ಗ್ರಾಮ ಸಮೃದ್ಧಿ, ಸ್ವಚ್ಚತಾ ಪ್ರಾತ್ಯಕ್ಷಿಕೆ ಉದ್ಘಾಟನೆ
Team Udayavani, Oct 6, 2017, 1:15 PM IST
ಮೂಲ್ಕಿ: ಗಾಮೀಣ ಪ್ರದೇಶಗಳ ಪರಿಸರವನ್ನು ಹಾಳುಗೆಡವಲು ಬಿಡದೆ ಹಸಿರಿನಿಂದ ಕೂಡಿದ ಸಮೃದ್ಧ ಶುದ್ಧ ಗಾಳಿಯ ವಾತಾವರಣದಲ್ಲಿ ಉಳಿಸುವ ಕೆಲಸ ನಮ್ಮ ಗ್ರಾಮದಲ್ಲಿ ನಮ್ಮೆಲ್ಲರಿಂದ ಆಗಬೇಕಾಗಿದೆ ಎಂದು ಕಿಲ್ಪಾಡಿ ಪಂಚಾಯತ್ ಅಧ್ಯಕ್ಷ ಶ್ರೀಕಾಂತ್ ರಾವ್ ಹೇಳಿದರು.
ಅವರು ಕಿಲ್ಪಾಡಿ ಪಂಚಾಯತ್ ಆಶ್ರಯದಲ್ಲಿ ಕಿಲ್ಪಾಡಿಯ ಮೆಡಲಿನ್ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ನಡೆದ ಗ್ರಾಮ ಸಮೃದ್ಧಿ ಮತ್ತು ಸ್ವಚ್ಚತಾ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪಂಚಾಯತ್ ಸದಸ್ಯರು, ಸಿಬಂದಿ ಹಾಗೂ ವಿದ್ಯಾರ್ಥಿಗಳು ವಿವಿಧ ಘೋಷಣ ಫಲಕಗಳನ್ನು ಹೊತ್ತು ಕಿಲ್ಪಾಡಿ ಪಂಚಾಯತ್ನಿಂದ ಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಲೋನಿಯವರೆಗೆ ಜಾಥಾ ನಡೆಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರಿಶ್ಚಂದ್ರ, ಕಾಲೇಜಿನ ಪ್ರಾಂಶುಪಾಲರಾದ ಸಿ| ಜೆಸ್ಸಿ ಕ್ರಾಸ್ತ, ಸದಸ್ಯರಾದ ಗೋಪಿನಾಥ ಪಡಂಗ, ನಾಗರಾಜ, ಶಾಂತಾ, ಅಬ್ದುಲ್ ಷರೀಫ್, ಸಿಬಂದಿ ರಮೇಶ್ ಬಂಗೇರ,ಸುರೇಶ್ ಕೊಲಕಾಡಿ, ಸಬಿತಾ ಶೆಟ್ಟಿ,ಚೇತನ್, ಯತೀಶ್, ತಾರಾನಾಥ ಶೆಟ್ಟಿ ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
Mangaluru; ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್