ಮಂಗಳೂರಿನಲ್ಲೂ ಗುರ್ಮಿತ್‌ ಪ್ರವಚನ!


Team Udayavani, Aug 28, 2017, 7:25 AM IST

Gurmeet-Ram-Rahim-Singh–22.jpg

ಮಂಗಳೂರು: ಅತ್ಯಾಚಾರ ಆರೋಪ ಸಾಬೀತಾಗಿರುವ, ಡೇರಾ ಸಚ್ಚಾ ಸೌದಾದ ಮುಖ್ಯಸ್ಥ, ಸ್ವಘೋಷಿತ ದೇವ ಮಾನವ, ವರ್ಣರಂಜಿತ ವ್ಯಕ್ತಿ ಗುರ್ಮಿತ್‌ ರಾಂ ರಹೀಂ ಸಿಂಗ್‌ ಸುಮಾರು 10 ವರ್ಷದ ಹಿಂದೆ ಮಂಗಳೂರಿಗೆ ಆಗಮಿಸಿ, ಸಾವಿರಾರು ಭಕ್ತರಿಗೆ ವಿಶೇಷ ಪ್ರವಚನ ನೀಡಿದ್ದರು. ಎರಡು ದಿನ ಮಂಗಳೂರಿನಲ್ಲಿ ವಾಸ್ತವ್ಯ ಹೂಡಿ ವಿಶೇಷ ಪ್ರವಚನದಲ್ಲಿ ಭಾಗವಹಿಸಿದ್ದರು.

ಇದಕ್ಕೂ ಪೂರ್ವದಲ್ಲಿ ಕೆಲವು ವರ್ಷ ಗಳ ಹಿಂದೆ ಗುರ್ಮಿತ್‌ ಮಂಗಳೂರಿನ ನೆಹರೂ ಮೈದಾನದಲ್ಲಿ ಸಾರ್ವಜನಿಕ ಪ್ರವಚನ ನೀಡಿದ್ದರು. ಆ ಬಳಿಕ ಗುರ್ಮಿತ್‌ ಅವರ ಸಂಬಂಧಿಕರೊಬ್ಬರು ಮಂಗಳೂರಿನಲ್ಲಿರುವ ಕಾರಣದಿಂದ ನಗರಕ್ಕೆ ಭೇಟಿ ನೀಡಿದ್ದರು.
ಡೇರಾ ಸಚ್ಚಾ ಸೌದಾ ಎಂಬ ಆಧ್ಯಾತ್ಮಿಕ ಪಂಥವನ್ನು ಮನ್ನಡೆಸಿಕೊಂಡು, ಹೊರ ದೇಶ ಹಾಗೂ ದೇಶದ 46 ಕಡೆಗಳಲ್ಲಿ ಶಾಖೆಗಳನ್ನು ಮಾಡಿ ಗುರ್ಮಿತ್‌ ರಾಂ ರಹೀಂ ಸಿಂಗ್‌ ಮಾನವೀಯ ಸಂದೇಶ ಗಳನ್ನು ಸಾರುತ್ತ ಬಂದಿದ್ದರು. ಇದ ರನ್ವಯ ಗುರ್ಮಿತ್‌ ಅವರ ಅನುಯಾಯಿಗಳು ಮಂಗ ಳೂರಿನಲ್ಲಿ ಪ್ರವಚನ ಆಯೋ ಜಿಸಿದ್ದರು.

ಭಾರೀ ಜನಾಕರ್ಷಣೆ
ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಮೊದಲ ದಿನ ಆಯೋ ಜಿಸಿದ ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್‌ ಪಹರೆಯ ಮಧ್ಯೆ ಗುರ್ಮಿತ್‌ ಸಿಂಗ್‌ ಆಗಮಿಸಿದ್ದರು. ಸ್ಥಳೀಯ ಪೊಲೀಸರ ಜತೆಗೆ ಗುರ್ಮಿತ್‌ ಅವರ ಖಾಸಗಿ ಅಂಗರಕ್ಷರೂ ಜತೆಯಲ್ಲಿದರು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಸಾವಿರ ಕ್ಕಿಂತಲೂ ಮಿಕ್ಕಿ ಜನ ಭಾಗವಹಿಸಿದ್ದರು. ಗುರ್ಮಿತ್‌ ಸಿಂಗ್‌ ವೇದಿಕೆಗೆ ಬರು ತ್ತಿದ್ದಂತೆ ಕರತಾಡನ, ಶಿಳ್ಳೆಗಳ ಮೂಲಕ ಜನರು ಸ್ವಾಗತಿಸಿದರು. ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಕ್ಖ್, ಧರ್ಮಗಳ ಸಾರವನ್ನು ಪ್ರಸ್ತಾವಿಸುವ ಮೂಲಕ ಗುರ್ಮಿತ್‌ ಸಿಂಗ್‌ ಸೇರಿದ್ದ ಜನರನ್ನು ಆಕರ್ಷಿತರನ್ನಾಗಿಸಿದ್ದರು. ಮಾನ ವೀಯ ಸಂದೇಶಗಳನ್ನು ಈ ಸಭೆ ಯಲ್ಲಿ ನೀಡಿದ್ದರು. ಗುರ್ಮಿತ್‌ ಹಿಂದಿ ಸಂದೇಶ ವನ್ನು ಮಂಗಳೂರಿನಲ್ಲಿ ಉಪನ್ಯಾಸಕರಾಗಿದ್ದ ಬೈಕಾಡಿ ಜನಾರ್ದನ ಆಚಾರ್‌ ಅವರು ಭಾಷಾಂತರಿಸಿದ್ದರು.

ಮರುದಿನ ಸಂಜೆ ಸುರತ್ಕಲ್‌ ಮೈದಾನದಲ್ಲಿ ಗುರ್ಮಿತ್‌ ಸಿಂಗ್‌ ಪ್ರವಚನ ಆಯೋಜನೆಗೊಂಡಿತ್ತು. ಕರಾವಳಿ ಹಾಗೂ ಹೊರರಾಜ್ಯದ ಗುರ್ಮಿತ್‌ ಅನುಯಾಯಿಗಳು ಈ ಕಾರ್ಯ ಕ್ರಮವನ್ನು ಸಂಘಟಿಸಿದ್ದರು. ಇಲ್ಲೂ ಸಾವಿರಾರು ಭಕ್ತರು ಕರಾವಳಿ ಹಾಗೂ ಬೇರೆ ಬೇರೆ ಊರಿನಿಂದ ಆಗಮಿಸಿದ್ದರು. ಎಲ್ಲ ಧರ್ಮಗಳ ಮಾನ ವೀಯ ಅಂಶಗಳನ್ನು ಆಯ್ಕೆ ಮಾಡಿ, ಭಾಷಣದಲ್ಲಿ ಪ್ರಸ್ತಾವ ಮಾಡಲಾಗಿತ್ತು.

ಮಂಗಳೂರು ಹಾಗೂ ಸುರತ್ಕಲ್‌ ಕಾರ್ಯಕ್ರಮ ಆದ ಬಳಿಕ ಮರುದಿನ ಮಡಿಕೇರಿ ಹಾಗೂ ಮೈಸೂರಿನಲ್ಲಿ ಪ್ರವಚನ ಆಯೋಜಿಸಲಾಗಿತ್ತು. ಇದ ರಲ್ಲೂ ಬೈಕಾಡಿ ಅವರು ಭಾಷಾಂತರ ಮಾಡಲು ಸಹಕರಿಸಿದ್ದರು.

ಮಾಲ್‌ ಸುತ್ತಾಡಿದ್ದ  ಗುರ್ಮಿತ್‌ ಸಿಂಗ್‌!
ಆಧ್ಯಾತ್ಮಿಕ ಸಾಧನೆ ಮಾಡಿದ ಗುರ್ಮಿತ್‌ ಸಿಂಗ್‌ ತನ್ನ ಐಷಾರಾಮಿ ಜೀವನದ ಮೂಲಕವೇ ಗುರುತಿಸಿಕೊಂಡವರು. ಸಿನೆಮಾ, ಮಾಲ್‌, ಕಾರು, ಬೈಕ್‌ಗಳ ಶೋಕಿ ಸೇರಿ ದಂತೆ ಬಗೆ ಬಗೆಯ ಅವತಾರಗಳ ಮೂಲಕ ವಿಜೃಂಭಿಸಿ ಸುದ್ದಿಯಲ್ಲಿದ್ದರು. ಕರಾ ವಳಿ ಭಾಗ ದಲ್ಲಿ ಪ್ರವಚನ ನೀಡುವ ಆಶಯ ದಿಂದ ಮಂಗಳೂರಿಗೆ ಆಗಮಿಸಿದ ಗುರ್ಮಿತ್‌ ಇಲ್ಲಿನ ಮಾಲ್‌ ಗಳಿಗೆ ಭೇಟಿ ನೀಡು  ವು ದನ್ನು ಮರೆಯ ಲಿಲ್ಲ. ತನ್ನ ಬೆಂಬಲಿಗರ ಸುಮಾರು 10ಕ್ಕೂ ಅಧಿಕ ಐಷಾರಾಮಿ ಕಾರುಗಳ ಜತೆಗೆ ಮಂಗಳೂರು ಸುತ್ತಾಡಿ, ಮಾಲ್‌ಗೆ ಭೇಟಿ ನೀಡಿದ್ದರು. ಗುರ್ಮಿತ್‌ ಆಗಮನದ ಹಿನ್ನೆಲೆಯಲ್ಲಿ ಮಾಲ್‌ನಲ್ಲಿ ವ್ಯಾಪಕ ಪೊಲೀಸ್‌ ಬಂದೋಬಸ್ತ್ ಮಾಡ ಲಾಗಿತ್ತು ಹಾಗೂ ಅಲ್ಲಿದ್ದ ಜನರನ್ನು ತೆರವುಗೊಳಿಸಲಾಗಿತ್ತು.

–  ದಿನೇಶ್‌ ಇರಾ

ಟಾಪ್ ನ್ಯೂಸ್

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqwqe

Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

6-court

Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.