನ ಕಂಡಕ್ಟರ್‌ರವರಲ್ಲಿ ಪಾಸ್‌ವರ್ಡ್‌ ಕೇಳಬಹುದು. ಅವರು ನೀಡುವ ಪಾಸ್‌ವರ್ಡ್‌ ಅನ್ನು ಮೊಬೈಲ್‌ನಲ್ಲಿ ಹಾಕಿದಾಗ ಮಾತ್ರ ಕೆಎಸ್‌ಆರ್‌ಟಿಸಿ ವೈ ಫೈ ಸೌಲಭ್ಯ ಪ್ರಯಾಣಿಕರಿಗೆ ಲಭ್ಯವಾಗುತ್ತದೆ. 

ದಿನೇಶ್‌ ಇರಾ

ಟಾಪ್ ನ್ಯೂಸ್

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.