ಬಿರುಸುಗೊಂಡ ಮುಂಗಾರು ಮಳೆ


Team Udayavani, Jun 20, 2018, 1:58 PM IST

20-june-12.jpg

ನಗರ: ಮಂಗಳವಾರ ಪುತ್ತೂರಿನಾದ್ಯಂತ ಭಾರೀ ಮಳೆ ಸುರಿದಿದೆ. ಬೆಳಗ್ಗೆಯಿಂದಲೇ ಮಳೆ ಇತ್ತಾದರೂ ನಡುವೆ ಸ್ವಲ್ಪ ಬಿಡುವು ಪಡೆದುಕೊಂಡಿತು. 11 ಗಂಟೆ ಸುಮಾರಿಗೆ ಮತ್ತೆ ಶುರುವಾದ ಮಳೆ, ನಿರಂತರವಾಗಿ ಸುರಿಯಿತು. ಪುತ್ತೂರು ಗ್ರಾಮೀಣ ಭಾಗವೇ ಆಗಿರುವುದರಿಂದ, ಮಳೆ ಹಾನಿ ದೊಡ್ಡ ಪ್ರಮಾಣದಲ್ಲಿ ಸಂಭವಿಸುವುದಿಲ್ಲ. ಸಾಮಾನ್ಯವಾಗಿ ಕಂಡುಬರುವಂತೆ ಗುಡ್ಡ ಕುಸಿತ, ಚರಂಡಿ ಬ್ಲಾಕ್‌ ಮೊದಲಾದ ಸಮಸ್ಯೆಗಳು ಆಗಿವೆ.

ಬೈಪಾಸ್‌ ಜೈನ ಭವನ ಬಳಿ ಗುಡ್ಡ ಜರಿದು, ವಿಠ್ಠಲ  ಪ್ರಭು ಅವರ ಮನೆಗೆ ಹೋಗುವ ರಸ್ತೆ ಬ್ಲಾಕ್‌ ಆಗಿದೆ. ಗುಡ್ಡದ ಮೇಲ್ಭಾಗದಲ್ಲಿ ಇವರ ಮನೆಯಿದೆ. ಮಣ್ಣು ಸಂಪೂರ್ಣ ಬಿದ್ದಿರುವುದರಿಂದ ದಾರಿ ಇಲ್ಲದಂತಾಗಿದೆ. ಇನ್ನು ಪರ್ಯಾಯ ದಾರಿಯ ವ್ಯವಸ್ಥೆ ಆಗಬೇಕಷ್ಟೇ. ಆದರೆ ಹೆದ್ದಾರಿ ಸಂಪರ್ಕಕ್ಕೆ ತೊಡಕಾಗಿಲ್ಲ. 

ಪುತ್ತೂರು ಸರಕಾರಿ ಆಸ್ಪತ್ರೆ ಮುಂಭಾಗದಲ್ಲಿ ಚರಂಡಿ ಬ್ಲಾಕ್‌ ಆಗಿ, ನೀರು ರಸ್ತೆಯಲ್ಲೇ ನಿಂತಿದೆ. ಸಮರ್ಪಕ ಚರಂಡಿ ಇಲ್ಲದೇ ಇರುವುದರಿಂದ ನೀರು ಹರಿವಿಗೆ ಅಡ್ಡಿಯಾಗಿದೆ. ಒಂದು ಕಡೆ ಸರಕಾರಿ ಆಸ್ಪತ್ರೆ, ಇನ್ನೊಂದು ಕಡೆ ಉಪನೋಂದಣಿ ಕಚೇರಿ ಇದೆ. ಇದರ ನಡುವಿನಲ್ಲಿ ಬ್ಲಾಕ್‌ ಆದ ಚರಂಡಿ ಇದೆ. ಇದೇ ಸರಕಾರಿ ಆಸ್ಪತ್ರೆ ಮುಂಭಾಗದ ಚರಂಡಿಯಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿ ಕೇಂದ್ರವಾಗಿ ಪರಿಣಮಿಸುತ್ತಿದೆ.

ರೈಲ್ವೇ ಸಂಪರ್ಕ ರಸ್ತೆ
ಪ್ರತಿವರ್ಷದಂತೆ ರೈಲ್ವೇ ಸಂಪರ್ಕ ರಸ್ತೆ ಸಂಚಾರ ಮತ್ತೆ ದುಸ್ತರವಾಗಿದೆ. ಹಾರಾಡಿ ಕಡೆಯಿಂದ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ಬರುವುದೇ ಕಷ್ಟ ಎಂಬಂತಾಗಿದೆ. ಸ್ವಲ್ಪ ಭಾಗಕ್ಕೆ ಡಾಮರು ಹಾಕಲಾಗಿದೆ. ಆದರೆ ಉಳಿದ ರಸ್ತೆ ಹೊಂಡ – ಗುಂಡಿಗಳಿಂದಕೂಡಿದೆ. ಇದೀಗ ಮಳೆನೀರು ಹೊಂಡದಲ್ಲಿ ನಿಂತು, ಆಳ ಗೊತ್ತಾಗುತ್ತಿಲ್ಲ. ರಿಕ್ಷಾ, ಕಾರು ಸಹಿತ ಘನ ವಾಹನಗಳು ಹೇಗೋ ಬರುತ್ತವೆ. ಆದರೆ ಬೈಕ್‌, ಸ್ಕೂಟರ್‌ ಸಂಚಾರ ಕಷ್ಟ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.