ಒಪ್ಪೊತ್ತಿನ ಊಟಕ್ಕೂ ಪರದಾಡುವವರಿಗೆ ತುತ್ತು ಅನ್ನ


Team Udayavani, Sep 23, 2018, 10:27 AM IST

23-sepctember-3.jpg

ಮಹಾನಗರ: ಸಂಪಾದನೆ, ತಿರುಗಾಟ, ಐಷಾರಾಮಿ ಬದುಕಿನ ಬಗ್ಗೆಯಷ್ಟೇ ಯೋಚನೆ ಮಾಡುವ ಈ ಕಾಲ ಘಟ್ಟದಲ್ಲಿಯೂ ಮಾನವೀಯ ಅಂತಃಕರಣ ಜೀವಂತವಾಗಿದೆ ಎಂಬುದಕ್ಕೆ ನಗರದ ಯುವಕರ ತಂಡವೊಂದು ಸಾಕ್ಷಿ. ರಸ್ತೆ ಬದಿ ಅನ್ನಾಹಾರವಿಲ್ಲದೆ ದಿನಕಳೆ ಯುವವರಿಗೆ ಪ್ರತಿದಿನ ಆಹಾರ ಒದಗಿಸುವ ಮೂಲಕ ಈ ತಂಡ ಸದ್ದಿಲ್ಲದೆ ಮಾದರಿಯಾಗಿದೆ.

ತಂಡದ ಹೆಸರು ಜಿ2ಸಿ. (ಜಿ2 ಕ್ರಿಯೇಶನ್ಸ್‌). ಇದರಲ್ಲಿರುವವರೆಲ್ಲರೂ ಮಾರ್ಕೆಟಿಂಗ್‌ ಕ್ಷೇತ್ರದಲ್ಲಿ ಕಾರ್ಯನಿರತರು. ಈವೆಂಟ್‌ ಮ್ಯಾನೇಜ್‌ಮೆಂಟ್‌, ಚಲನಚಿತ್ರ ಪ್ರೊಮೋಶನ್‌ ಮುಂತಾದ ಕೆಲಸಗಳಲ್ಲಿ ತೊಡಗಿರುವ ಸಂಸ್ಥೆಯ ಸದಸ್ಯರು ತಮ್ಮ ಸಂಸ್ಥೆಯ ಸಮಾರಂಭಗಳಲ್ಲಿ ಉಳಿದ ಆಹಾರವನ್ನು ಅವಶ್ಯವಿದ್ದವರಿಗೆ ಹಂಚುತ್ತಿದ್ದರು. ಆದರೆ ಜುಲೈ 15ರಂದು ತಂಡದ ಸದಸ್ಯೆಯ ಹುಟ್ಟುಹಬ್ಬದಂದು ಹೊಸ ಪ್ರಯತ್ನವೊಂದಕ್ಕೆ ನಾಂದಿ ಹಾಡಿದರು. ನಗರದಲ್ಲಿ ಆಯೋಜನೆಗೊಳ್ಳುವ ಯಾವುದೇ ಸಮಾರಂಭಗಳಲ್ಲಿ ಉಳಿದ ಆಹಾರವನ್ನು ಸಂಗ್ರಹಿಸಿ ಅವಶ್ಯವಿರುವವರಿಗೆ ಕೈಯಾರೆ ಹಂಚುವ ಮೂಲಕ ಹಸಿದವರ ಪಾಲಿಗೆ ಆಪದ್ಬಾಂ ಧವ ಎನಿಸಿಕೊಂಡಿದ್ದಾರೆ.

ಕರೆ ಮಾಡಿ ತಿಳಿಸುತ್ತಾರೆ
ಮೊದಲು ಹೆಚ್ಚು ಆಹಾರ ಸಂಗ್ರಹವಾಗುತ್ತಿರಲಿಲ್ಲ. ಆದರೆ ತಂಡದ ಉದ್ದೇಶ ಜನರಿಗೆ ತಿಳಿದ ಬಳಿಕ ಸಮಾರಂಭಗಳ ಆಯೋಜಕರು ಕರೆ ಮಾಡಿ ಆಹಾರ ಉಳಿದಿರುವ ಬಗ್ಗೆ ತಿಳಿಸುತ್ತಿದ್ದಾರೆ ಎನ್ನುತ್ತಾರೆ ತಂಡದ ಸದಸ್ಯರು.

ಅಣ್ಣಾ ಊಟ ಮಾಡದೆ ಎರಡು ದಿನ ಆಯ್ತು
ನಗರದಲ್ಲಿ ಕೆಲಸದ ಹಿನ್ನೆಲೆಯಲ್ಲಿ ಸುತ್ತಾಡುವ ವೇಳೆ ಅದೆಷ್ಟೋ ಮಂದಿ ಅನ್ನಾಹಾರ ಸೇವಿಸದೆ ರಸ್ತೆ ಬದಿಯಲ್ಲಿ ದಿನಗಳೆಯುವವರನ್ನು ನೋಡುವಾಗ ನೋವಾಗುತ್ತದೆ. ಕೆಲವರು ಎರಡು, ಮೂರು ದಿನಗಳಿಂದಲೂ ಆಹಾರ ಸೇವಿಸದೆ ಶರೀರ ಕೃಶಗೊಂಡಿರುವವರಿಗೆ ಹೊತ್ತಿನ ಊಟವನ್ನಾದರೂ ನೀಡಿದ ತೃಪ್ತಿ ಸಿಕ್ಕಿದಂತಾಗುತ್ತದೆ. ಅದಕ್ಕಾಗಿ ಎರಡು ತಿಂಗಳಿನಿಂದ ಈ ಪ್ರಯತ್ನ ಆರಂಭಿಸಿದೆವು. ಶುಕ್ರವಾರ (ಸೆ. 21) ಸ್ಟೇಟ್‌ ಬ್ಯಾಂಕ್‌ನಲ್ಲಿ ಆಹಾರ ವಿತರಣೆ ವೇಳೆ ಪುಟಾಣಿ ಹುಡುಗಿಯೋರ್ವಳು ಬಂದು ‘ಅಣ್ಣಾ… ಏನೂ ತಿನ್ನದೆ ಎರಡು ದಿನ ಆಯ್ತು, ನಮಗೂ ಕೊಡಿ’ ಎಂದಳು. ಇಂತಹ ಅದೆಷ್ಟೋ ಮಕ್ಕಳು ತಿನ್ನಲು ಸಿಗದೆ ಪರದಾಡುತ್ತಿದ್ದಾರೆ’ ಎನ್ನುತ್ತಾರೆ ತಂಡದ ಪ್ರಮುಖರಲ್ಲೋರ್ವ ಜಿತೇಶ್‌.

ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆ
ವಿಶೇಷವೆಂದರೆ ಹಸಿದವರಿಗೆ ಅನ್ನ ನೀಡಲು ಜಿ2ಸಿ ತಂಡ ಹಾಕಿಕೊಂಡ ಯೋಜನೆಯಲ್ಲಿ ವಿದ್ಯಾರ್ಥಿಗಳೂ ತೊಡಗಿಸಿಕೊಳ್ಳುತ್ತಿದ್ದಾರೆ. ತಂಡದಲ್ಲಿ 40ಕ್ಕೂ ಹೆಚ್ಚು ಜನರಿದ್ದು, ನಗರದ ಕಾಲೇಜುಗಳ ಕೆಲವು ವಿದ್ಯಾರ್ಥಿಗಳು ಕಾಲೇಜು ಅವಧಿ ಮುಗಿದ ಬಳಿಕ ತಂಡದ ಸದಸ್ಯರೊಂದಿಗೆ ಸೇರಿಕೊಂಡು ಆಹಾರ ಹಂಚುತ್ತಾರೆ. 

ಜೋಸೆಫ್‌ ಕ್ರಾಸ್ತಾ ಸ್ಫೂರ್ತಿ
ಮದರ್‌ ಥೆರೇಸಾ ಅವರ ‘ನೂರು ಮಂದಿಗೆ ಉಣಿಸಲು ಸಾಧ್ಯವಾಗದಿದ್ದರೆ, ಓರ್ವನಿಗಾದರೂ ತುತ್ತು ಒದಗಿಸು’ ಎಂಬ ಘೋಷವಾಕ್ಯವನ್ನಿಟ್ಟುಕೊಂಡು ಸೇವೆ ಆರಂಭಿಸಿರುವ ಯುವಕರಿಗೆ ಸ್ಫೂರ್ತಿಯಾಗಿರುವುದು ಮಂಜೇಶ್ವರದ ಸ್ನೇಹಾಲಯದ ಜೋಸೆಫ್‌ ಕ್ರಾಸ್ತಾರ ಕೆಲಸ. ವೃದ್ಧರಿಗೆ ಹಾಗೂ ಮಾನಸಿಕ ಸ್ತಿಮಿತ ಕಳೆದುಕೊಂಡ ಮಂದಿಗೆ ಆಶ್ರಯ, ಆಹಾರ ಒದಗಿಸುತ್ತಿರುವ ಕ್ರಾಸ್ತಾ ಅವರಷ್ಟು ದೊಡ್ಡ ಮಟ್ಟದಲ್ಲಿ ಅಲ್ಲದಿದ್ದರೂ ಕೈಲಾದ ಸೇವೆ ನೀಡಲು ಮುಂದಾಗಿದ್ದೇವೆ ಎನ್ನುತ್ತಾರೆ ತಂಡದ ಸದಸ್ಯರು.

ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.