ಸಾಕಾರಗೊಳ್ಳಲಿ ಸಾರಕರೆ ಸೇತುವೆ ಕನಸು
Team Udayavani, May 17, 2018, 12:38 PM IST
ಸವಣೂರು: ಪುತ್ತೂರು ತಾ| ಪುಣ್ಚಪ್ಪಾಡಿ ಗ್ರಾಮದ ಸಾರಕರೆ, ಕೆಯ್ಯೂರು ಗ್ರಾಮದ ಓಲೆಮುಂಡೋವು ನಡುವೆ ಗೌರಿ ಹೊಳೆ ಹರಿಯುತ್ತಿದೆ. ಹೊಳೆಗೆ ಅಡ್ಡಲಾಗಿ ಸೇತುವೆ ನಿರ್ಮಿಸುವಂತೆ ಗ್ರಾಮಸ್ಥರು ಅನೇಕ ಬಾರಿ ಸಂಬಂಧಪಟ್ಟ ಜನಪ್ರತಿನಿಧಿ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಗ್ರಾಮ ಸಭೆಗಳಲ್ಲಿ ಸೇತುವೆ ಬೇಡಿಕೆ ಕುರಿತು ನಿರಂತರವಾಗಿ ಪ್ರಸ್ತಾಪವಾಗುತ್ತಿದ್ದರೂ ಇಲ್ಲಿಯ ತನಕ ಯಾವುದೇ ರೀತಿಯ ಸ್ಪಂದನೆ ದೊರೆಯದೇ ಕನಸಾಗಿಯೇ ಉಳಿದಿದೆ.
ಗೌರಿ ಹೊಳೆಗೆ ಸೇತುವೆ ನಿರ್ಮಾಣಗೊಂಡಲ್ಲಿ ಕೆಯ್ಯೂರು, ತಿಂಗಳಾಡಿ ಕುಂಬ್ರ ಭಾಗಗಳಿಗೆ ಹೆಚ್ಚು ಅನುಕೂಲವಾಗುತ್ತಿತ್ತು. ಈ ಸೇತುವೆ ಯನ್ನು ಸಂಪರ್ಕಿಸುವ ಕುಂಬ್ರ- ತಿಂಗಳಾಡಿ- ಓಲೆಮುಂಡೋವು ರಸ್ತೆ ಅಗಲೀ ಕರಣಗೊಂಡು ಡಾಮರೀಕರಣ ವಾಗಿದ್ದರೆ, ಸವಣೂರು- ಪುಣ್ಚಪ್ಪಾಡಿ- ಸಾರಕರೆ ಸಂಪರ್ಕಿಸುವ 4 ಕಿ.ಮೀ. ಡಾಮರೀಕರಣ ವಾಗದೆ ರಸ್ತೆ ತೀರಾ ಹದಗೆಟ್ಟಿದೆ.
ಭರವಸೆ ಇದೆ
ಸೇತುವೆ ನಿರ್ಮಿಸುವಂತೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಬಹುದಿನಗಳ ನಮ್ಮ ಕನಸು ನನಸಾದಲ್ಲಿ ಗ್ರಾಮ ಅಭಿವೃದ್ಧಿ ಹೊಂದಲಿದೆ. ಈ ಬಾರಿ ಸೇತುವೆಯ ಕನಸು ಈಡೇರುವ ಭರವಸೆ ಇದೆ.
– ಗಿರಿಶಂಕರ್ ಸುಲಾಯ
ಸವಣೂರು ಗ್ರಾ.ಪಂ. ಸದಸ್ಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ