ಹಿಂಜಾವೇ ಕಾರಂತ್ ಬಂಧನ;ಉದ್ವಿಗ್ನ ಸ್ಥಿತಿ;ತಡರಾತ್ರಿಯೇ ಜಾಮೀನು !
Team Udayavani, Sep 30, 2017, 8:34 AM IST
ಪುತ್ತೂರು: ಪಿಎಸ್ಐ ಅಬ್ದುಲ್ ಖಾದರ್ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದಲ್ಲಿ ಹಿಂದೂ ಜಾಗರಣ ವೇದಿಕೆಯ ಮುಖಂಡ ಜಗದೀಶ್ ಕಾರಂತ್ ಅವರನ್ನು ಶುಕ್ರವಾರ ಸಂಜೆ ಬೆಂಗಳೂರಿನಲ್ಲಿ ಬಂಧಿಸಿ,ತಡರಾತ್ರಿ ಜಾಮೀನು ಸಿಕ್ಕಿದ ಕೂಡಲೇ ಬಿಡುಗಡೆ ಮಾಡಲಾಗಿದೆ .
ಬಂಧನದ ಸುದ್ದಿ ಹೊರಬೀಳುತ್ತಿದ್ದಂತೆ ಪುತ್ತೂರಿನಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು . ಕೆಲವೆಡೆ ಕಲ್ಲು ತೂರಾಟ ನಡೆದಿತ್ತು. ಮುಂಜಾಗ್ರತಾ ಕ್ರಮವಾಗಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.
ರಾತ್ರಿ ಪುತ್ತೂರು ಠಾಣೆಗೆ ಕರೆತಂದು, ಪುತ್ತೂರು ನ್ಯಾಯಾಲಯದ ನ್ಯಾಯಾಧೀಶರ ಮನೆಗೆ ಕರೆದೊಯ್ದು, ಹಾಜರು ಪಡಿಸಲಾಯಿತು. ಕಾರಂತ್ ಪರ ವಕೀಲರ ಜಾಮೀನು ಅರ್ಜಿ ಮಾನ್ಯ ಮಾಡಿ ರಾತ್ರಿ 1.30 ರ ವೇಳೆಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದರು.ಇದರಿಂದಾಗಿ ಉದ್ವಿಗ್ನ ಸ್ಥಿತಿ ತಿಳಿಯಾಯಿತು.
ಬಂಧನವಾದ ಕೂಡಲೇ ಆಕ್ರೋಶ ಗೊಂಡಿದ್ದ ಹಿಂದೂ ಪರ ಸಂಘಟನೆಗಳು ಶನಿವಾರ ಪುತ್ತೂರು ಬಂದ್ ಗೆ ಕರೆ ನೀಡಿದ್ದರು. ನೂರಾರು ಕಾರ್ಯಕರ್ತರು ಠಾಣೆಯ ಮುಂದೆ ಜಮಾವಣೆ ಗೊಂಡಿದ್ದರು.