ಅಕ್ರಮ ಜಾನುವಾರು ಸಾಗಾಟ ಜಾಲ ಬೇಧಿಸಿದ ಉಳ್ಳಾಲ ಪೊಲೀಸರು
ಮೂವರ ಬಂಧನ, 22 ಕೋಣಗಳು ವಶಕ್ಕೆ
Team Udayavani, Jul 14, 2019, 12:43 PM IST
ಉಳ್ಳಾಲ: ಪೊಲೀಸ್ ಅಧಿಕಾರಿ ಗೋಪಿಕೃಷ್ಣ ಅವರ ನೇತೃತ್ವದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ಉಳ್ಳಾಲ ಪೊಲೀಸರು, ತಲಪಾಡಿ ಬಳಿ ಅಕ್ರಮ ಜಾನುವಾರು ಸಾಗಾಟ ಜಾಲವನ್ನು ಬೇಧಿಸಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಜಾನುವಾರುಗಳನ್ನು ಉತ್ತರ ಕರ್ನಾಟಕದಿಂದ ಕೇರಳಕ್ಕೆ ಲಾರಿ ಮೂಲಕ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಆಧರಿಸಿ ಉಳ್ಳಾಲ ಪೊಲೀಸರು ತಲಪಾಡಿ- ಕೇರಳ ಗಡಿ ಪ್ರದೇಶದಲ್ಲಿ ಅಡ್ಡಗಟ್ಟಿ 22 ಕೋಣ ಮತ್ತು ಎಮ್ಮೆಗಳನ್ನು ವಶಕ್ಕೆ ಪಡೆದಿದ್ದಾರೆ.
ವಶಪಡಿಸಲಾದ ಜಾನುವಾರುಗಳನ್ನು ಪಜೀರಿನ ಗೋವನಿತಾಶ್ರಮಕ್ಕೆ ಹಸ್ತಾಂತರಿಸಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.