ಸಿಡಿಲು ಬಡಿದು ಮನೆಗೆ ಹಾನಿ: ಇಬ್ಬರಿಗೆ ಗಾಯ
Team Udayavani, Apr 9, 2022, 2:14 PM IST
ಬಂಟ್ವಾಳ: ಸಿಡಿಲು ಬಡಿದು ಮನೆಗೆ ಹಾನಿಯಾಗಿ, ಮನೆಯೊಳಗಿದ್ದ ಇಬ್ಬರಿಗೆ ಗಾಯವಾದ ಘಟನೆ ಶುಕ್ರವಾರ ರಾತ್ರಿ ಬಂಟ್ವಾಳದ ಪೆರಾಜೆಯಲ್ಲಿ ನಡೆದಿದೆ.
ಪೆರಾಜೆ ಗ್ರಾಮದ ಸಾದಿಕುಕ್ಕು ನಿವಾಸಿ ದಿ.ಮೋನಪ್ಪ ನಾಯ್ಕ್ ಅವರ ಪತ್ನಿ, ಗೀತಾ ಮೋನಪ್ಪ ನಾಯ್ಕ್ ಅವರ ಮನೆಗೆ ಸಿಡಲು ಬಡಿದ ಪರಿಣಾಮ ಮನೆಗೆ ತೀವ್ರ ಹಾನಿಯಾಗಿ, ಮನೆಯಲ್ಲಿ ಇದ್ದ ಗೀತಾ ಅವರ ಮಕ್ಕಳಾದ ಜೀವನ್ ಮತ್ತು ಸಚಿನ್ ಅವರಿಗೆ ಗಾಯವಾಗಿದೆ. ಮನೆಯ ಹತ್ತಿರ ವಿದ್ದ ಅಕೇಶಿಯ ಮರ ಸಂಪೂರ್ಣ ಭಸ್ಮವಾಗಿದೆ.
ಇದನ್ನೂ ಓದಿ: ಸೆಲೆಬ್ರಿಟಿ, ಉದ್ಯಮಿಗಳಿಗೆ ಮಾದಕ ವಸ್ತು ಸರಬರಾಜು: ಮೂವರು ಅಂತಾರಾಜ್ಯ ಆರೋಪಿಗಳ ಬಂಧನ
ಜೀವನ್ ಅವರ ಮುಖಕ್ಕೆ ಗಾಯವಾದರೆ ಸಚಿನ್ ಅವರಿಗೆ ಸಿಡಿಲು ಶಾಕ್ ಆಗಿದೆ ಎಂದು ಮನೆಯವರು ತಿಳಿಸಿದ್ದಾರೆ. ಘಟನೆಯಿಂದ ಲಕ್ಷಾಂತರ ರೂ ನಷ್ಟ ಸಂಭವಿಸಿದ್ದು,ಘಟನಾ ಸ್ಥಳಕ್ಕೆ ಪೆರಾಜೆ ಪಿಡಿಒ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.