ಇಡ್ಯಾಡಿಯಲ್ಲಿ ಭಾರೀ ಗಾಳಿ: ವ್ಯಾಪಕ ಕೃಷಿ ಹಾನಿ
Team Udayavani, Sep 9, 2019, 5:50 AM IST
ಸವಣೂರು : ಕಡಬ ತಾಲೂಕಿನ ಸವಣೂರು ಗ್ರಾಮದ ಇಡ್ಯಾಡಿ ಭಾಗದಲ್ಲಿ ರವಿವಾರ ಮಧ್ಯಾಹ್ನದ ವೇಳೆಗೆ ಬೀಸಿದ ಭಾರೀ ಗಾಳಿಯಿಂದಾಗಿ ಇಲ್ಲಿನ ಅಶ್ವಿನಿ ಫಾರ್ಮ್ನಲ್ಲಿ ಅಪಾರ ಪ್ರಮಾಣದ ಅಡಿಕೆ ಹಾಗೂ ತೆಂಗಿನ ಗಿಡಗಳು ನಾಶವಾಗಿವೆ.
ರಾಜಾರಾಮ ಪ್ರಭು ಅವರ ಒಡೆತನದ ಕುಮಾಧಾರಾ ನದಿ ತಟದಲ್ಲಿರುವ ಅಶ್ವಿನಿ ಫಾರ್ಮ್ ಭಾಗದಲ್ಲಿ ಹಠಾತ್ತನೆ ಗಾಳಿ ಬೀಸಿದ್ದು, ಫಲಭರಿತ ನೂರಾರು ಅಡಿಕೆ ಗಿಡಗಳು ಧರೆಗೆ ಉರುಳಿವೆ. ಗಾಳಿ ಆರ್ಭಟಕ್ಕೆ ಏಳು ತೆಂಗಿನ ಮರಗಳು ಮುರಿದು ಬಿದ್ದಿವೆ. ಇತರ ಗಿಡ-ಮರಗಳೂ ಮುರಿದಿದ್ದು ಗಾಳಿಯ ತೀವ್ರತೆಯನ್ನು ಸಾರಿ ಹೇಳುತ್ತಿತ್ತು. ಅಕ್ಕಪಕ್ಕದ ತೋಟಗಳಲ್ಲಿ ಗಾಳಿಯ ಹಾವಳಿ ಇಲ್ಲದಿರುವುದು ಸ್ಥಳೀಯರನ್ನು ಆಶ್ಚರ್ಯಚಕಿತರನ್ನಾಗಿಸಿದೆ. ಎಂಟು ವರ್ಷಗಳ ಹಿಂದೆಯೂ ಈ ರೀತಿ ಗಾಳಿ ಬೀಸಿ, 400 ಅಡಿಕೆ ಗಿಡಗಳು ನಾಶವಾಗಿದ್ದವು ಎಂದು ರಾಜಾರಾಮ ಪ್ರಭು ನೆನಪಿಸಿಕೊಂಡಿದ್ದಾರೆ.ರವಿವಾರ ಬೀಸಿದ ಗಾಳಿಯಿಂದಾಗಿ ಲಕ್ಷಾಂತಾರ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
Udupi: ರಮಾಬಾಯಿ ಕೊಚ್ಚಿಕಾರ್ ಪೈ ನಿಧನ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ