ಮುರುಕಲು ಗೂಡಿನಲ್ಲಿ ಏಕಾಂಗಿ ಸರಸಜ್ಜಿ


Team Udayavani, Jun 7, 2018, 2:00 AM IST

sarasajji-6-6.jpg

ಬ್ರಹ್ಮಾವರ: ಒಂದು ಕ್ಷಣ ಮೊಬೈಲ್‌, ವಿದ್ಯುತ್‌ ಇಲ್ಲದಿದ್ದರೆ ಚಡಪಡಿಸುವ ಇಂದಿನ ದಿನಗಳಲ್ಲಿ ಕಳೆದ 40 ವರ್ಷಗಳಿಂದ 85 ವಯಸ್ಸಿನ ಅಜ್ಜಿಯೊಬ್ಬರು ಯಾವುದೇ ಸೌಕರ್ಯ, ಅನುಕೂಲಗಳಿಲ್ಲದೆ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಾರೆ. ಕರ್ಜೆ ಗ್ರಾ.ಪಂ. ವ್ಯಾಪ್ತಿಯ ಕಡಂಗೋಡು ಸಮೀಪ ಸರಸಜ್ಜಿ ಮಣ್ಣಿನ ಮುರುಕಲು ಗೂಡಿನಲ್ಲಿ ವಾಸಿಸುತ್ತಿದ್ದಾರೆ. ಸರಸಜ್ಜಿಯ ಪತಿ ತೀರಿಕೊಂಡು ಹಲವು ವರ್ಷಗಳೇ ಕಳೆದಿವೆ. ಮಗಳು ಮೃತಪಟ್ಟಿದ್ದಾಳೆ. ಇದ್ದ ಓರ್ವ ಮಗನ ಜತೆಯೂ ಅವರು ವಾಸವಿಲ್ಲ.

ಕೋಳಿ ಗೂಡಿನ ರೀತಿ ಗುಡಿಸಲು
ಸರಸಜ್ಜಿ ವಾಸವಿರುವುದು ರಾಜ್ಯದ ಏಕೈಕ ಮಣ್ಣಿನ ಅರಮನೆ ಖ್ಯಾತಿಯ ಸೂರಾಲು ಸನಿಹದ ಪುಟ್ಟ ಗುಡಿಸಲಿನಲ್ಲಿ. ಇದು ಅಕ್ಷರಶಃ ಕೋಳಿಗೂಡಿನಂತಿದೆ. ಅಜ್ಜಿ ಸ್ವತಃ ಕೈಯಾರೆ ಮಣ್ಣು ಕಲಸಿ ಇದನ್ನು ಕಟ್ಟಿದ್ದಾರೆ. ಮಾಡಿಗೆ ಮಡಲು, ಟಾರ್ಪಾಲಿನ್‌ ಹಾಕಿಕೊಂಡಿದ್ದಾರೆ. ಮಳೆಗಾಲದಲ್ಲಿ ಇದಕ್ಕೆ ನೀರು ನುಗ್ಗುತ್ತದೆ. ಇತ್ತೀಚೆಗೆ ಭಾರೀ ಮಳೆಗೆ ಇದ್ದ ಅಕ್ಕಿ ಚೀಲವೂ ಒದ್ದೆಯಾಗಿದೆ.

ಸ್ವಾಭಿಮಾನಿ ಅಜ್ಜಿ
ಇಷ್ಟಾದರೂ ಅಜ್ಜಿ ಇನ್ನೊಬ್ಬರನ್ನು ನಂಬಿಕೊಂಡಿಲ್ಲ. ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಸುಮಾರು 85ರ ವಯಸ್ಸಿನಲ್ಲೂ ಸರಸರನೆ ನಡೆದಾಡುತ್ತಾರೆ. ಮನೆ-ಪರಿಸರ ಸ್ವಚ್ಚತೆಯಲ್ಲಿ ಜನಸಾಮಾನ್ಯರಿಗೆ ಮಾದರಿಯಾಗಿದ್ದಾರೆ.

ಸೌಲಭ್ಯಗಳಿಂದ ವಂಚಿತ..
ಅಜ್ಜಿಯ ಮನೆಗೆ ವಿದ್ಯುತ್‌ ಇಲ್ಲ. ಯಾವುದೇ ಆಧುನಿಕ ಸೌಲಭ್ಯಗಳಿಲ್ಲ. ಕನಿಷ್ಠ ಪಕ್ಷ ಸೀಮೆ ಎಣ್ಣೆ ಇಲ್ಲದೆ ದೀಪವೂ ಉರಿಯುತ್ತಿಲ್ಲ. ಅತೀ ಆವಶ್ಯಕ ಪಾತ್ರೆಗಳು, ದಿನಸಿ ಸಾಮಾಗ್ರಿಗಳು ಮಾತ್ರ. ಇನ್ನು ಪಡಿತರ ಚೀಟಿ, ಆಶ್ರಯ ಮನೆ, ಸಂಧ್ಯಾ ಸುರಕ್ಷಾ ಇತ್ಯಾದಿ ಸೌಲಭ್ಯಗಳ ಗೋಜಿಗೇ ಹೋಗಲಿಲ್ಲ. ಸರಸಜ್ಜಿ ನಿರ್ಗತಿಕಳಲ್ಲ. ಗುಡಿಸಲು ಹಾಗೂ ಸುತ್ತಲಿನ ಪರಿಸರ ಸೇರಿ 1 ಎಕ್ರೆ ಮಿಕ್ಕಿದ ಜಾಗ ಆಕೆಯ ಹೆಸರಿನಲ್ಲಿದೆ ಎನ್ನಲಾಗಿದೆ.

ಗೇರು ಜೀವನಾಧಾರ
ಅಜ್ಜಿಯು ಮನೆ ಸುತ್ತಮುತ್ತಲಿನ ಗೇರುಮರಗಳಿಂದ ಗೇರು ಬೀಜ ಸಂಗ್ರಹಿಸಿ ಜೀವನ ಸಾಗಿಸುತ್ತಿದ್ದಾರೆ. ಮನೆ ಖರ್ಚಿಗೆ ಒಂದಷ್ಟು ತರಕಾರಿಯನ್ನೂ ಬೆಳೆಯುತ್ತಾರೆ. ಆದರೆ ಜನರೊಂದಿಗೆ ಯಾವುದೇ ಒಡನಾಟವಿಲ್ಲದೆ ಏಕಾಂಗಿಯಾಗಿ ಬದುಕುತ್ತಿದ್ದಾರೆ.

ಮನೆ ನಿರ್ಮಿಸಿ ಕೊಡುತ್ತೇವೆ
ಸರಸಜ್ಜಿಯ ಗುಡಿಸಲಿಗೆ ಭೇಟಿ ನೀಡಿದ್ದೇನೆ. ಅವರು ಯಾವುದೇ ಕಚೇರಿಗೆ ಬರಲು ಒಪ್ಪದ ಕಾರಣ ಆಧಾರ್‌ ಕಾರ್ಡ್‌ ಹಾಗೂ ರೇಶನ್‌ ಕಾರ್ಡ್‌ಗಾಗಿ ಮನೆಗೆ ಹೋಗಿ ಸಹಿ ತೆಗೆದುಕೊಳ್ಳುವಂತೆ ತಹಶೀಲ್ದಾರ್‌ಗೆ ಸೂಚಿಸಿದ್ದೇನೆ. ಅಜ್ಜಿಯ ಒಪ್ಪಿಗೆಯಂತೆ ಸಮೀಪದಲ್ಲೇ ವೈಯಕ್ತಿಕ ಹಾಗೂ ಕಾರ್ಯಕರ್ತರ ಸಹಕಾರದಿಂದ ಮನೆ ನಿರ್ಮಿಸುತ್ತೇವೆ.
– ಕೆ.ರಘುಪತಿ ಭಟ್‌,  ಉಡುಪಿ ಶಾಸಕರು

ಅಜ್ಜಿ ಸ್ಪಂದಿಸಿದರೆ..
ಸರಸಜ್ಜಿಯು ಹೊರಪ್ರಪಂಚದಿಂದ ದೂರವಿದ್ದಾರೆ. ಅಜ್ಜಿಯು ಸ್ಪಂದಿಸಿದರೆ ಪಡಿತರ ಚೀಟಿ, ಬಸವ ವಸತಿ, ಸಂಧ್ಯಾ ಸುರಕ್ಷಾ ಸೌಲಭ್ಯಗಳನ್ನು ತತ್‌ಕ್ಷಣ ಮಾಡಿಸುತ್ತೇವೆ.
– ಅಶೋಕ್‌ ಶೆಟ್ಟಿ ಮೈರ್ಮಾಡಿ, ಗ್ರಾ.ಪಂ. ಸದಸ್ಯ

ಮನೆ ಪ್ರಾರಂಭಿಸಿದ್ದೆವು
ದಾನಿಗಳ ಸಹಕಾರದಿಂದ ಸರಸಜ್ಜಿಗೆ ಮನೆ ಕಟ್ಟಲು ಸುಮಾರು 6 ತಿಂಗಳ ಹಿಂದೆ ಕಲ್ಲು ಸಹ ತಂದು ಹಾಕಿದ್ದೆವು. ಪಂಚಾಂಗ ನಿರ್ಮಾಣ ಪ್ರಾರಂಭಿಸಿದ್ದೆವು. 
– ರಾಘವೇಂದ್ರ ಶೆಟ್ಟಿ ಕರ್ಜೆ

ಟಾಪ್ ನ್ಯೂಸ್

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.