ಐಒಬಿ ಹಗರಣ: ಮಧ್ಯವರ್ತಿ ಬಂಧನ
Team Udayavani, Jan 27, 2018, 9:45 AM IST
ಸುರತ್ಕಲ್: ಕುಳಾಯಿ ಐಒಬಿ ಬ್ಯಾಂಕಿನ ರಾಜ್ಯ ಸರಕಾರಿ ಸ್ವಾಮ್ಯದ ಕೆಆರ್ಐಡಿಎಲ್ನ ಬ್ಯಾಂಕ್ ಠೇವಣಿ ಖಾತೆಯಿಂದ 55 ಕೋ.ರೂ. ವರ್ಗಾವಣೆ ಸಂಬಂಧಿಸಿ ಮಧ್ಯವರ್ತಿ, ಮುಂಬಯಿ ಮೂಲದ ಅಮಿತ್ ದವೆ(38)ಯನ್ನು ಸುರ ತ್ಕಲ್ ಪೊಲೀಸರು ಬಂಧಿಸಿ ಕೋರ್ಟಿಗೆ ಹಾಜರುಪಡಿಸಿದ್ದಾರೆ.
ಕುಳಾಯಿ ಐಒಬಿ ಶಾಖೆಯಿಂದ 2017ರ ಅ.24 ಮತ್ತು 30 ರಂದು ಒಟ್ಟು 55 ಕೋ.ರೂ. ಬೇನಾಮಿ ಖಾತೆಗೆ ಅಕ್ರಮವಾಗಿ ವರ್ಗಾಯಿಸಲಾಗಿತ್ತು. ಬಳಿಕ ಬ್ಯಾಂಕಿನ ಅ ಧಿಕಾರಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗಿತ್ತು. ಆರೋಪಿಗಳ ಜತೆ ನಿಕಟ ಸಂಬಂಧ ಹೊಂದಿದ್ದ ವ್ಯಕ್ತಿಯ ಮೇಲೆ ಕಣ್ಣಿಟ್ಟಿದ್ದ ಪೊಲೀಸರು ಮುಂಬಯಿ ಪೊಲೀಸರ ಗಮನಕ್ಕೆ ತಂದಿದ್ದರು. ಇದರಂತೆ ಎಮಿಗ್ರೇಷನ್ ಪೊಲೀಸರು ಅಮಿತ್ ದವೆಯನ್ನು ಕರ್ನಾಟಕ ಪೊಲೀಸರಿಗೆ ಹಸ್ತಾಂತರಿಸಿದ್ದರು. ಈತನನ್ನು ಒಂದು ವಾರ ಕಾಲ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಫೆ.3ರ ವರೆಗೆ ನ್ಯಾಯಾಂಗ ಬಂಧನ ವಿ ಸಲಾಗಿದೆ.
ಈಗಾಗಲೇ ಸಿಬಿಐ ವಿಚಾರಣೆ ಎದುರಿಸುತ್ತಿರುವ ಚೆನ್ನೈ ಮೂಲದ ವ್ಯಕ್ತಿ ಮತ್ತು ಕೋಲ್ಕತಾದ ವ್ಯಕ್ತಿ ಬಗ್ಗೆ ಈತ ಮಾಹಿತಿ ನೀಡಿದ್ದಾನೆ ಎಂದು ತಿಳಿದು ಬಂದಿದೆ. ಹಗರಣದಲ್ಲಿ ಭಾಗಿಯಾದವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಇದುವರೆಗೂ ಹಣದ ಬಗ್ಗೆ ಸರಿಯಾದ ಸುಳಿವು ಲಭಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ