ತರಕಾರಿ ಗ್ರಾಮದಲ್ಲೂ: ಫಸಲು ಕೊರತೆ


Team Udayavani, Aug 13, 2017, 6:55 AM IST

13-PUT-5.jpg

ತರಕಾರಿ ಬೆಳೆಯುವ ಗ್ರಾಮಗಳ ಪೈಕಿ ಚಾರ್ವಾಕ ಗ್ರಾಮ ಜಿಲ್ಲೆಯಲ್ಲಿ ಅಗ್ರಸ್ಥಾನಿ. ಕೃಷಿಕರೇ ಸಣ್ಣ ತಂಡ ರಚಿಸಿಕೊಂಡು, ತರಕಾರಿ ಮಾರಾಟ ಮಾಡುವ ಮೂಲಕ ಗಮನ ಸೆಳೆದ ಗ್ರಾಮವಿದು. ಆದರೆ ಈ ಬಾರಿ ಇಳುವರಿ ಕುಸಿತದ ಚಿಂತೆಯಲ್ಲಿದ್ದಾರೆ.

ಯಾವುದೇ ಬಗೆಯ ತರಕಾರಿಯಾದರೂ ಈ ಗ್ರಾಮದಲ್ಲಿ ಲಭ್ಯ. ಇಲ್ಲಿನ ಹೆಚ್ಚಿನ ಕುಟುಂಬಗಳು ತರಕಾರಿಯನ್ನೇ ಜೀವನಾಧಾರವಾಗಿ ಅವಲಂಬಿಸಿವೆ. ಕೆಲವರು ಉಪ ಉತ್ಪನ್ನವಾಗಿ, ಇನ್ನು ಕೆಲವರು ತರಕಾರಿಯನ್ನೇ ಕಸುಬಾಗಿ ಮಾಡಿಕೊಂಡವರಿದ್ದಾರೆ. ಜಾಗ ಕಡಿಮೆ ಇದ್ದವರೂ ಬೇರೆಲ್ಲಿಯೋ ಜಾಗವನ್ನು ಗೇಣಿಗೆ ಪಡೆದುಕೊಂಡು ತರಕಾರಿ ಬೆಳೆಸಿದವರಿದ್ದಾರೆ. 

ಪ್ರತಿದಿನ ಒಂದೆರಡು ಪಿಕಪ್‌ನಲ್ಲಿ ಮಂಗಳೂರು ಮಾರುಕಟ್ಟೆಗೆ ತರಕಾರಿ ಸರಬರಾಜು ಮಾಡುತ್ತಾರೆ. ತಂಡವಾಗಿ ರಚಿಸಿಕೊಂಡು, ಅಂದರೆ ಎರಡು ದಿನಕ್ಕೊಂದು ತಂಡ ತೆರಳುತ್ತದೆ. ಸುಮಾರು 10 ಕೃಷಿಕರ ತರಕಾರಿ ಇಲ್ಲಿ ಜಮೆಯಾಗುತ್ತದೆ. ಕೆ.ಜಿ. ಲೆಕ್ಕದಲ್ಲಿ ತರಕಾರಿ ತಂದುಕೊಡುವ ಕೃಷಿಕರ ತರಕಾರಿಯನ್ನು ಉಪೇಕ್ಷಿಸುವುದಿಲ್ಲ. ಮರುದಿನ ಇನ್ನೊಂದು 10 ಜನ ಕೃಷಿಕರ ತರಕಾರಿ ಸಿದ್ಧವಾಗಿರುತ್ತದೆ. ತರಕಾರಿ ಬೆಳೆದ ಕೃಷಿಕರೆಲ್ಲರೂ ಮಾರಾಟಕ್ಕೆ ಹೋಗುವುದಿಲ್ಲ. ಒಂದಿಬ್ಬರು ಮಾತ್ರ ತೆರಳುತ್ತಾರೆ. ಸಂಜೆ ಬಂದು ಹಣವನ್ನು ಕೃಷಿಕರಿಗೆ ಮರಳಿಸುತ್ತಾರೆ. 

2ನೇ ಹಂತದ ಕೃಷಿ
ವರ್ಷಕ್ಕೆ ಎರಡು ಬಾರಿ ಇಳುವರಿ ತೆಗೆಯಲಾಗುತ್ತದೆ. ಮೇ- ಜೂನ್‌ನಲ್ಲಿ ಬೀಜ ಹಾಕಿದರೆ ಸೆಪ್ಟಂಬರ್‌ನಲ್ಲಿ  ಕೊಯ್ಲು ನಡೆಯುತ್ತದೆ. ನವೆಂಬರ್‌- ಡಿಸೆಂಬರ್‌ನಲ್ಲಿ ಮತ್ತೂಮ್ಮೆ ಬೀಜ ಬಿತ್ತಿದರೆ, ಮಾರ್ಚ್‌- ಎಪ್ರಿಲ್‌ ವೇಳೆಗೆ ಮತ್ತೂಂದು ಹಂತದ ಫಸಲು ಸಿದ್ಧ. ವರ್ಷದ ಒಂಬತ್ತು ತಿಂಗಳು ಇಲ್ಲಿನ ಕೃಷಿಕರು ತರಕಾರಿ ಮಾರಾಟದಲ್ಲಿ ತೊಡಗಿಕೊಂಡಿರುತ್ತಾರೆ. ಮೇ, ಜೂನ್‌, ಜುಲೈ ತಿಂಗಳಲ್ಲಿ ತರಕಾರಿ ಮಾರಾಟ ಕಡಿಮೆ. ಸದ್ಯ ಮೊದಲ ಹಂತದ ಕೊಯ್ಲಿಗೆ ಸಿದ್ಧತೆ ನಡೆಯುತ್ತಿದೆ. ತರಕಾರಿ ಪ್ರಮಾಣ ಗಮನಿಸಿದಾಗ ವರ್ಷದಿಂದ ವರ್ಷಕ್ಕೆ ಇಳುವರಿ ಕುಸಿಯುತ್ತಿರುವುದರ ಬಗ್ಗೆ ಸ್ಥಳೀಯ ಕೃಷಿಕರು ಆತಂಕ ವ್ಯಕ್ತಪಡಿಸುತ್ತಾರೆ.

ಫಸಲು ಕಡಿಮೆ
ಎರಡು ವರ್ಷಗಳ ಹಿಂದೆ ದಿನಕ್ಕೆ ಎರಡು ಪಿಕಪ್‌ಗಿಂತ ಹೆಚ್ಚು ತರಕಾರಿ ಮಂಗಳೂರಿಗೆ ಕೊಂಡೊಯ್ಯಲಾಗುತ್ತಿತ್ತು. ಈಗ ತರಕಾರಿ ಕಡಿಮೆಯಾಗುತ್ತಾ ಬಂದಿದ್ದು, ಒಂದು ಪಿಕಪ್‌ ಮಾತ್ರ ಮಂಗಳೂರಿಗೆ ಹೋಗುತ್ತಿದೆ. ಇದರಲ್ಲಿ ಸುಮಾರು 22 ಕ್ವಿಂಟಾಲ್‌ ತರಕಾರಿ ಹಿಡಿಯುತ್ತದೆ. ಆದ್ದರಿಂದ ಸ್ವಂತ ದುಡಿಮೆ ಯೊಂದೇ ಜೀವನಕ್ಕೆ ದಾರಿ ಎಂಬುದನ್ನು ಕಂಡುಕೊಂಡಿದ್ದಾರೆ.

ಘಟ್ಟದ ತರಕಾರಿ ಪೈಪೋಟಿ
ಊರ ಬೆಳೆ ಎಂಬ ಕಾರಣಕ್ಕೆ ದೊಡ್ಡ ಲಾಭವೇನೂ ಕೃಷಿಕರ ಕೈಗೆ ಇನ್ನೂ ಎಟುಕಿಲ್ಲ. ಘಟ್ಟ ಪ್ರದೇಶದಿಂದ ಬರುವ ತರಕಾರಿ ಮುಂದೆ ಸಿಕ್ಕಿದ ದರಕ್ಕೆ ಊರ ತರಕಾರಿಯನ್ನು ಮಾರಾಟ ಮಾಡಬೇಕು. ಇನ್ನೂ ಕೆಲವು ಸಲ ಹೋಲ್‌ ಸೇಲ್‌ ದರಕ್ಕೆ ಮಾರಾಟ ಮಾಡಿದ್ದು ಇದೆ. ಜನರು ದರವನ್ನು ಮಾತ್ರ ನೋಡುತ್ತಾರೆ. ಗುಣಮಟ್ಟ ಕೇಳುವವರಿಲ್ಲ ಎನ್ನುತ್ತಾರೆ ಕೃಷಿಕರು.  ಹವಾಮಾನ ವೈಪರೀತ್ಯಕ್ಕೆ  ಈ ವರ್ಷ ಫಸಲು ಕಡಿಮೆ ಇದೆ. ಧಾರಣೆ ಎಷ್ಟರಲ್ಲಿ ನಿಲ್ಲುತ್ತದೆ ಎಂಬ ಬಗ್ಗೆಯೂ ಆತಂಕವೂ ಇದೆ.

ನೆಚ್ಚಿ ಕೊಂಡಿದ್ದೇನೆ 
ಸುಮಾರು 5 ಎಕರೆ ಜಾಗದಲ್ಲಿ ತರಕಾರಿ ಬೆಳೆಯುತ್ತಿದ್ದೇನೆ. ಹಲವು ಬಗೆಯ ತರಕಾರಿಗಳಿವೆ. ನೀರಿಗಾಗಿ ಬಳಿಯಲ್ಲೇ ಹರಿಯುವ ಕುಮಾರಧಾರಾ ನದಿಯಿದೆ. ವರ್ಷಪೂರ್ತಿ ಶ್ರಮ ಪಟ್ಟು  ದುಡಿದರೆ, ಜೀವನ ನಿರ್ವಹಣೆಗೆ ಸಮಸ್ಯೆಯಿಲ್ಲ. ಇದರ ಜತೆಗೆ ಅಡಿಕೆಯೂ ಇರುವುದರಿಂದ, ಅಲ್ಪಾವಧಿ ಬೆಳೆಯಾಗಿ ತರಕಾರಿಯನ್ನು ನೆಚ್ಚಿಕೊಂಡಿದ್ದೇನೆ. ಅಡಿಕೆ ವರ್ಷಕ್ಕೆ ಒಂದು ಬಾರಿ ಮಾತ್ರ ಆದಾಯ ನೀಡುತ್ತದೆ. ಆದರೆ ತರಕಾರಿ ದಿನನಿತ್ಯದ ಖರ್ಚಿಗೂ ಹಣ ಒದಗಿಸುತ್ತದೆ.
ಗಂಗಾಧರ ಜತ್ತೋಡಿ, ಕೃಷಿಕ ಚಾರ್ವಾಕ

ಗಣೇಶ್‌ ಎನ್‌. ಕಲ್ಲರ್ಪೆ

ಟಾಪ್ ನ್ಯೂಸ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.