ಈ ಊರಲ್ಲಿ ನೆರೆ ಇಳಿದ ಬಳಿಕ ಅರಳುತ್ತಿದೆ ಬದುಕು


Team Udayavani, Aug 22, 2019, 5:55 AM IST

kattona

ಬೆಳ್ತಂಗಡಿ: ಪ್ರತೀ ಶುಕ್ರವಾರದಂತೆ ಅಂದೂ ನಾವು ಮಧ್ಯಾಹ್ನದ ವೇಳೆಗೆ ಮಸೀದಿಗೆ ಹೋಗಿದ್ದೆವು. ಪ್ರವಾಹ ನುಗ್ಗಿ ಮನೆ ಮುಳುಗಿರುವ ಸುದ್ದಿ ಬಂತು. ಓಡೋಡಿ ಹೋದರೂ ಮನೆಯ ಬಳಿಗೆ ತೆರಳಲು ಸಾಧ್ಯವಾಗ ಲಿಲ್ಲ. ಮನೆಯಲ್ಲಿದ್ದ ತಂದೆ-ತಾಯಿಗೆ ಕರೆ ಮಾಡಿದರೆ ಪ್ರತಿಕ್ರಿಯೆ ಇಲ್ಲ. ಅರ್ಧ ತಾಸು ಅನುಭವಿಸಿದ ತಳಮಳ ಬಣ್ಣಿಸಲು ಪದಗಳಿಲ್ಲ. ಅವರ ಕರೆ ಬಂದಾಗ ಹೋದ ಜೀವ ಬಂತು…

ನೆರೆಯಲ್ಲಿ ಮುಳುಗಿದ ಮನೆ, ತೋಟಗಳನ್ನು ಶುಚಿಗೊಳಿಸಿ ಹೊಸ ಬದುಕನ್ನು ಕಟ್ಟಿಕೊಳ್ಳುತ್ತಿರುವ ಕೊಲ್ಲಿ ಬಾವಲಿಬನ ನಿವಾಸಿ ಅಬ್ದುಲ್ ನಝೀರ್‌ ಆ.9ರ ಘಟನೆಯನ್ನು ನೆನಪಿಸಿಕೊಂಡದ್ದು ಹೀಗೆ.

‘ಮನೆಯ ಯಾವುದೇ ವಸ್ತು ಉಳಿಸುವುದಕ್ಕೆ ಸಾಧ್ಯವಾಗಿಲ್ಲ’ ಎಂದರು ನಝೀರ್‌.

ಮಿತ್ತಬಾಗಿಲು ಗ್ರಾಮದ ಕೊಲ್ಲಿಬೆಟ್ಟು, ಚೌಕಿಬೆಟ್ಟು, ಬಾವಲಿ ಬನ, ಕೊಂಬಿನಡ್ಕ ಮೊದಲಾದ ಪ್ರದೇಶಗಳಲ್ಲಿ ಹಲವು ಮನೆಗಳು ಪ್ರವಾಹಕ್ಕೆ ತುತ್ತಾಗಿವೆ. ಮೂರು ಮನೆ ಕುಸಿದೇ ಹೋಗಿವೆ. ಕೃಷಿ ಪ್ರದೇಶ ನಾಶವಾಗಿದೆ. ಅಬ್ದುಲ್ ನಝೀರ್‌ ಮನೆ, ರೋಹಿತ್‌ ಕೊಂಬಿನಡ್ಕ, ಜಯಂತ ಪೂಜಾರಿ ನಡುಬೈಲು ಅವರ ಮನೆಗಳು ಪೂರ್ತಿ ಬಿದ್ದು ಹೋಗಿವೆ. ಚೌಕಿಬೆಟ್ಟು ಕಾವೇರಿ ಅವರ ಮನೆಗೆ ಹಾನಿಯಾಗಿದೆ. ಕೊಲ್ಲಿಬೆಟ್ಟು ಉಮ ರುಲ್ ಫಾರೂಕ್‌ ಮನೆ ಬಿರುಕು ಬಿಟ್ಟಿದೆ. ಕೃಷಿಭೂಮಿ ನಾಶವಾಗಿದೆ.

ಮುಳುಗಲು ಹತ್ತೇ ನಿಮಿಷ!

ಮಧ್ಯಾಹ್ನ ನೀರು ಏಕಾಏಕಿ ಏರತೊಡಗಿತು. ಸ್ಥಳೀಯರು ಬಂದು ತಾಯಿಯನ್ನು ರಕ್ಷಿಸಿದರು. ನಾನು ಮತ್ತು ತಮ್ಮ ಹಸುಕರು ರಕ್ಷಿಸಲು ತೆರಳಿದೆವು ಎಂದು ಚೌಕಿಬೆಟ್ಟು ನಿವಾಸಿ ಕಾವೇರಿ ಅವರ ಪುತ್ರ ಪ್ರದೀಪ್‌ ಹೇಳುತ್ತಾರೆ.

ಪ್ರವಾಹದ ನೀರು ಮೇಲೇರುತ್ತಾ ಬಂತು. ಸಿಟ್ಔಟ್‌ನ ದಂಡೆಯಲ್ಲಿಟ್ಟಿದ್ದ ಮೂರು ಕ್ವಿಂಟಾಲ್ನಷ್ಟು ಅಡಿಕೆಯ ಗೋಣಿಗಳು ಕಣ್ಣೆದುರೇ ನೀರು ಪಾಲಾದವು. ರಾಶಿ ಹಾಕಿದ್ದ ಸಾವಿರದೈನೂರು ತೆಂಗಿನ ಕಾಯಿಗಳೂ ಹೋಗಿವೆ. ಎರಡು ಕರೆಂಟ್ ಪಂಪ್‌, ಒಂದು ಸೀಮೆ ಎಣ್ಣೆಯ ಪಂಪ್‌ ಎಲ್ಲಿ ಹೋಗಿವೆಯೋ ಗೊತ್ತಿಲ್ಲ. 400ರಷ್ಟು ಅಡಿಕೆ ಗಿಡಗಳು ನಾಶವಾಗಿವೆ ಎನ್ನುತ್ತಾರೆ ಪ್ರದೀಪ್‌.

ಹತ್ತು ಪವನ್‌ ಚಿನ್ನ ನೀರುಪಾಲು

ನೀರು ಬರುವ ಮುನ್ಸೂಚನೆ ಸಿಕ್ಕಿದ್ದರಿಂದ ಅಗತ್ಯ, ಅಮೂಲ್ಯ ವಸ್ತುಗಳನ್ನು ಸೂಟ್ಕೇಸ್‌ನಲ್ಲಿ ಇರಿಸಿ ಕಟ್ಟಿದ್ದೆವು. ಆದರೆ ನೀರು ಎಷ್ಟು ವೇಗವಾಗಿ ಏರಿಬಂತು ಎಂದರೆ ಅಪ್ಪ ಅಮ್ಮ ಜೀವ ಉಳಿಸಿಕೊಂಡದ್ದೇ ಹೆಚ್ಚು. ತುಂಬಿಸಿಟ್ಟಿದ್ದ ಸೂಟ್ಕೇಸ್‌ ಎತ್ತಿಕೊಳ್ಳುವುದಕ್ಕೆ ಕೂಡ ಅವಕಾಶ ಸಿಗಲಿಲ್ಲ. ಸೂಟ್ಕೇಸ್‌ನಲ್ಲಿದ್ದ ತಮ್ಮನ ಹೆಂಡತಿಯ 10 ಪವನ್‌ನಷ್ಟು ಚಿನ್ನದ ಒಡವೆಗಳು ಕಣ್ಮರೆಯಾಗಿವೆ ಎನ್ನುತ್ತಾರೆ ನಝೀರ್‌.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೆಲವು ಗ್ರಾಮಗಳು ಈ ಬಾರಿಯ ನೆರೆಯಲ್ಲಿ ಕೊಚ್ಚಿ ಹೋಗಿವೆ. ಆ ಗ್ರಾಮಗಳನ್ನು ಪುನರ್‌ ರೂಪಿಸುವುದು, ಸಂತ್ರಸ್ತರಿಗೆ ಬದುಕನ್ನು ಕಟ್ಟಿ ಕೊಡುವುದು ಎಲ್ಲರ ಹೊಣೆಗಾರಿಕೆ. ಸರಕಾರ, ಜನಪ್ರತಿನಿಧಿಗಳು, ಸಂಘ -ಸಂಸ್ಥೆಗಳು ನೊಂದವರ ಬದುಕ ಕಟ್ಟಲು ಹೊರಟಿವೆ. ಬನ್ನಿ ಜತೆಗೂಡೋಣ.

ಟಾಪ್ ನ್ಯೂಸ್

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

8-

Kaniyoor: ಕೆರೆ ಸ್ವಚ್ಛಗೊಳಿಸುವಾಗ ಮುಳುಗಿ ವ್ಯಕ್ತಿ ಸಾವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.