ಜಿಎಸ್‌ಟಿ: ಮಾರುಕಟ್ಟೆ  ಕೊಂಚ ತಲ್ಲಣ


Team Udayavani, Jul 2, 2017, 3:45 AM IST

tallana.jpg

ಮಂಗಳೂರು/ಉಡುಪಿ: ಕೇಂದ್ರ ಸರಕಾರದ ಏಕರೂಪದ ತೆರಿಗೆ ನೀತಿ ಜಿಎಸ್‌ಟಿ ಜಾರಿಯಿಂದ ವ್ಯಾಪಾರ ಉದ್ಯಮದಲ್ಲಿ ಶನಿವಾರ ಕೊಂಚ ತಲ್ಲಣ ಉಂಟಾಗಿದೆ. ತಮ್ಮ ಬಿಲ್ಲಿಂಗ್‌ ವ್ಯವಸ್ಥೆಯನ್ನು ಜಿಎಸ್‌ಟಿಗೆ ಅನ್ವಯಿ ಸುವ ನಿಟ್ಟಿನಲ್ಲಿ ಕೆಲವೊಂದು ಮಳಿಗೆಗಳಲ್ಲಿ ಕೈಬರಹದ ಬಿಲ್‌ ನೀಡಿದರೆ, ಇನ್ನು ಕೆಲವು ಮಳಿಗೆಗಳು ಶನಿವಾರ ವ್ಯವಹಾರ ಸ್ಥಗಿತಗೊಳಿಸಿದ್ದವು.

ಸಣ್ಣಪುಟ್ಟ ವ್ಯಾಪಾರಿಗಳಿಗೆ ಜಿಎಸ್‌ಟಿಯಿಂದ ಯಾವುದೇ ತೊಂದರೆ ಉಂಟಾಗಲಿಲ್ಲ; ವ್ಯವಹಾರ ಎಂದಿನಂತೆ ಸರಾಗವಾಗಿತ್ತು. ಚಿನ್ನದ ತೆರಿಗೆ ಕೊಂಚ ಏರಿಕೆಯಾದ ಹಿನ್ನೆಲೆಯಲ್ಲಿ ವ್ಯವಹಾರ ಇಳಿಕೆಯಾಗಿತ್ತು. ಮುಂದಿನ 2 ವಾರಗಳ ಕಾಲ ವ್ಯಾಪಾರ ಹೀಗೆ ಕಡಿಮೆ ಇರಬಹುದು ಎಂದು ಚಿನ್ನ ವರ್ತಕರು ಅಭಿಪ್ರಾಯಿಸುತ್ತಾರೆ. ಜನರಿಗೆ ಜಾಗೃತಿಯ ಕೊರತೆಯಿಂದ ವ್ಯಾಪಾರ ಕಡಿಮೆಯಾಗಿದೆ ಎಂದು ಉಡುಪಿ ಚಿನ್ನದ ವರ್ತಕರು ಹೇಳಿದ್ದಾರೆ.

ಸಣ್ಣ ಹೊಟೇಲ್‌ಗ‌ಳಲ್ಲಿ ಸದ್ಯಕ್ಕೆ ಯಾವುದೇ ದರ ವ್ಯತ್ಯಾಸವಾಗದಿದ್ದರೂ ದೊಡ್ಡ ಹೊಟೇಲ್‌ಗ‌ಳಲ್ಲಿ ಜಿಎಸ್‌ಟಿಯನ್ವಯ ಬೆಲೆ ಏರಿಕೆಯಾಗಿತ್ತು. ಜಿಎಸ್‌ಟಿಯನ್ವಯ ಒಂದೊಂದು ಉತ್ಪನ್ನಗಳಿಗೆ ಬೇರೆ ಬೇರೆ ರೀತಿಯ ತೆರಿಗೆ ಬೀಳುವ ಹಿನ್ನೆಲೆಯಲ್ಲಿ ಪ್ರತಿ ವಿಧದ ತೆರಿಗೆಗಳಿಗೆ ಒಂದೊಂದು ಕೋಡ್‌ ನೀಡಲಾಗಿದೆ. ಅದನ್ನು ಉತ್ಪನ್ನಗಳಿಗೆ ಅನ್ವಯಿಸುವ ಹಿನ್ನೆಲೆಯಲ್ಲಿ ಕೆಲ ವೊಂದು ಮಳಿಗೆಗಳು ಶನಿವಾರ ವ್ಯಾಪಾರ ನಡೆಸಲಿಲ್ಲ.

ಉಡುಪಿ ಕಿದಿಯೂರು ಹೊಟೇಲ್‌ನಲ್ಲಿ ನಾನ್‌ಎಸಿ ರೂಮಿನ ದರ 1,230ರಿಂದ 1,175 ರೂ.ಗೆ, ಎಸಿ ರೂಮಿನ ದರ 3,000ದಿಂದ 2,770 ರೂ.ಗೆ ಇಳಿದಿದೆ. “ಹಿಂದೆ ವಿವಿಧ ತೆರಿಗೆಯನುಸಾರ ಶೇ. 24 ಕಟ್ಟಬೇಕಿತ್ತು. ಈಗ ಶೇ. 18 ಕಟ್ಟಿದರೆ ಸಾಕು. ಹೀಗಾಗಿ ದರ ಕಡಿಮೆಯಾಗಿದೆ’ ಎಂದು ಮಾಲಕ ಭುವನೇಂದ್ರ ಕಿದಿಯೂರು ಹೇಳಿದ್ದಾರೆ.

ಚಿತ್ರ ಮಂದಿರಗಳಲ್ಲಿ ಮಾತ್ರ ಟಿಕೆಟ್‌ ದರ ಏರಿಕೆಯಾಗಿದೆ. ಇದರಿಂದ ಕನ್ನಡ ಚಿತ್ರಗಳಿಗೆ ದೊಡ್ಡ ಹೊಡೆತ ಎಂದು ಉಡುಪಿ ಚಿತ್ರಮಂದಿರದ ಮೂಲಗಳು ತಿಳಿಸಿವೆ. ಮೆಡಿಕಲ್‌ ಶಾಪ್‌ಗ್ಳಲ್ಲಿ ಹೆಚ್ಚಿನ ವ್ಯತ್ಯಾಸವೇನಿಲ್ಲ. 

ಈ ರೀತಿಯಲ್ಲಿ ನಗರದ ದೊಡ್ಡ ದೊಡ್ಡ ಉದ್ಯಮಗಳಲ್ಲಿ ಕೊಂಚ ಮಟ್ಟಿನ ತಲ್ಲಣ ಉಂಟಾಗಿತ್ತು. ಆದರೆ ಜಿಎಸ್‌ಟ್‌ಯಿಂದ ಉದ್ಯಮದ ಮೇಲೆ ಗಂಭೀರ ಪರಿಣಾಮ ಉಂಟಾಗಿಲ್ಲ. ಹೊಸ ಪದ್ಧತಿಗೆ ಜನರು ಪೂರ್ಣ ಪ್ರಮಾಣದಲ್ಲಿ ಒಗ್ಗಿಕೊಳ್ಳಬೇಕಾದರೆ ಇನ್ನೊಂದಷ್ಟು ಸಮಯ ಕಾಯಬೇಕಾಗುತ್ತದೆ. ಕೆಳ ಹಾಗೂ ಮಧ್ಯಮ ಸ್ತರದ ಜನರಿಗೆ ಜಿಎಸ್‌ಟಿಯಿಂದ ಅನುಕೂಲವಾಗಲಿದೆ ಎಂದು ಆರ್ಥಿಕ ತಜ್ಞರೊಬ್ಬರು ಅಭಿಪ್ರಾಯಿಸಿದ್ದಾರೆ.

ತಡರಾತ್ರಿ ವ್ಯವಹಾರ ನಡೆಸಿದ ಮಾಲ್‌ಗ‌ಳು
ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆಯಾಗಿದ್ದರೂ ಅದು ಜಿಎಸ್‌ಟಿಯಿಂದ ಅಲ್ಲ ಎಂದು ಹೇಳಲಾಗುತ್ತಿದೆ. ಉಡುಪಿಯಲ್ಲಿ ಜೂ. 16ರಂದು ಪೆಟ್ರೋಲ್‌ ದರ 69.63 ರೂ.ನಿಂದ ಜೂ. 30ಕ್ಕೆ 63.34 ರೂ.ಗೆ, ಡೀಸೆಲ್‌ ದರ 57.79 ರೂ.ನಿಂದ 53.91 ರೂ.ಗೆ ಇಳಿಕೆಯಾಗಿದೆ. ಆದರೆ ಆಯಿಲ್‌ ದರ ಏರಿಕೆಯಾಗಿದೆ. ಶುಕ್ರವಾರ ತಡರಾತ್ರಿಯ ವರೆಗೂ ಆಫರ್‌ಗಳನ್ನು ನೀಡಿದ್ದ ಮಾಲ್‌ಗ‌ಳಲ್ಲಿ ಶನಿವಾರ ಆಫರ್‌ಗಳು ಇರಲಿಲ್ಲ. ವ್ಯಾಪಾರದಲ್ಲಿ ಕೊಂಚ ವ್ಯತ್ಯಾಸವಾಗಿದ್ದರೂ ಜನಸಂದಣಿಯಲ್ಲಿ ಹೆಚ್ಚಿನ ವ್ಯತ್ಯಾಸ ಇರಲಿಲ್ಲ. ಜನರು ಎಂದಿನಂತೆ ಬರುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಉಡುಪಿ ಬಿಗ್‌ ಬಜಾರ್‌ನಲ್ಲಿ ಜೂ. 30 ಮಧ್ಯರಾತ್ರಿ ಬಳಿಕ ನಡೆದ ಎರಡು ಗಂಟೆಗಳ ವ್ಯಾಪಾರದಲ್ಲಿ 800 ಗ್ರಾಹಕರು ವ್ಯವಹಾರ ನಡೆಸಿದರು. ಜು. 1ರಂದೂ ಜನರು ವ್ಯಾಪಾರ ನಡೆಸಿದ್ದರು.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.