ಬಿ.ಸಿ.ರೋಡ್‌-ಪಾಣೆಮಂಗಳೂರು ರಸ್ತೆ: ಕಸದ ಸಮಸ್ಯೆ


Team Udayavani, May 15, 2018, 8:40 AM IST

Garbage-14-5.jpg

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಬಿ.ಸಿ. ರೋಡ್‌ ಮುಖ್ಯವೃತ್ತದಲ್ಲಿ ಪಾಣೆಮಂಗಳೂರು ಕಡೆಗೆ ಹೋಗುವ ರಸ್ತೆಯ ಒಂದು ಬದಿ ಪುರಸಭೆಯ ಕಸದ ತೊಟ್ಟಿಯಾಗುವ ಮೂಲಕ ಸಮಸ್ಯೆಯ ಕೇಂದ್ರವಾಗಿ ಕಾಡುತ್ತಿದೆ. ಸುಮಾರು ಎರಡು ದಶಕಗಳಿಂದ ನಗರದ ಕಸದ ತೊಟ್ಟಿಯಾಗಿದ್ದ ಬಿ.ಸಿ. ರೋಡಿನ ಬಂಟ್ವಾಳ ಪೇಟೆಯ ಕಡೆಗೆ ಹೋಗುವ ರಸ್ತೆಯ ತ್ಯಾಜ್ಯಗುಂಡಿಯನ್ನು ಜೋಡುಮಾರ್ಗ ಉದ್ಯಾನವನವಾಗಿ ಪರಿವರ್ತಿಸಿದ ಬಳಿಕ ಕಸವನ್ನು ಪಾಣೆಮಂಗಳೂರು ಕಡೆಗೆ ಹೋಗುವ ರಸ್ತೆಯ ಇನ್ನೊಂದು ಬದಿಗೆ ಪುರಸಭೆಯೇ ಸ್ಥಳಾಂತರಿಸಿತ್ತು. ಈಗ ಅಲ್ಲಿಯ ದುರ್ನಾತ ಹೆದ್ದಾರಿಗೂ ರಾಚುತ್ತಿದೆ. ರಸ್ತೆಯಲ್ಲಿ ನಡೆದು ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಬಿ.ಸಿ.ರೋಡಿನ ರೈಲ್ವೇ ಸ್ಟೇಶನ್‌, ಬಂಟ್ವಾಳ ರೋಟರಿ ಕ್ಲಬ್‌, ಲಯನ್ಸ್‌ ಕ್ಲಬ್‌, ರಿಕ್ಷಾ ಚಾಲಕರ ಸಂಘ, ಸರಕಾರಿ ಪ.ಪೂ. ಕಾಲೇಜುಗಳಿಗೆ ಹೋಗುವ ರಸ್ತೆಯಲ್ಲಿ ಪ್ರಸ್ತುತ ಕಸ ತುಂಬಿಕೊಳ್ಳುತ್ತಿದೆ.

ಎರಡೂ ಬದಿಯಲ್ಲಿ ಕಸ
ಈ ಕಸದಿಂದ ದುರ್ನಾತವಲ್ಲದೆ ಸೊಳ್ಳೆ, ಬೀದಿನಾಯಿ ಕಾಟ, ನೊಣಗಳ ಸಮಸ್ಯೆ ತೀವ್ರವಾಗಿದೆ. ರಸ್ತೆಯ ಎರಡೂ ಬದಿಯಲ್ಲಿ ಕಸವನ್ನು ಎಸೆಯಲಾಗುತ್ತಿದೆ. ಇದರ ಜತೆಗೆ ಪುರಸಭೆ ಅಲ್ಲಿಯೇ ಪುರಸಭೆ ಕಸ ಸಂಗ್ರಹದ ಲಾರಿಯನ್ನು ನಿಲ್ಲಿಸುವ ಮೂಲಕ ಸಮಸ್ಯೆಗೆ ಪೂರಕ ಪರಿಸ್ಥಿತಿ ಉಂಟು ಮಾಡುತ್ತಿದೆ ಎಂಬುದು ಸಾರ್ವಜನಿಕರು ಆರೋಪ.

ಪಾಣೆಮಂಗಳೂರು ಕಡೆಗೆ ಹೋಗುವ ರಸ್ತೆಯಲ್ಲಿ ಎಸೆಯಲಾದ ಕಸದಲ್ಲಿ ಮನೆ ಮತ್ತು ವಾಣಿಜ್ಯ ಕಟ್ಟಡಗಳ ತ್ಯಾಜ್ಯ, ವಿವಿಧ ರೀತಿಯ ಹಸಿಕಸ, ಕಾಂಪೋಸ್ಟ್‌ ಕಸ, ಮರುಬಳಕೆ ಮಾಡಬಹುದಾದ ಲೋಹ, ಬಾಟಲ್‌, ರಟ್ಟುಗಳು, ರಬ್ಬರ್‌, ಹಳೆಯ ಪತ್ರಿಕೆಗಳು ಕೂಡ ಇವೆ. ಅಪಾಯಕಾರಿ ತ್ಯಾಜ್ಯಗಳಾದ ಬ್ಯಾಟರಿ ಸೆಲ್‌, ಮೊಬೈಲ್‌ ಬಿಡಿ ಭಾಗ, ಕಂಪ್ಯೂಟರ್‌ ಬಿಡಿ ಭಾಗಗಳು, ಔಷಧಿ ಬಾಟಲಿಗಳಂತಹ ತ್ಯಾಜ್ಯ ಕೂಡ ಇಲ್ಲಿ ಎಸೆಯಲ್ಪಡುತ್ತಿದೆ. ಈ ಬಗ್ಗೆ ಬಂಟ್ವಾಳ ಪುರಸಭೆಯನ್ನು ವಿಚಾರಿಸಿದಾಗ, ಕಸದ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ದೊರೆತಿದೆ.

ನೀರು ಕಲುಷಿತ
ಇಲ್ಲಿನ ತೋಡಿನಲ್ಲಿ ಹರಿಯುವ ನೀರಿನಲ್ಲಿ ಬೆರಕೆ ಆಗುವ ಈ ಎಲ್ಲ ತ್ಯಾಜ್ಯವು ನೀರನ್ನು ಕಲುಷಿತ ಮಾಡುತ್ತಿದೆ. ಇನ್ನು ಮಳೆ ಆರಂಭವಾದರೆ ಇದೆಲ್ಲವೂ ಮಲಿನ ನೀರಿನೊಂದಿಗೆ ಸೇರಿ ನದಿಯನ್ನು ಸೇರುವ ಮೂಲಕ ರೋಗ ಹರಡಲು ಕಾರಣವಾಗುವ ಆತಂಕವೂ ಜನತೆಗೆ ಎದುರಾಗಿದೆ.

ಸ್ವಚ್ಛ – ಸ್ವಸ್ಥ ಯೋಜನೆ
ಸ್ವಚ್ಛ ಬಂಟ್ವಾಳ ರೂಪಿಸುವ ಉದ್ದೇಶದಿಂದ ಸ್ವಚ್ಛ ಬಂಟ್ವಾಳ-ಸ್ವಸ್ಥ ಬಂಟ್ವಾಳ ಯೋಜನೆ ರೂಪಿಸಿದೆ. ಇದರ ಪ್ರಕಾರ ನಾಗರೀಕರು ಯಾವುದೇ ಹಸಿ, ಒಣ ಕಸವನ್ನು ವಿಂಗಡಿಸಿ ನೀಡಿದರೆ, ವಿಲೇವಾರಿಗೆ ಉತ್ತಮ. ವಿಂಗಡಿಸಿ ನೀಡಿದರೆ ಪುರಸಭೆಯ ವಾಹನದಲ್ಲಿ ವಿಲೇ ಮಾಡಲಾಗುವುದು. ಬಂಟ್ವಾಳ ನಗರವನ್ನು ಸ್ವಚ್ಛವಾಗಿ ಉಳಿಸಿಕೊಳ್ಳಲು ನಾಗರೀಕರ ಸಹಾಯ, ಸಹಕಾರ ಅಗತ್ಯ.
– ರಾಯಪ್ಪ, ಮುಖ್ಯಾಧಿಕಾರಿ ಬಂಟ್ವಾಳ ಪುರಸಭೆ

— ರಾಜಾ ಬಂಟ್ವಾಳ

ಟಾಪ್ ನ್ಯೂಸ್

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.