ಕನ್ನಡದ ಮೊದಲ ಪತ್ರಿಕೆ ಆರಂಭಕರ್ತೃ ರೆ| ಹರ್ಮನ್‌ ಫ್ರೆಡ್ರಿಕ್‌ ಮೊಗ್ಲಿಂಗ್‌

ಕನ್ನಡ ಕಟ್ಟಿದ ಹಿರಿಯರು

Team Udayavani, Nov 6, 2020, 5:27 AM IST

Mogling

ಮೊಗ್ಲಿಂಗ್‌ ಪ್ರತಿಮೆ

1843ರಷ್ಟು ಹಿಂದೆ ಮೊದಲ ಕನ್ನಡ ಪತ್ರಿಕೆ “ಮಂಗಳೂರ ಸಮಾಚಾರ’ವನ್ನು ಆರಂಭಿಸಿದವರು ಹರ್ಮನ್‌ ಮೊಗ್ಲಿಂಗ್‌. ವಿದೇಶೀಯರಾದ ಅವರು ಕನ್ನಡ ಕಲಿತು ಈ ಪತ್ರಿಕೆ ಸ್ಥಾಪಿಸಿದ್ದರು.

ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಕ್ರೈಸ್ತ ಮಿಶನರಿಗಳ ಕೊಡುಗೆ ಅಪಾರ. ಅದರಲ್ಲೂ ಮುಖ್ಯವಾಗಿ ಜರ್ಮನಿಯ ಬಾಸೆಲ್‌ ಮಿಶನ್‌ನ ಕಾಣಿಕೆ ಅನನ್ಯ.  ರೆ| ಹರ್ಮನ್‌ ಫ್ರೆಡ್ರಿಕ್‌ ಮೊಗ್ಲಿಂಗ್‌ 1836ರಲ್ಲಿ ಮಂಗಳೂರಿಗೆ ಬಂದಿದ್ದರು. ಅವರು ಕನ್ನಡ ಪತ್ರಿಕಾ ರಂಗದ ಆರಂಭ ಕತೃì, ಪಿತಾಮಹ. ಕೇವಲ 7 ವರ್ಷಗಳಲ್ಲಿ ಕನ್ನಡದಲ್ಲಿ ಪಾಂಡಿತ್ಯವನ್ನು ಪಡೆದು 1843ರ ಜುಲೈ 1ರಂದು ಕರ್ನಾಟಕದ ಮೊದಲ ಕನ್ನಡ ಪತ್ರಿಕೆ “ಮಂಗಳೂರ ಸಮಾಚಾರ’ವನ್ನು ಆರಂಭಿಸಿದ್ದರು. ಈ ಐತಿಹಾಸಿಕ ದಿನದ ಸ್ಮರಣಾರ್ಥ ಜು. 1ರಂದು ರಾಜ್ಯದಲ್ಲಿ ಪತ್ರಿಕಾ ದಿನವನ್ನಾಗಿ ಆಚರಿಸಲಾಗುತ್ತಿದೆ.

ಪ್ರಾರಂಭದಲ್ಲಿ ಸಾಪ್ತಾಹಿಕ ಹಾಗೂ ಬಳಿಕ ಪಾಕ್ಷಿಕವಾಗಿ ಮುದ್ರಣವಾಗುತ್ತಿದ್ದ 4 ಪುಟಗಳ ಈ ಪತ್ರಿಕೆಯಲ್ಲಿ ವಿದೇಶಿ ಸುದ್ದಿಯ ಜತೆಗೆ “ಊರ ವರ್ತಮಾನ’ (ಪ್ರಾದೇಶಿಕ ವಾರ್ತೆ), ಸರಕಾರದ ನಿರೂಪಗಳು (ಈಸ್ಟ್‌ ಇಂಡಿಯಾ ಕಂಪೆನಿಯ ಕಾನೂನುಗಳು), ಸರ್ವ ರಾಜ್ಯ ವರ್ತಮಾನಗಳು (ರಾಜ್ಯ ಸುದ್ದಿ), ನೂತನವಾದ ಆಶ್ಚರ್ಯಕರ ಸುದ್ದಿಗಳು (ಅಸಾಮಾನ್ಯ ಸುದ್ದಿ), ಅನ್ಯರ ನಡತೆಗಳು (ಆಚಾರ ವಿಚಾರ), ಸುಬುದ್ಧಿಗಳು (ಉತ್ತಮ ನಡತೆ), ನೀತಿ ಕಥೆಗಳು, ಪುರಂದರ ದಾಸರ ಕೀರ್ತನೆಗಳು ಪ್ರಕಟವಾಗುತ್ತಿದ್ದವು. ಪತ್ರಿಕೆ ಜನಪ್ರಿಯತೆ ಗಳಿಸಿದಾಗ ಅದರ ಮುದ್ರಣವನ್ನು 1844 ರಲ್ಲಿ ಬಳ್ಳಾರಿಗೆ ಸ್ಥಳಾಂತರಿಸಲಾಯಿತು. ಬಳಿಕ ಅದು “ಕರ್ನಾಟಕ ಸಮಾಚಾರ’ ಎಂಬ ಹೆಸರಿನಲ್ಲಿ ಪ್ರಕಟವಾಗುತ್ತಿತ್ತು.

ಮಂಗಳೂರಿನ ಬಲ್ಮಠದಲ್ಲಿ ಸ್ಥಾಪಿಸಿದ ಧಾರ್ಮಿಕ ಶಿಕ್ಷಣ ಬೋಧಕರ ತರಬೇತಿ ಕೇಂದ್ರ “ಬಿಇಎಂ ಥಿಯೊಲಾಜಿಕಲ್‌ ಸೆಮಿನರಿ’ಯ ಪ್ರಥಮ ಪ್ರಾಂಶುಪಾಲರಾಗಿದ್ದರು ಮೊಗ್ಲಿಂಗ್‌. ಈಗ ಅದರ ಹೆಸರು “ಕರ್ನಾಟಕ ಥಿಯೊಲಾಜಿಕಲ್‌ ಕಾಲೇಜು’ ಎಂದಾಗಿದೆ.

ಕೃತಿ, ಸ್ಮಾರಕ
ಈ ಕಾಲೇಜಿನಲ್ಲಿರುವ ಗ್ರಂಥಾಲಯದಲ್ಲಿ ಮೊಗ್ಲಿಂಗ್‌ ಅವರು ಬರೆದ ಹಾಗೂ ಅವರನ್ನು ಕುರಿತಾದ ಪುಸ್ತಕಗಳು, “ಮಂಗಳೂರ ಸಮಾಚಾರ’ ಪತ್ರಿಕೆಯ ಪ್ರತಿ ಇದೆ. ಕಾಲೇಜಿನ ಎದುರು ಮೊಗ್ಲಿಂಗ್‌ ಪ್ರತಿಮೆ ಇದೆ. ಅಲ್ಲದೆ ಮೊಗ್ಲಿಂಗ್‌ ಹೆಸರಿನಲ್ಲಿ ಜರ್ಮನ್‌ ಭಾಷಾ ಅಧ್ಯಯನ ಕೇಂದ್ರವೂ ಇದೆ.

1811ರಲ್ಲಿ ಜರ್ಮನಿಯ ಬ್ರೆಕನಿಮ್‌ನಲ್ಲಿ ಜನಿಸಿದ್ದ ಮೊಗ್ಲಿಂಗ್‌ 1881ರಲ್ಲಿ ಜರ್ಮನಿಯ ಎಸ್ಲಿಂಗನ್‌ನಲ್ಲಿ ನಿಧನ ಹೊಂದಿದ್ದರು. ತಮ್ಮ ಜೀವನದ ಬಹುಭಾಗವನ್ನು ಕರ್ನಾಟಕದಲ್ಲಿ ಕಳೆದಿದ್ದರು. ಅವರು ಜನರೊಂದಿಗೆ ಬೆರೆತು ಕನ್ನಡ ಕಲಿತಿದ್ದರು. ಕನ್ನಡ ಕಲಿಯುವ ಮೊದಲು ಸಂಸ್ಕೃತವನ್ನೂ ಕಲಿತಿದ್ದರು.

ಸಾಹಿತ್ಯ ಕೃಷಿ
ಮೊಗ್ಲಿಂಗ್‌ ಅವರು ಪತ್ರಿಕಾ ವೃತ್ತಿಯ ಜತೆಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲೂ ಅಪಾರ ಕೃಷಿ ಮಾಡಿದ್ದು, 20 ವರ್ಷಗಳಲ್ಲಿ 36 ಕನ್ನಡ ಕೃತಿಗಳನ್ನು ರಚಿಸಿದ್ದರು. 1848ರಲ್ಲಿ 3,000 ಕನ್ನಡ ಗಾದೆಗಳ ಸಂಗ್ರಹವನ್ನು ಹೊರ ತಂದಿದ್ದರು. ತನ್ನ ಸಂಬಂಧಿ ಹಾಗೂ ಮಿಶನರಿ ವೇಗಲ್‌ ಜತೆಗೂಡಿ 20 ಆಧುನಿಕ ಕನ್ನಡ ಗೀತೆಗಳನ್ನು ಸಂಯೋಜಿಸಿದ್ದರು. ಬಸವಣ್ಣನ ವಚನಗಳು ಸೇರಿದಂತೆ ಸಾಂಪ್ರದಾಯಿಕ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ “ಬಿಬ್ಲಿಯೋಥಿಕಾ ಕರ್ನಾಟಕ’ ಎಂಬ ಕೃತಿಯನ್ನು 6 ಸಂಪುಟಗಳಲ್ಲಿ ಪ್ರಕಟಿಸಿದ್ದು, ಇದು ಕನ್ನಡ ಸಾಹಿತ್ಯಕ್ಕೆ ಮೊಗ್ಲಿಂಗ್‌ ಅವರ ಅತ್ಯಮೂಲ್ಯ ಕಾಣಿಕೆ. ಕೊಡಗಿನಲ್ಲಿ ನೆಲೆಸಿದ್ದ ಸಂದರ್ಭದಲ್ಲಿ ಮೊಗ್ಲಿಂಗ್‌ ಅವರು ಚೆನ್ನೈಯ ನಿವೃತ್ತ ನ್ಯಾಯಮೂರ್ತಿ ಕಾಸಾಮೇಜರ್‌ ಅವರ ಸಹಕಾರದಿಂದ “ರಾವಣ ದಿಗ್ವಿಜಯ’ ಯಕ್ಷಗಾನ ಪ್ರಸಂಗ, “ಬಸವ ಪುರಾಣ’, ಕನಕದಾಸರ “ಹರಿಭಕ್ತಿ ಸಾರ’ , ದಾಸರ ಪದಗಳು, ಲಕ್ಷ್ಮೀಶ ಕವಿಯ “ಜೈಮಿನಿ ಭಾರತ’ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದರು. ಕನಕದಾಸ ಮತ್ತು ಪುರಂದರ ದಾಸರ 24 ಕೀರ್ತನೆಗಳನ್ನು ಜರ್ಮನ್‌ ಭಾಷೆಗೆ ಅನುವಾದಿಸಿದ್ದರು.

ಟಾಪ್ ನ್ಯೂಸ್

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Pilikula: “ಫ್ಯಾನ್‌-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!

Pilikula: “ಫ್ಯಾನ್‌-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.