ಅಧಿಕಾರಿಗಳ ಬೇಜವಾಬ್ದಾರಿ; ಸರಕಾರಿ ಸೌಲಭ್ಯ ವಂಚಿತ ಗ್ರಾಮಸ್ಥರು

ಮೂಡುಕೋಡಿ: 94ಸಿ ಹಕ್ಕುಪತ್ರದಲ್ಲಿ ಇನ್ಯಾರಧ್ದೋ ಸರ್ವೇ ನಂಬರ್‌

Team Udayavani, May 10, 2019, 10:44 AM IST

belthangadi-tdy-1..

ಕೊಪ್ಪದಬಾಕಿಮಾರು ಸರಕಾರಿ ಜಾಗದಲ್ಲಿ ವಾಸವಾಗಿರುವ ಅತಂತ್ರ ಕುಟುಂಬಗಳ ಮನೆಗಳು.

ವೇಣೂರು ಮೇ 9: ಮೂಡುಕೋಡಿ ಗ್ರಾಮದ ಕೊಪ್ಪದಬಾಕಿಮಾರುವಿನಲ್ಲಿ ಹತ್ತಾರು ವರ್ಷಗಳಿಂದ ಸರಕಾರಿ ಜಾಗದಲ್ಲಿ ನೆಲೆ ಕಂಡವರಿಗೆ ಕೊನೆಗೂ 2017ರಲ್ಲಿ ಹಕ್ಕುಪತ್ರ ನೀಡಲಾಗಿತ್ತು. ಆದರೆ ಅಧಿಕಾರಿ ಗಳ ಬೇಜವಾಬ್ದಾರಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿದೆ.

94ಸಿ ಯೋಜನೆಯಡಿ ಸುಮಾರು 20ಕ್ಕೂ ಅಧಿಕ ಕುಟುಂಬಗಳು ಪಡೆದಿರುವ ಹಕ್ಕುಪತ್ರದಲ್ಲಿ ಸರ್ವೇ ನಂ. ವ್ಯತ್ಯಾಸ ಕಂಡು ಬಂದಿದೆ. ಅಧಿಕಾರಿಗಳ ಬೇಜವಾಬ್ದಾರಿ ಯಿಂದಾಗಿ ಕಳೆದೆರಡು ವರ್ಷಗಳಿಂದ ಆರ್‌ಟಿಸಿ ಲಭಿಸದೆ ಪರದಾಡುತ್ತಿದ್ದಾರೆ.

ವೇಣೂರು ಹೋಬಳಿಯ ಮೂಡು ಕೋಡಿಯ ಕೊಪ್ಪದಬಾಕಿಮಾರುವಿನ ಸುಮಾರು 30ಕ್ಕೂ ಅಧಿಕ ಕುಟುಂಬಗಳು ಸರಕಾರದ ಸೌಲಭ್ಯಗಳಿಂದ ವಂಚಿತವಾಗಿ ನರಕಯಾತನೆ ಅನುಭವಿಸುತ್ತಿವೆ. ಇಲ್ಲಿನ ಗೋಮಾಳ ಜಾಗದಲ್ಲಿ 20-25 ವರ್ಷ ಗಳಿಂದ ಮನೆಕಟ್ಟಿ, ಕೃಷಿ ಮಾಡಿಕೊಂಡು ವಾಸವಾಗಿದ್ದರೂ ಹಕ್ಕುಪತ್ರ ಲಭಿಸಿರಲಿಲ್ಲ. ಸರಕಾರದ ನಿಯಮದ ಬದಲಾವಣೆಯಿಂದ 94ಸಿ ಯೋಜನೆ ಯಡಿ ಅರ್ಜಿ ಸಲ್ಲಿಸಿ 2017ರ ಅಕ್ಟೋಬರ್‌ನಲ್ಲಿ 94ಸಿ ಯೋಜನೆಯಲ್ಲಿ ಜಾಗದ ಹಕ್ಕುಪತ್ರ ಪಡೆದುಕೊಂಡಿದ್ದರು. ಕಂದಾಯ ಅಧಿಕಾರಿ ಗಳ ಉಪಸ್ಥಿತಿಯಲ್ಲಿ ಅಂದಿನ ಬೆಳ್ತಂಗಡಿ ಪ್ರಭಾರ ತಹಶೀಲ್ದಾರ್‌ ಆಗಿದ್ದ ಮಹಮ್ಮದ್‌ ಇಸಾಕ್‌ ಸಹಿ ಮಾಡಿದ ಹಕ್ಕುಪತ್ರವನ್ನು ಅಂದಿನ ಶಾಸಕರಾಗಿದ್ದ ಕೆ. ವಸಂತ ಬಂಗೇರ ಅವರು ಮೂಡುಕೋಡಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ವಿತರಿಸಿದ್ದರು.

ಸರ್ವೇ ನಂ. 99/2ಎಪಿ8 ಮೂಡುಕೋಡಿ ಗ್ರಾಮದ ಕೊಪ್ಪದಬಾಕಿಮಾರುವಿನಲ್ಲಿರುವ ಸರಕಾರಿ ಜಾಗ. ಇದರಲ್ಲಿ ಫಲಾನುಭವಿಗಳು ವಾಸವಾಗಿದ್ದಾರೆ. ಆದರೆ ಇವರಿಗೆ ನೀಡಲಾದ ಹಕ್ಕುಪತ್ರದಲ್ಲಿ 99/2ಎಪಿ1 ಎಂದು ನಮೂದಿಸಲಾಗಿದ್ದು, ಇದು ಬೇರೆಯವರ ವರ್ಗ ಜಾಗ ಎಂದು ಕಾಣಿಸುತ್ತಿದೆ. ಹೀಗಾಗಿ ಆರ್‌ಟಿಸಿ ಲಭಿಸುತ್ತಿಲ್ಲ. 35ಕ್ಕೂ ಅಧಿಕ ಕುಟುಂಬಗಳು ಈ ಸಮಸ್ಯೆಯಡಿ ಸಿಲುಕಿವೆ. ಇದರಲ್ಲಿ ಕೆಲವು ಫಲಾನುಭವಿಗಳಿಗೆ ಹಕ್ಕುಪತ್ರವನ್ನು ಸರಿಮಾಡಿ ನೀಡಿರುವ ಅಧಿಕಾರಿಗಳು, ಉಳಿದ ಫಲಾನುಭವಿಗಳಿಗೆ ಸತಾಯಿಸುತ್ತಿರುವುದು ಯಾಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ದಿಕ್ಕೇ ತೋಚುತ್ತಿಲ್ಲ:

22 ವರ್ಷಗಳಿಂದ ಇಲ್ಲಿ ವಾಸವಾಗಿದ್ದೇವೆ. 2017ರಲ್ಲಿ ನಮಗೆ 94ಸಿ ಯೋಜನೆಯಡಿ ಹಕ್ಕುಪತ್ರ ನೀಡಿದ್ದು, ಈಗ ಆರ್‌ಟಿಸಿ ತೆಗೆ ಯಲು ಹೋದಾಗ ನಮ್ಮ ಸರ್ವೇ ನಂ.ನಲ್ಲಿ ಬೇರೆಯವರ ವರ್ಗ ಜಾಗ ಕಾಣಿಸುತ್ತಿದೆ ಎಂದು ಹೇಳುತ್ತಾರೆ. ಅಂದಿನಿಂದ ಇಂದಿನವರೆಗೆ ಸರಕಾರಿ ಸೌಲಭ್ಯ ದೊರೆಯದೆ ದಿಕ್ಕೇ ತೋಚು ತ್ತಿಲ್ಲ. ಹಕ್ಕುಪತ್ರಕ್ಕಾಗಿ ಅಧಿಕಾರಿಗಳಲ್ಲಿ ಬಿಕ್ಷೆ ಬೇಡುವ ಸ್ಥಿತಿ ಬಂದಿದೆ. – ಜಯಂತಿ ಪೂಜಾರಿ ಕೊಪ್ಪದಬಾಕಿಮಾರು
ಆತುರದಲ್ಲಿ ಹಕ್ಕು ಪತ್ರ ತಯಾರಿ:

ವೇಣೂರು ಹೋಬಳಿ ಮೂಡು ಕೋಡಿ ಗ್ರಾಮದ ಕೊಪ್ಪದಬಾಕಿಮಾರು ಗ್ರಾಮಸ್ಥರಿಗೆ 2017ರಲ್ಲಿ 94ಸಿ ಯೋಜನೆಯಡಿ ಹಕ್ಕುಪತ್ರ ನೀಡಲಾಗಿದೆ. ಅಂದು ಆತುರದಲ್ಲಿ ಹಕ್ಕುಪತ್ರ ತಯಾರಿಸಿದ್ದು, ಮೇ 29ರ ಬಳಿಕ ಎಲ್ಲ ಫಲಾನುಭವಿಗಳ ಹಕ್ಕುಪತ್ರ ಸಂಗ್ರಹಿಸಿ ಸರ್ವೇ ನಂ. ಸರಿಮಾಡಿ ನೀಡುತ್ತೇವೆ. ಬಳಿಕ ಒಂದು ವಾರ ಸಮಯ ಬೇಕಾಗುತ್ತದೆ. – ಹರೀಶ್‌ ಕೆ. ಗ್ರಾಮಲೆಕ್ಕಿಗ (ಕೇಸ್‌ ವರ್ಕರ್‌)
ವ್ಯತ್ಯಾಸ ಏನು?:

ಸರ್ವೇ ನಂ. 99/2ಎಪಿ8 ಮೂಡುಕೋಡಿ ಗ್ರಾಮದ ಕೊಪ್ಪದಬಾಕಿಮಾರುವಿನಲ್ಲಿರುವ ಸರಕಾರಿ ಜಾಗ. ಇದರಲ್ಲಿ ಫಲಾನುಭವಿಗಳು ವಾಸವಾಗಿದ್ದಾರೆ. ಆದರೆ ಇವರಿಗೆ ನೀಡಲಾದ ಹಕ್ಕುಪತ್ರದಲ್ಲಿ 99/2ಎಪಿ1 ಎಂದು ನಮೂದಿಸಲಾಗಿದ್ದು, ಇದು ಬೇರೆಯವರ ವರ್ಗ ಜಾಗ ಎಂದು ಕಾಣಿಸುತ್ತಿದೆ. ಹೀಗಾಗಿ ಆರ್‌ಟಿಸಿ ಲಭಿಸುತ್ತಿಲ್ಲ. 35ಕ್ಕೂ ಅಧಿಕ ಕುಟುಂಬಗಳು ಈ ಸಮಸ್ಯೆಯಡಿ ಸಿಲುಕಿವೆ. ಇದರಲ್ಲಿ ಕೆಲವು ಫಲಾನುಭವಿಗಳಿಗೆ ಹಕ್ಕುಪತ್ರವನ್ನು ಸರಿಮಾಡಿ ನೀಡಿರುವ ಅಧಿಕಾರಿಗಳು, ಉಳಿದ ಫಲಾನುಭವಿಗಳಿಗೆ ಸತಾಯಿಸುತ್ತಿರುವುದು ಯಾಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

•ಪದ್ಮನಾಭ ವೇಣೂರು

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

10

Missing: ಚುನಾವಣಾ ಕರ್ತವ್ಯದಲ್ಲಿದ್ದ ಸರಕಾರಿ ನೌಕರ ನಾಪತ್ತೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.