ಭಾರತದ ಪ್ರಥಮ ತ್ರೀಡಿ ಪ್ಲಾನೆಟೋರಿಯಂ


Team Udayavani, Feb 25, 2018, 10:10 AM IST

panetorium.jpg

ಮಂಗಳೂರು: ಪುಟ್ಟ ಕಟ್ಟಡದೊಳಗೆ ಅನಂತ ಸೌರಮಂಡಲದ ಅನಾವರಣ, ನಳನಳಿಸುವ ನಕ್ಷತ್ರ ಲೋಕದ ನೈಜ ಅನುಭವ, ಗ್ರಹ, ಜೀವ ಸಂಕುಲದ ಹುಟ್ಟಿನ ರಹಸ್ಯದ ಗುಟ್ಟನ್ನು ಕಣ್ಣ ಮುಂದೆ ಕಟ್ಟಿಕೊಡುವ ತ್ರಿಡಿ ಚಮತ್ಕಾರ, ಉಕ್ಕೇರಿ ಬರುವ ಸಾಗರ, ಮುನ್ನುಗ್ಗಿ ಬರುವ ಜಲಚರ, ಆಕಾಶ ಕಾಯಗಳು… ನಗರದ ಪಿಲಿಕುಳದ ಡಾ| ಶಿವರಾಮ ಕಾರಂತ ಬಯೋಲಾಜಿಕಲ್‌ ಪಾರ್ಕ್‌ನಲ್ಲಿ ಉದ್ಘಾಟನೆಗೆ ಸಿದ್ಧಗೊಂಡಿರುವ ಭಾರತದ ಪ್ರಥಮ, ವಿಶ್ವದ 21ನೇ ಅತ್ಯಾಧುನಿಕ ಹೈಬ್ರಿಡ್‌ ತ್ರಿಡಿ “ಸ್ವಾಮಿ ವಿವೇಕಾನಂದ ತಾರಾಲಯ’ ಕಟ್ಟಿಕೊಡುವ ಕೌತುಕಮಯ ಅನುಭವ ಇದು. ದೇಶದ ಅಪರೂಪದ ಈ ತಾರಾಲಯ ಮಾ. 1ರಂದು ಲೋಕಾರ್ಪಣೆಗೊಳ್ಳಲಿದೆ.

ಮಕ್ಕಳಿಗೆ ಶಿಕ್ಷಣ, ಖಗೋಳ ಶಾಸ್ತ್ರಜ್ಞರಿಗೆ ಸಂಪನ್ಮೂಲ ಕೇಂದ್ರ, ವಯಸ್ಕರಿಗೆ ಸೌರಮಂಡಲದ  ರಹಸ್ಯಗಳನ್ನು ತಿಳಿಸುವ ಕೇಂದ್ರವಾಗಿ ಮೂಡಿ ಬಂದಿರುವ ತ್ರೀಡಿ ತಾರಾಲಯ ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯ ಮತ್ತು ರಾಜ್ಯ ಸರಕಾರದ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಅನುದಾನದೊಂದಿಗೆ ಸ್ಥಾಪನೆಗೊಂಡಿದೆ. ಅಪ್ಟೋ-ಮೆಕ್ಯಾನಿಕಲ್‌ ಮತ್ತು 8ಕೆ ಡಿಜಿಟಲ್‌ ಪ್ರೊಜೆಕ್ಷನ್‌ ಸಿಸ್ಟಮ್‌ ಅಳವಡಿಸಿರುವ ಹೈಬ್ರಿಡ್‌ ತಾರಾಲಯ ಆ್ಯಕ್ಟಿವ್‌ ತ್ರೀಡಿ ವ್ಯವಸ್ಥೆಯ ಮೂಲಕ ವೀಕ್ಷಕರಿಗೆ ಹೊಸ ಅನುಭವ ನೀಡುತ್ತದೆ.

18 ಮೀ. ವ್ಯಾಸದ ಗುಮ್ಮಟದೊಳಗೆ ಅತ್ಯಂತ ಪರಿಣಾಮಕಾರಿಯಾದ ನ್ಯಾನೋಸಿಮ್‌ ಫ್ಯಾಬ್ರಿಕೇಶನ್‌ ಅಳವಡಿಕೆ ಮಾಡಲಾಗಿದೆ. ಅಮೆರಿಕದಿಂದ ಬಂದಿರುವ ಪರಿಣತರೊಂದಿಗೆ ದೇಶದ ಹಲವಾರು ತಜ್ಞರು ಇದರ ಅಳವಡಿಕೆಯನ್ನು ನಿರ್ವಹಿಸಿದ್ದಾರೆ. ನ್ಯಾನೋಸಿಮ್‌ ಅಳವಡಿಕೆಯಿಂದ ಖಗೋಳ ವಿಜ್ಞಾನದ ಪ್ರದರ್ಶನ ಉತ್ಕೃಷ್ಟ ಮಟ್ಟದಲ್ಲಿ ನಡೆಯಲಿದೆ.

ನಭೋಮಂಡಲದ ನೈಜ ಅನುಭವ
ಪಿಲಿಕುಳದಲ್ಲಿ ಸ್ಥಾಪಿಸಲಾಗಿರುವ ತಾರಾಲಯ ಹಲವಾರು ವೈಶಿಷ್ಟéಗಳನ್ನು ಹಾಗೂ ವಿಶೇಷ ತಂತ್ರ ಜ್ಞಾನಗಳನ್ನು ಹೊಂದಿದೆ. ಇಲ್ಲಿ ಅಳವಡಿಸಿರುವ 8ಕೆ ಯುಎಚ್‌ಡಿಯಿಂದ ವೀಕ್ಷಕರಿಗೆ ನಭೋಮಂಡಲದ ನೈಜ ಅನುಭವ ಸಿಗಲಿದೆ. ಹಿಂದೆ ಇದ್ದ ಅಪ್ಟೊ ಮೆಕಾನಿ
ಕಲ್‌ ಮತ್ತು ಈಗಿನ ಡಿಜಿಟಲ್‌ ತಂತ್ರಜ್ಞಾನ ಎರಡೂ ಸಂಯೋಜಿತವಾಗಿ ಹೈಬ್ರಿಡ್‌ ತಂತ್ರಜ್ಞಾನ ಕಾರ್ಯ ನಿರ್ವಹಿಸಲಿದ್ದು, ಗ್ಯಾಲಕ್ಸಿ, ನಕ್ಷತ್ರಗಳು, ಗ್ರಹಗಳ ಸಹಿತ ಎಲ್ಲ ಆಕಾಶಕಾಯಗಳ ಚಿತ್ರಣಗಳನ್ನು ಅತ್ಯಂತ ಸ್ಪಷ್ಟವಾಗಿ ನೋಡಬಹುದಾಗಿದೆ. 4ಕೆ ಅಲ್ಟ್ರಾ ಎಚ್‌ಡಿ ಪರದೆ ಚಿತ್ರಗಳನ್ನು 1080 ಪಿ ಫುಲ್‌ ಎಚ್‌ಡಿಗಿಂತ ನಾಲ್ಕು ಪಟ್ಟು ಉತ್ತಮವಾಗಿ ಮೂಡಿಸುತ್ತವೆ.

ಮಾ.1ರಂದು ಉದ್ಘಾಟನೆ
ತ್ರೀಡಿ ತಾರಾಲಯ ಮಾ. 1ರಂದು ಲೋಕಾರ್ಪಣೆಗೊಳ್ಳಲಿದೆ. ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್‌. ಸೀತಾರಾಂ, ಸಚಿವರಾದ ಬಿ.ರಮಾನಾಥ ರೈ, ಯು.ಟಿ. ಖಾದರ್‌ ಅವರ ಉಪಸ್ಥಿತಿಯಲ್ಲಿ, ಶಾಸಕ ಅಭಯಚಂದ್ರ ಅವರ ಅಧ್ಯಕ್ಷತೆಯಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಸೊಸೈಟಿ ಅಧ್ಯಕ್ಷ, ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಇದೇ ಸಂದರ್ಭ ವಾಟರ್‌ ರಾಕೆಟ್‌ ಪ್ರಾತ್ಯಕ್ಷಿಕೆ, ಡ್ರೋನ್‌ ಪ್ರದರ್ಶನವಿದೆ ಎಂದರು.

ಮಂಗಳೂರಿನ ಹೆಗ್ಗುರುತು: ಲೋಬೊ
ಮಂಗಳೂರಿನಲ್ಲಿ ಸ್ಥಾಪನೆಯಾಗಿರುವ ತ್ರೀಡಿ ತಾರಾಲಯ ದೇಶ ವಿದೇಶಗಳಿಂದ ಸಂಶೋಧಕರು, ಪ್ರವಾಸಿಗರನ್ನು ಆಕರ್ಷಿಸಲಿದ್ದು, ಹೆಗ್ಗುರುತುಗಳಲ್ಲೊಂದಾಗಲಿದೆ ಎಂದು ಜೆ. ಆರ್‌. ಲೋಬೋ ವಿವರಿಸಿದರು. 2008ರಲ್ಲಿ ಯೋಜನೆ ರೂಪುಗೊಂಡಾಗ ಇದರ ಅಂದಾಜು ವೆಚ್ಚ 8 ಕೋ. ರೂ.ಆಗಿತ್ತು. ಆದರೆ ಬಳಿಕ ತಂತ್ರಜ್ಞಾನ ಹಾಗೂ ವಿನ್ಯಾಸಗಳಲ್ಲಿ ಆದ ಬದಲಾವಣೆಗಳಿಂದಾಗಿ ಇದರ ವೆಚ್ಚ 36 ಕೋ. ರೂ. ತಲುಪಿತು. ರಾಜ್ಯ ಸರಕಾರದ ತನ್ನ ಅನುದಾನದ ಜತೆಗೆ ಹೆಚ್ಚುವರಿಯಾಗಿ ಅವಶ್ಯವಿದ್ದ 12 ಕೋ. ರೂ. ಅನುದಾನವನ್ನು ನೀಡಿದೆ. ರಾಜ್ಯದ ಹಿಂದಿನ ಸರಕಾರ ಕೂಡ ಆರಂಭಿಕ ಹಂತದಲ್ಲಿ ಯೋಜನೆಗೆ ನೆರವು ನೀಡಿತ್ತು ಎಂದವರು ಹೇಳಿದರು.

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ| ಕೆ.ವಿ. ರಾವ್‌, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಸೊಸೈಟಿ ಸದಸ್ಯ ಕಾರ್ಯದರ್ಶಿ ವಿ. ಪ್ರಸನ್ನ, ಅಭಿಜಿತ್‌ ಉಪಸ್ಥಿತರಿದ್ದರು.

ಮಾ. 2ರಿಂದ ವೀಕ್ಷಣೆಗೆ ಅವಕಾಶ
ತಾರಾಲಯ ಒಟ್ಟು 170 ಆಸನಗಳನ್ನು ಹೊಂದಿದ್ದು, ದಿನವೊಂದಕ್ಕೆ ತಲಾ 25 ನಿಮಿಷಗಳಂತೆ 6 ಪ್ರದರ್ಶನಗಳಿರುತ್ತವೆ. ಕನ್ನಡ, ಹಿಂದಿ, ಇಂಗ್ಲಿಷ್‌ ಭಾಷೆಗಳಲ್ಲಿ ವಿವರಣೆ ನೀಡಲಾಗುತ್ತದೆ. ಪ್ರವೇಶ ದ್ವಾರದ ಬಲಬದಿಯಲ್ಲಿರುವ ಕೌಂಟರ್‌ನಲ್ಲಿ ಟಿಕೆಟ್‌ ನೀಡಲಾಗುವುದು. ವಯಸ್ಕರಿಗೆ 60 ರೂ. ಹಾಗೂ ಮಕ್ಕಳಿಗೆ 25 ರೂ. ಪ್ರವೇಶ ಶುಲ್ಕವಿರುತ್ತದೆ. ವಿಶೇಷ ಪ್ಯಾಕೇಜ್‌ ರೂಪಿಸಲಾಗಿದ್ದು, ಇದರ ಅನ್ವಯ 100 ರೂ. ಪಾವತಿಸಿ ತಾರಾಲಯ ಹಾಗೂ ಪಿಲಿಕುಳದ ಎಲ್ಲ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಬಹುದಾಗಿದೆ. ಮಾ. 7ರಿಂದ ಆನ್‌ಲೈನ್‌ನಲ್ಲಿ ಬುಕ್ಕಿಂಗ್‌ ಸೌಲಭ್ಯ ಆರಂಭಿಸಲಾಗುವುದು. ಉದ್ಘಾಟನೆಯ ದಿನದಂದು ಆಗಮಿಸುವ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಾರ್ವಜನಿಕರಿಗೆ ಮುಂದಿನ ಎರಡು ದಿನಗಳಿಗೆ ಉಚಿತ ಪ್ರದರ್ಶನ ಪಾಸ್‌ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ತಿಳಿಸಿದರು.

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-sdssd

Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.