ಪತಿ ನಿಧನ, ಪತ್ನಿ ಆಸ್ಪತ್ರೆಯಲ್ಲಿ
Team Udayavani, Apr 7, 2018, 9:25 AM IST
ಬೆಳ್ತಂಗಡಿ: ಪತ್ನಿ ಮತ್ತು ಪತಿಗೆ ಸ್ವಲ್ಪವೇ ಹೊತ್ತಿನ ಅಂತರದಲ್ಲಿ ಹೃದಯಾಘಾತ ಸಂಭವಿಸಿ, ಪತಿ ನಿಧನ ಹೊಂದಿದ್ದು, ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಓಡಿಲ್ನಾಳ ಗ್ರಾಮದ ಕರ್ನಂತೋಡಿ ಎಂಬಲ್ಲಿ ನಡೆದಿದೆ. ಕೃಷಿಕರಾಗಿರುವ ಗೆಳೆಯ ಗೌಡ (65) ಮೃತಪಟ್ಟಿದ್ದು, ಇವರ ಪತ್ನಿ ಪುಷ್ಪಾ (55) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಪುಷ್ಪಾ ಅವರಿಗೆ ಎ. 6ರಂದು ಬೆಳಗ್ಗೆ 3 ಗಂಟೆ ಸುಮಾರಿಗೆ ಉಸಿರಾಟದ ಸಮಸ್ಯೆ ಉಂಟಾಗಿದ್ದು, ಇಬ್ಬರು ಮಕ್ಕಳ ಜತೆ ಗೆಳೆಯ ಗೌಡ ಅವರೂ ರಿಕ್ಷಾದಲ್ಲಿ ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಆರೋಗ್ಯ ಚೀಟಿ ಮನೆಯಲ್ಲೇ ಇರುವ ವಿಚಾರ ತಿಳಿದು ಮತ್ತೆ ಮನೆಗೆ ಹಿಂದಿರುಗಿದ್ದಾರೆ. ಈ ವೇಳೆ ಗೆಳೆಯ ಗೌಡ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಮನೆಯ ಬಳಿಯೇ ಕುಸಿದಿದ್ದಾರೆ. ತತ್ಕ್ಷಣ ಸ್ಥಳೀಯ ಖಾಸಗೀ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಪ್ರಯೋಜನವಾಗಲಿಲ್ಲ.
ಮಕ್ಕಳಿಗೆ ಆತಂಕ
ಇತ್ತ ತಂದೆ ನಿಧನರಾದದ್ದು, ತಾಯಿಗೂ ಹೃದಯಾಘಾತ ಉಂಟಾಗಿರುವುದನ್ನು ಗಮನಿಸಿದ ಇಬ್ಬರು ಪುತ್ರರಿಗೆ ಆಘಾತ ಉಂಟಾಗಿದೆ. ಪುಷ್ಪಾ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು, ಬಳಿಕ ಅವರು ಚೇತರಿಸಿಕೊಂಡಿದ್ದಾರೆ. ಪತಿ ನಿಧನರಾಗಿರುವ ವಿಚಾರ ತಿಳಿದರೆ ಅವರು ಆಘಾತಕ್ಕೆ ಈಡಾಗಬಹುದು ಎಂಬ ದೃಷ್ಟಿಯಿಂದ ತಂದೆಯ ನಿಧನದ ವಿಚಾರ ತಾಯಿಗೆ ತಿಳಿಸಿಲ್ಲ. ತಂದೆಯನ್ನು ಕಳೆದುಕೊಂಡಿದ್ದೇವೆ, ತಾಯಿಯನ್ನಾದರೂ ಕಾಪಾಡಿಕೊಳ್ಳಬೇಕು ಎಂದು ದುಃಖಿತರಾಗಿರುವ ಕಿರಿಯ ಪುತ್ರ ಗೋವಿಂದ ಹೇಳಿದ್ದಾರೆ.
ಕೃಷಿಕರು
ಗೆಳೆಯ ಗೌಡ ಕೃಷಿಕರಾಗಿದ್ದು, ಹೈನುಗಾರಿಕೆ ನಡೆಸುತ್ತಿದ್ದರು. ಹೆಂಚಿನ ಮನೆಯಲ್ಲಿ ಪತ್ನಿ ಹಾಗೂ ಇಬ್ಬರು ಪುತ್ರರೊಂದಿಗೆ ಜೀವನ ನಡೆಸುತ್ತಿದ್ದರು. ಹಿರಿಯ ಪುತ್ರ ಶೋಭಾನಂದ ಬೆಳ್ತಂಗಡಿಯಲ್ಲಿ ಗ್ಯಾರೇಜ್ ನಡೆಸುತ್ತಿದ್ದಾರೆ. ಕಿರಿಯ ಪುತ್ರ ಗೋವಿಂದ ಅವರೂ ಟಯರ್ ಪಂಕ್ಚರ್ ಆಂಗಡಿ ನಡೆಸುತ್ತಿದ್ದು, ಇಬ್ಬರೂ ಅವಿವಾಹಿತರು.
ಸುದೀರ್ಘ ಅನಾರೋಗ್ಯವಿರಲಿಲ್ಲ
ಗೆಳೆಯ ಗೌಡ ಅವರು ಆರೋಗ್ಯವಂತರಾಗಿದ್ದು, ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಪುಷ್ಪಾ ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ ಶುಕ್ರವಾರ ಬೆಳಗ್ಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಗಿದೆ.
ಕುಟುಂಬಕ್ಕೆ ಆತಂಕ
ಗೆಳೆಯ ಗೌಡ ನಿಧನರಾಗಿದ್ದರೂ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪುಷ್ಪಾ ಅವರಿಗೆ ನಿಧನದ ಮಾಹಿತಿ ತಿಳಿದಿಲ್ಲ. ಶುಕ್ರವಾರ ಮಧ್ಯಾಹ್ನ ಗೆಳೆಯ ಗೌಡ ಅವರ ಅಂತ್ಯಸಂಸ್ಕಾರ ನಡೆಸಲಾಗಿದೆ. ಈ ವೇಳೆ ಪುಷ್ಪಾ ಅವರನ್ನು ಆಸ್ಪತ್ರೆಯಿಂದ ಕರೆದುಕೊಂಡು ಬರುವ ನಿರ್ಧಾರವನ್ನು ಕುಟುಂಬಸ್ಥರು ಮಾಡಿದ್ದರು. ಆದರೆ ಮುಂದಿನ ಅನಾಹುತ ತಪ್ಪಿಸುವ ಸಲುವಾಗಿ ನಿಧನದ ವಿಷಯವನ್ನು ಮುಚ್ಚಿಡಲಾಗಿದೆ. ಸದ್ಯ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು , ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಮಾಹಿತಿ ನೀಡುವುದು ಹೇಗೆ ಎಂಬ ಆತಂಕ ಮನೆ ಮಂದಿಯದ್ದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ