ಬಂಟ್ವಾಳ: ತುಂಬಿದ ನೇತ್ರಾವತಿ, ಪ್ರವಾಹದ ಭೀತಿ
Team Udayavani, Aug 6, 2020, 12:07 PM IST
ಬಂಟ್ವಾಳ: ಘಟ್ಟ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನೇತ್ರಾವತಿ ತುಂಬಿ ಹರಿಯುತ್ತಿದ್ದು, ಗುರುವಾರ ಬೆಳಗ್ಗೆ ಬಂಟ್ವಾಳದಲ್ಲಿ ನದಿ ನೀರು ಈ ವರ್ಷದ ಗರಿಷ್ಠ 7.6 ಮೀ. ಹಂತಕ್ಕೆ ತಲುಪಿದ್ದು, ಪ್ರವಾಹ ಭೀತಿ ಎದುರಾಗಿದೆ.
ಆದರೆ ಆಗಸ್ಟ್ 5ಕ್ಕೆ ಬೆಳಗ್ಗೆ 7.5 ಮೀ.ತಲುಪಿದ್ದರೂ, ಸಂಜೆಯ ವೇಳೆಗೆ ನೀರು ಇಳಿಕೆಯಾಗಿತ್ತು. ರಾತ್ರಿ ವೇಳೆ ಮತ್ತೆ ನೀರು ಏರಿಕೆಯಾಗಿದೆ. ಬಂಟ್ವಾಳದಲ್ಲಿ ನೀರಿನ ಅಪಾಯಕಾರಿ ಮಟ್ಟ 8.5 ಮೀ. ಆಗಿದ್ದು, ಪ್ರಸ್ತುತ ನೀರು ನದಿಯಿಂದ ಹೊರಬಂದಿಲ್ಲ.
ಸತತ ಮಳೆಯಿಂದಾಗಿ ಕರಾವಳಿಯ ಜೀವನದಿ ನೇತ್ರಾವತಿ ತುಂಬಿ ಹರಿಯುತ್ತಿದೆ. ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಸ್ನಾನಘಟ್ಟದ ಸಮೀಪದ ಅಣೆಕಟ್ಟು ಸಮಾನಂತರವಾಗಿ ನೀರು ಹರಿಯುತ್ತಿದ್ದು, ಮುಳುಗಡೆ ಭೀತಿ ಎದುರಾಗಿದೆ. ಈ ವರ್ಷದ ಮಳೆಗಾಲದಲ್ಲಿ ಇದೇ ಮೊದಲ ಬಾರಿಗೆ ಅತೀ ಹೆಚ್ಚು ಮಳೆಯಾಗಿದ್ದರಿಂದ ನದಿ ನೀರು ಗರಿಷ್ಠ ಏರಿಕೆಯಾಗಿದೆ