‘ಭಾರತೀಯ ಸಿನೆಮಾಗಳ ಪಾತ್ರ ಮಹತ್ತರ’
Team Udayavani, Oct 22, 2017, 12:00 PM IST
ಮೂಡಬಿದಿರೆ: ಜಾಗತಿಕ ಸಿನೆಮಾ ಅಧ್ಯಯನದಲ್ಲಿ ಭಾರತೀಯ ಸಿನೆಮಾ ರಂಗಕ್ಕೆ ವಿಶೇಷ ಸ್ಥಾನವಿದೆ. ಭಾರತೀಯ ಸಂಸ್ಕೃತಿ, ಸಂಪ್ರದಾಯವನ್ನು ಜಗತ್ತಿಗೆ ತಿಳಿಸಿಕೊಡುವಲ್ಲಿ ಭಾರತೀಯ ಸಿನೆಮಾಗಳ ಪಾತ್ರ ಮಹತ್ವದ್ದು ಎಂದು ಮಣಿಪಾಲ ವಿಶ್ವವಿದ್ಯಾಲಯದ
ಯುರೋಪಿಯನ್ ಸ್ಟಡೀಸ್ನ ಡಾ| ಟಟಿಯಾನಾ ಸುರೆಲಝ್ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿ ವೇದಿಕೆ ‘ರೋಸ್ಟ್ರಮ್-ಸ್ಪೀಕರ್ ಕ್ಲಬ್’ ಆಯೋಜಿಸಿದ್ದ ‘ಪಾಶ್ಚಿಮಾತ್ಯ ದೃಷ್ಟಿಕೋನದಲ್ಲಿ ಭಾರತೀಯ ಸಿನೆಮಾ’ ಎಂಬ ವಿಷಯದ ಕುರಿತಾಗಿ ಅವರು ವಿಶೇಷ ಉಪನ್ಯಾಸ ನೀಡಿದರು.
ಪಾಶ್ಚಿಮಾತ್ಯ ಜಗತ್ತಿಗೆ ಭಾರತೀಯ ಸಿನೆಮಾ ರಂಗ ಎಂದರೆ ಬಾಲಿವುಡ್ ಎಂಬಂತಾಗಿದೆ. ಹಿಂದಿ ಸಿನೆಮಾಗಳು ಜಾಗತಿಕ ಮಟ್ಟದಲ್ಲಿ ಬೆಳೆಯಲು ಕಾರಣ ಅದರಲ್ಲಿರುವ ಸಾಂಸ್ಕೃತಿಕ ಅಂಶಗಳು ಹಾಗೂ ಭಾರತೀಯ ಜನಜೀವನವನ್ನು ಬಿಂಬಿಸುವ ವಿಧಾನ. ಸಂಗೀತಕ್ಕೆ ಈ ಚಿತ್ರಗಳಲ್ಲಿ ಹೆಚ್ಚು ಪ್ರಾಧಾನ್ಯ ಇರುವುದು ಕೂಡ ಬಾಲಿವುಡ್ ಜನಪ್ರಿಯಗೊಳ್ಳಲು ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.
ಸಿನೆಮಾ ಒಂದೇ ಆದರೂ ಕೂಡ ಅದಕ್ಕೆ ವಿಭಿನ್ನ ಆಯಾಮಗಳಿರುತ್ತವೆ; ಇದರಿಂದಾಗಿ ಜನ ಅದನ್ನು ಗ್ರಹಿಸುವ ರೀತಿಯೂ ವಿಭಿನ್ನವಾಗಿರುತ್ತದೆ. ಇದೇ ಕಾರಣದಿಂದಾಗಿ ಕೆಲವು ಬಾರಿ ಸಿನೆಮಾಗಳನ್ನು ತಪ್ಪಾಗಿ ಅರ್ಥೈಸಲಾಗುತ್ತದೆ. ಅನೇಕ ಸಿನೆಮಾಗಳಲ್ಲಿ ಎರಡು-ಮೂರು ಭಾಷೆಗಳನ್ನು ಬಳಸಲಾಗುತ್ತದೆ. ಈ ರೀತಿಯ ಭಾಷಾ ಬಳಕೆ ವಿದೇಶೀ ಪ್ರೇಕ್ಷಕರಲ್ಲಿ ಗೊಂದಲಗಳನ್ನು ಮೂಡಿಸುತ್ತದೆ. ಸಿನೆಮಾ ಈ ರೀತಿಯ ಗೊಂದಲಗಳಿಂದ ಹೊರತಾಗಿರಬೇಕು ಎಂದು ಡಾ| ಟಟಿಯಾನಾ ಹೇಳಿದರು.
ಭಾರತೀಯ ಸಿನೆಮಾ ಪಡೆಯುತ್ತಿರುವ ಹೊಸ ಆಯಾಮಗಳನ್ನು ತಿಳಿಸಿದ ಅವರು, ಸಿನೆಮಾ ಮನೋರಂಜನೆಗೆ ಮಾತ್ರ ಸೀಮಿತವಾಗದೇ ಹೊಸ ಆಲೋಚನೆಗಳನ್ನು ಹುಟ್ಟು ಹಾಕಬೇಕು. ಪ್ರಸ್ತುತ ಹಿಂದಿ ಸಿನೆಮಾಗಳನ್ನು ಗಮನಿಸುವಾಗ ಅವು ಅತ್ಯುತ್ತಮ ಕಥಾ ಹಂದರವನ್ನು ಹೊಂದಿದ್ದು, ಅನಿರೀಕ್ಷಿತ ತಿರುವುಗಳಿಂದ ಕೂಡಿರುತ್ತವೆ. ಜತೆಗೆ ಹೀರೋಯಿಸಂನಿಂದ ಹೊರಬಂದು ನಟನಾ ಕೌಶಲಕ್ಕೆ ಹೆಚ್ಚು ಪ್ರಾಮುಖ್ಯ ಸಿಗುತ್ತಿದೆ ಎಂದರು. ರೋಸ್ಟ್ರಮ್ ಕ್ಲಬ್ನ ಸಂಚಾಲಕ ದೀಪಕ್ ರಾಜ್, ಗುರುದತ್ ಸೋಮಯಾಜಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ