ಡಾಮರು ಕಾಮಗಾರಿ ನಡೆದು ಎರಡು ವರ್ಷಗಳಲ್ಲಿ ನಡೆದಾಡಲೂ ಕಷ್ಟ


Team Udayavani, Aug 24, 2018, 12:09 PM IST

24-agust-8.jpg

ಕಾಣಿಯೂರು : ಸುಳ್ಯ ತಾಲೂಕಿನ ಎಡಮಂಗಲ ಗ್ರಾಮದ ರಸ್ತೆಗಳೆಲ್ಲವೂ ತೀರಾ ಹದಗೆಟ್ಟಿದ್ದು, ಸಂಚಾರಕ್ಕೆ ತೊಡಕಾಗಿ ಪರಿಣಮಿಸಿವೆ. ಇದರಿಂದ ಸ್ಥಳೀಯರು ರೋಸಿ ಹೋಗಿದ್ದಾರೆ. ಅಲೆಕ್ಕಾಡಿ ಕಡಬ ರಸ್ತೆಯ ಅಲೆಕ್ಕಾಡಿ ಎಂಬಲ್ಲಿಂದ ಪುಳಿಕುಕ್ಕು ತನಕದ ಸುಮಾರು 8 ಕಿ.ಮೀ. ರಸ್ತೆಯ ಡಾಮರು ಕಿತ್ತುಹೋಗಿದ್ದು, ಕರಿಂಬಿಲ ಎಂಬಲ್ಲಿ ತೋಡಿನಂತಾಗಿದೆ. ವಿದ್ಯಾ ರ್ಥಿಗಳು, ವಾಹನ ಚಾಲಕರು, ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳಿಗೆ ಓಡಾಟ ದುಸ್ತರವಾಗಿದೆ.

ಜಿ.ಪಂ. ರಸ್ತೆ
ಇದು ಜಿಲ್ಲಾ ಪಂಚಾಯಿತಿ ರಸ್ತೆ. ಎರಡು ವರ್ಷಗಳ ಹಿಂದೆಯೇ ಡಾಮರು ಕಾಮಗಾರಿ ನಿರ್ವಹಿಸಲಾಗಿತ್ತು. ಆದರೆ, ಈಗ ರಸ್ತೆಯ ಮಧ್ಯೆ ಅಲ್ಲಲ್ಲಿ ಇಂಗು ಗುಂಡಿಯಂತಹ ಹೊಂಡಗಳು ಸೃಷ್ಟಿಯಾಗಿವೆ. ರಸ್ತೆಯಿಡೀ ಕೆಸರಾಗಿದ್ದು, ಪೂರ್ತಿ ಹಾನಿಗೀಡಾಗಿದೆ. ಹೊಸಮಠ ಸೇತುವೆ ಹಾಗೂ ಪುಳಿಕುಕ್ಕು -ಪಂಜ ನಡುವೆ ಇರುವ ಕೋಂಟೆಲ್‌ಸಾರ್‌ ಎಂಬಲ್ಲಿಯ ಸೇತುವೆಗಳು ಮುಳುಗಡೆಯಾದರೆ ಕಡಬದವರು ಪುತ್ತೂರನ್ನು ಸಂಪರ್ಕಿಸಲು ಅಲೆಕ್ಕಾಡಿ ರಸ್ತೆಯನ್ನೇ ಅವಲಂಬಿಸುವುದು ಅನಿವಾರ್ಯ.

ಮೇಲ್ದರ್ಜೆಗೇರಿಸಿ
ಕಾಣಿಯೂರು, ಪುಣ್ಚಿತ್ತಾರು, ಬೆಳ್ಳಾರೆ, ನಿಂತಿಕಲ್ಲು ಭಾಗದ ಜನರು ಕಡಬ ಸಂಪರ್ಕಿಸಲು ಇದೇ ರಸ್ತೆಯನ್ನು ಅವಲಂಭಿಸಿದ್ದು, ನಿತ್ಯ ಸಾವಿರಾರು ವಾಹನಗಳು ಇಲ್ಲಿ ಓಡಾಟ ನಡೆಸುತ್ತಿವೆ. 3.5 ಮೀ. ಅಗಲವಿರುವ ಈ ರಸ್ತೆಯನ್ನು ಇನ್ನಷ್ಟು ವಿಸ್ತರಿಸುವುದು ಅಗತ್ಯ. ಹೀಗಾಗಿ ಈ ರಸ್ತೆಯನ್ನು ಲೋಕೋಪಯೋಗಿ ಇಲಾಖೆಗೆ ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸುವಂತೆ ಆಗ್ರಹ ಕೇಳಿಬರುತ್ತಿದೆ.

ಅಲೆಕ್ಕಾಡಿ ನೂಜಾಡಿ ರಸ್ತೆಯಲ್ಲೂ ಗೋಳು
ನೂಜಾಡಿ ಕಾಲನಿಯಲ್ಲಿ ಗ್ರಾಮ ಪಂಚಾಯತ್‌ ರಸ್ತೆ ಪಾಡು ಇದೇ ಆಗಿದೆ. 150 ಮೀ. ರಸ್ತೆ ಕಾಂಕ್ರೀಟ್‌ ಕಂಡಿದ್ದರೂ, ಉಳಿದ 400 ಮೀಟರ್‌ ರಸ್ತೆ ತೀರಾ ಹದಗೆಟ್ಟು ಶಾಲಾ ಮಕ್ಕಳು ನಡೆದಾಡಲೂ ಕಷ್ಟಕರವಾಗಿ ಪರಿಣಮಿಸಿದೆ. ಸುಮಾರು 70 ಮನೆಗಳಿವೆ. ಅಲೆಕ್ಕಾಡಿ ನೂಜಾಡಿ ರಸ್ತೆ ದುಸ್ಥಿತಿ ಕಂಡು ನಾಗರಾಜ್‌ ರಾವ್‌ ಆಲಾಜೆ, ಶಿವಕುಮಾರ್‌ ನೂಜಾಡಿ, ಗಂಗಾಧರ ನೂಜಾಡಿ, ಸುರೇಶ್‌ ನೂಜಾಡಿ, ಸತೀಶ ನೂಜಾಡಿ, ಮಹಮ್ಮದ್‌ ನೂಜಾಡಿ, ಶೀನಪ್ಪ ನೂಜಾಡಿ, ಮೇದಪ್ಪ ಕೊಳಂಬಳ ಅವರು ಶ್ರಮದಾನ ಮೂಲಕ ರಸ್ತೆ ಸರಿಪಡಿಸಿದರು. ಕಲ್ಲು, ಮರಳು ತಂದು ರಸ್ತೆಗೆ ಸುರಿದು ತಕ್ಕಮಟ್ಟಿಗೆ ಸಂಚಾರಕ್ಕೆ ಯೋಗ್ಯವಾಗುವಂತೆ ಮಾಡಿದರು.

ಮನವಿಗಿಲ್ಲ ಬೆಲೆ
ರಸ್ತೆ ಅಭಿವೃದ್ಧಿಪಡಿಸುವಂತೆ ಹಲವಾರು ಬಾರಿ ಜನಪ್ರತಿನಿಧಿಗಳು, ಇಲಾಖೆಗಳಿಗೆ ಮನವಿ ಸಲ್ಲಿಸಿದರೂ ಇಲ್ಲಿನ ಸಮಸ್ಯೆ ಅರಿತು ಅವರು ಸ್ಪಂದಿಸಲಿಲ್ಲ. ಎಡಮಂಗಲ ಗ್ರಾ.ಪಂ. ಕಚೇರಿ, ಎಡಮಂಗಲ ಪ್ರೌಢಶಾಲೆ, ಸಿಎ ಬ್ಯಾಂಕ್‌, ಎಡಮಂಗಲ ದೇವಸ್ಥಾನ, ಕಡಬ ಪೇಟೆ ಸಂಪರ್ಕಿಸಲು ಇದೇ ರಸ್ತೆಯಾಗಿದ್ದರೂ ಅದು ವಿಸ್ತರಣೆ, ಅಭಿವೃದ್ಧಿ ಆಗದಿರುವುದು ವಿಪರ್ಯಾಸವೇ ಸರಿ. ಸಂಬಂಧಪಟ್ಟವರು ರಸ್ತೆ ಅಭಿವೃದ್ಧಿಗೆ ಇಚ್ಛಾಶಕ್ತಿ ಪ್ರದರ್ಶಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

 ಮನವಿ ಸಲ್ಲಿಸಲಾಗಿದೆ
ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಜಿ.ಪಂ.ಗೆ ಈಗಾಗಲೇ ಗ್ರಾ.ಪಂ. ವತಿಯಿಂದ ಮನವಿ ಸಲ್ಲಿಸಲಾಗಿದೆ. ಗ್ರಾ.ಪಂ. ರಸ್ತೆಗಳನ್ನು ಆದ್ಯತೆ ಮೇರೆಗೆ ಮುಂದಿನ ದಿನಗಳಲ್ಲಿ ಅಭಿವೃದ್ಧಿಪಡಿಸಲಾಗುವುದು.
– ಸುಂದರ ಗೌಡ
ಅಧ್ಯಕ್ಷರು, ಎಡಮಂಗಲ ಗ್ರಾ.ಪಂ.

 ಮಳೆಗಾಲದ ಬಳಿಕ
ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಕರಿಂಬಿಲ ಎಂಬಲ್ಲಿ ರಸ್ತೆ ಹದಗೆಟ್ಟು ಸಂಚಾರಕ್ಕೆ ತೊಡಕಾಗಿ ಪರಿಣಮಿಸಿತ್ತು. ರಸ್ತೆ ಮರು ಡಾಮರು ಕಾಮಗಾರಿಗೆ ಸಿಆರ್‌ಎಫ್‌ನಿಂದ 3 ಕೋಟಿ ರೂ. ಅನುದಾನ ಮಂಜೂರಾಗಿದೆ. ಮಳೆಗಾಲ ಕಳೆದ ಬಳಿಕ ಕಾಮಗಾರಿಗೆ ಚಾಲನೆ ದೊರೆಯಲಿದೆ.
 - ಶುಭದಾ ಎಸ್‌.
ಉಪಾಧ್ಯಕ್ಷರು, ಸುಳ್ಯ ತಾ.ಪಂ.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.