ಉಪ್ಪಿನಂಗಡಿ: ಟ್ಯಾಂಕರ್ ವಾಲ್ ತೆರೆದು ಅನಿಲ ಸೋರಿಕೆ
Team Udayavani, Nov 4, 2019, 10:42 AM IST
ಉಪ್ಪಿನಂಗಡಿ: ಅನಿಲ ಟ್ಯಾಂಕರ್ ಒಂದರ ಮೇಲ್ಭಾಗದ ವಾಲ್ ಮುಚ್ಚಳ ಏಕಾಏಕಿ ತೆರೆದು ಭಾರೀ ಪ್ರಮಾಣದಲ್ಲಿ ಅನಿಲ ಸೋರಿಕೆಯಾಗಿ ಸ್ಥಳದಲ್ಲಿ ಆತಂಕ ಮೂಡಿಸಿದ ಘಟನೆ ಉಪ್ಪಿನಂಗಡಿ ಬಳಿಯ ಕರ್ವೇಲ್ ನಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಮಂಗಳೂರಿನಿಂದ ಬೆಂಗಳೂರಿಗೆ ಅಡುಗೆ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ಬೆಳಿಗ್ಗೆ 7.30ರ ಸುಮಾರಿಗೆ ಪೆರ್ಣೆ ಗ್ರಾಮದ ಕರ್ವೇಲು ಸಮೀಪದ ಚಲಿಸುತ್ತಿದ್ದ ವೇಳೆ ಏಕಾಎಕಿ ಮೇಲ್ಭಾಗದ ಮುಚ್ಚಳ ತೆರೆದುಕೊಂಡಿತ್ತು. ಇದರಿಂದ ಭಾರಿ ಪ್ರಮಾಣದಲ್ಲಿ ಅಡುಗೆ ಅನಿಲ ಹೊರಹೋಗಿದ್ದು ಸ್ಥಳದಲ್ಲಿ ಆತಂಕ ಸೃಷ್ಠಿಯಾಗಿತ್ತು.
ಮಾಹಿತಿ ತಿಳಿದ ತಕ್ಷಣ ಹೆಚ್ ಪಿಸಿಎಲ್ ನ ತುರ್ತು ಸೇವೆ ಸಿಬ್ಬಂಧಿ ಸ್ಥಳಕ್ಕೆ ಆಗಮಿಸಿ ಟ್ಯಾಂಕರ್ ನ ಮುಚ್ಚಳ ಮುಚ್ಚಿ ಗ್ಯಾಸ್ ಸೋರಿಕೆಯನ್ನು ನಿಲ್ಲಿಸಿದರು.
ಮಸೀದಿ ಧ್ವನಿವರ್ಧಕದಲ್ಲಿ ಸಂದೇಶ
ಗ್ಯಾಸ್ ಸೋರಿಕೆಯಾಗುತ್ತಿದ್ದಂತೆ ಪರಿಸರದ ಮನೆಗಳಲ್ಲಿ ಎಚ್ಚರದಿಂದಿರುವಂತೆ ಸ್ಥಳೀಯ ಮಸೀದಿಯ ಧ್ವನಿವರ್ಧಕದ ಮೂಲಕ ಸಂದೇಶ ನೀಡಲಾಯಿತು.