12 ಗಂಟೆ ಸಮುದ್ರದಲ್ಲಿ ಈಜಿ ಬದುಕಿದ ಗೊರಯ್ಯ


Team Udayavani, Nov 1, 2019, 4:28 AM IST

47

ಪಣಂಬೂರು: ಸಮುದ್ರದಲ್ಲಿ ಸತತ 12 ಗಂಟೆ ಈಜಾಡುತ್ತಾ ನೆರವಿಗಾಗಿ ಎದುರು ನೋಡುತ್ತಿದ್ದ ಮೀನುಗಾರ ಒಡಿಶಾದ ಲೊಂಡಾ ಗೊರಯ್ಯನಿಗೆ ದೇವರ ದಯೆ ಇತ್ತು ಎಂದರೂ ತಪ್ಪಾಗಲಾರದು. ಕೊನೆಗೂ ಕೋಸ್ಟ್‌ ಗಾರ್ಡ್‌ ಹಡಗು ಅತನನ್ನು ರಕ್ಷಿಸುವಲ್ಲಿ ಸಫಲವಾಯಿತು.

ಒಂದೆರಡು ಗಂಟೆ ನದಿ, ತೊರೆಗಳಲ್ಲಿ ಸತತವಾಗಿ ಈಜಲು ಸಾಧ್ಯವಾಗದು. ಇನ್ನು ಸಮುದ್ರದಲ್ಲಿ ಸಾಧ್ಯವೆ? ಆದರೆ ಕ್ಯಾರ್‌ ಚಂಡ ಮಾರುತದ ಹೊಡೆತದ ನಡುವೆಯೂ ಲೊಂಡ ಗೊರಯ್ಯ ಬದುಕಲೇ ಬೇಕು ಎಂಬ ಹಠದಿಂದ ನೆರವಿವಾಗಿ ಎದುರು ನೋಡುತ್ತಲೇ ಇದ್ದರು. ಕೊನೆಗೂ ಕೋಸ್ಟ್‌ಗಾರ್ಡ್‌ನ ಹಡಗೊಂದು ಹತ್ತಿರದಲ್ಲಿ ಬರುತ್ತಿದ್ದಂತೆ ನೆರವಿವಾಗಿ ಕೂಗಿಕೊಂಡು ಹೇಗೂ ಬದುಕಿ ಬಂದರು. ಸತತ 12 ಗಂಟೆ ಸಮುದ್ರದಲ್ಲಿ ಈಜಾಡಿ ಬದುಕುಳಿದ ಈತನ ಚಾಕಚಾಕ್ಯತೆಯ ಬಗ್ಗೆ ಕೋಸ್ಟ್‌ ಗಾರ್ಡ್‌ ಅ ಧಿಕಾರಿಗಳೂ ಆಶ್ಚರ್ಯ, ಸಂತಸ ವ್ಯಕ್ತಪಡಿಸಿದ್ದಾರೆ.

ಘಟನೆ ವಿವರ
ಈ ಘಟನೆ ನಡೆದದ್ದು ಅ. 23ರಂದು ತೊಕ್ಕೊಟಿನ ಕಿರಣ್‌ ಡಿ’ಸೋಜಾ ಅವರ ಶೈನಾಲ್‌ ಏಂಜಲ್‌ ಮೀನುಗಾರಿಕಾ ದೋಣಿಯಲ್ಲಿ ಮಂಗಳೂರು ದಕ್ಕೆಯಿಂದ ಮೀನುಗಾರಿಕೆಗೆ ಬೆಳ್ಳಂಬೆಳಗ್ಗೆ ಸಹವರ್ತಿ ಕಾರ್ಮಿಕರೊಂದಿಗೆ ಹೊರಟಿದ್ದ ಅದು ಬೆಳಗಿನ ಜಾವ 3 ಗಂಟೆ. ದೋಣಿಯಲ್ಲಿ ಪತ್ನಿಯೊಂದಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಾ ಕುಳಿತಿದ್ದ ಆದರೆ ಇದಕ್ಕಿದ್ದಂತೆ ಮೊಲ್‌ ದೋಣಿಯಲ್ಲೇ ಇದ್ದರೂ ಗೊರಯ್ಯ ಕಾಣದಂತಾದ. ತತ್‌ಕ್ಷಣ ದೋಣಿಯಲ್ಲಿದ್ದವರು ಈತನನ್ನು ದೋಣಿಯ ಒಳಗೆ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಅನಾಹುತ ಆಗಿಹೋಗಿದೆ ಎಂದು ಅರಿವಾದದ್ದೇ ತಡ ದೋಣಿಯನ್ನು ಹಿಂದಿರುಗಿಸಿ ಬಂದ ದಾರಿಯಲ್ಲಿ ಹುಡುಕಲಾರಂಭಿ ಸಿದರು. ಆದರೆ ಈತನ ಸುಳಿವು ಪತ್ತೆಯಾಗದೆ ಇದ್ದಾಗ, ಕಿರಣ್‌ ಡಿ’ಸೋಜಾಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು. ಮೀನುಗಾರ ಗೊರಯ್ಯ ನಾಪತ್ತೆಯಾದ ಸುದ್ದಿಯನ್ನು ಕೋಸ್ಟ್‌ಗಾರ್ಡ್‌ಗೆ ತಿಳಿಸಲಾಯಿತು. ಸಮುದ್ರದಲ್ಲಿ ಕಣ್ಗಾವಲು ನಿರತವಾಗಿದ್ದ ಸಾವಿತ್ರಿ ಬಾೖ ಫ‌ುಲೆ ಕೋಸ್ಟ್‌ಗಾರ್ಡ್‌ ಹಡಗು ಕಾರ್ಯಾಚರಣೆಗೆ ಇಳಿಯಿತು. ಮಲ್ಪೆ ಲೈಟ್‌ ಹೌಸ್‌ನಿಂದ 10 ನಾಟಿಕಲ್‌ ಮೈಲು ದೂರದಲ್ಲಿ ಸಂಜೆ 3 ಗಂಟೆಗೆ ಈತನನ್ನು ಪತ್ತೆ ಹಚ್ಚಿ ರಕ್ಷಿಸಲಾಯಿತು. ಕ್ಯಾರ್‌ಚಂಡ ಮಾರುತದ ನಡುವೆ ಸಮುದ್ರದ ಹತ್ತಿರದಿಂದಲೂ ಏನೂ ಕಾಣದಂತ ಸ್ಥಿತಿ. ಆದರೂ ಸಾವಿತ್ರಿ ಬಾಯಿ ಫ‌ುಲೆ ಹಡಗಿನ ಕಮಾಂಡೆಂಟ್‌ ಭವಾನಿ ದತ್‌ ಅವರ ನೇತೃತ್ವದ ಕೋಸ್ಟ್‌ಗಾರ್ಡ್‌ ಸಿಬಂದಿ ಸಾಹಸಮಯವಾಗಿ ಈತನನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು.

ಸಾವಿತ್ರಿ ಬಾೖ ಫ‌ುಲೆ ಕಮಾಂಡೆಂಟ್‌ ಭವಾನಿ ದತ್‌ ಅವರು ಕಾರ್ಯಾಚರಣೆ ಮಾಹಿತಿ ನೀಡಿ ಗೊರಯ್ಯ ಅವರನ್ನು ಪತ್ತೆ ಹಚ್ಚಿ ಪ್ರಥಮ ಚಿಕಿತ್ಸೆ ನೀಡಲಾಯಿತು ಎಂದರು. ಕೋಸ್ಟ್‌ಗಾರ್ಡ್‌ನ ಕ್ಯಾರ್‌ ಚಂಡ ಮಾರುತದ ಸಂದರ್ಭದ ಕಾರ್ಯಚರಣೆ ಇದೀಗ ಸರ್ವತ್ರ ಶ್ಲಾಘನೆಗೆ ಪಾತ್ರವಾಗುತ್ತಿದೆ.

ಅಧಿಕಾರಿಗಳ ನೆರವು ಶ್ಲಾಘನೀಯ
ಕಿರಣ್‌ ಡಿ’ಸೋಜಾ ಕೋಸ್ಟ್‌ ಗಾರ್ಡ್‌ ಅಧಿಕಾರಿಗಳ ನೆರವನ್ನು ಶ್ಲಾಘಿಸಿರುವುದಲ್ಲದೆ, ಅಭಿನಂದಿಸಿ, ಕೃತಜ್ಞತೆ ಸಲ್ಲಿಸಿದರು. ಸಮುದ್ರದಲ್ಲಿ ಪ್ರಕ್ಷುಬ್ಧ ಸ್ಥಿತಿಯಲ್ಲಿಯೂ ಇವರ ಕಾರ್ಯ ಚಣೆಯಿಂದಾಗಿ ಒಂದು ಜೀವವನ್ನು ಉಳಿಸಿಕೊಂಡಿದ್ದೇವೆ. ಆತ ತನ್ನ ಮನೆಯಲ್ಲಿ ದೀಪಾವಳಿ ಆಚರಿಸಿಕೊಂಡಿದ್ದಾರೆ ಎಂದು ಹೃದಯ ತುಂಬಿ ನುಡಿದರು.

ಟಾಪ್ ನ್ಯೂಸ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqwewq

Congress ನಿಂದ ಬದುಕು; ಬಿಜೆಪಿಯದ್ದು ಭಾವನೆಗಳ ಚೆಲ್ಲಾಟ: ಡಾ| ಭಂಡಾರಿ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

6-court

Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

20-shirva-1

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.