ಆಡಿಯೋ ಪ್ರಕರಣ: ತನಿಖೆ ಯಾವುದೇ ಇರಲಿ; ಸಂಶಯ ನಿವಾರಿಸಿ
Team Udayavani, Feb 15, 2019, 4:26 AM IST
ಮಂಗಳೂರು: ಆಪರೇಷನ್ ಕಮಲ ಕುರಿತ ಆಡಿಯೋ ಬಗ್ಗೆ ಎಸ್ಐಟಿ ಅಥವಾ ಯಾವುದೇ ರೀತಿಯಲ್ಲಾದರೂ ತನಿಖೆ ನಡೆಸಿ ಜನರನ್ನು ಕಾಡುತ್ತಿರುವ ಸಂಶಯವನ್ನು ನಿವಾರಿಸಬೇಕು. ಈ ಬಗ್ಗೆ ಸದನದಲ್ಲಿಯೇ ತೀರ್ಮಾನ ನಡೆಯಲಿ ಎಂದು ಬಿ. ಜನಾರ್ದನ ಪೂಜಾರಿ ಹೇಳಿದರು.
ಮಂಗಳೂರಿನಲ್ಲಿ ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಯಡಿಯೂರಪ್ಪ ಇನ್ನಾದರೂ ಆಪರೇಷನ್ ಕಮಲ ಕೈಬಿಡುವುದು ಒಳಿತು. ಅವರ ನಿಲುವಿನಿಂದಾಗಿ ಜನರಿಗೆ ಅವರ ಮೇಲೆ ಕೆಟ್ಟ ಅಭಿಪ್ರಾಯ ಮೂಡಿದೆ. ಇನ್ನಾದರೂ ಜನರ ಕ್ಷಮೆ ಕೇಳಿ ತಪ್ಪೊಪ್ಪಿಕೊಳ್ಳಲಿ. ಇಲ್ಲವಾದರೆ ಬಿಜೆಪಿಯೇ ಧ್ವಂಸವಾಗಲಿದೆ ಎಂದರು.
ಹಾಗಾದರೆ ಬಿಜೆಪಿಗೆ ಧಕ್ಕೆ ಆಗಕೂಡದು ಎಂಬುದು ನಿಮ್ಮ ಕಳಕಳಿಯೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪೂಜಾರಿ, ಯಾರಿಗೂ ಆಪರೇಷನ್ ಕಮಲ ದಂತಹ ಬುದ್ಧಿ ಬರಬಾರದು. ಬಿ.ಎಸ್. ಯಡಿಯೂರಪ್ಪ ಅವರು
ಇನ್ನಾದರೂ ಈ ಯೋಚನೆಯನ್ನು ಬಿಟ್ಟುಬಿಡಲಿ ಎಂಬುದು ನನ್ನ ಕಳಕಳಿ ಎಂದರು.
ದೇವರು ನೋಡುತ್ತಾನೆ
ದೇವೇಗೌಡರ ಬಗ್ಗೆ ಬಿಜೆಪಿ ಶಾಸಕ ಪ್ರೀತಂ ಗೌಡ ಅವರ ಹೇಳಿಕೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪೂಜಾರಿ, ಅಂತಹ ಮಾತುಗಳನ್ನು ದೇವರು ಕೂಡ ಮೆಚ್ಚಲಾರ. ಅದು ಯಾರಿಗೂ ಶೋಭೆ ತರುವುದಿಲ್ಲ. ಈ ಬಗ್ಗೆ ಜೆಡಿಎಸ್ ಕಾರ್ಯಕರ್ತರು ಕಲ್ಲು ತೂರಾಟದಂತಹ ಕೃತ್ಯಕ್ಕೆ ಮುಂದಾಗಬಾರದು. ಎಲ್ಲವನ್ನು ದೇವರು ನೋಡುತ್ತಾನೆ ಎಂದರು.
ಸಿದ್ದರಾಮಯ್ಯ ವಿರುದ್ಧ ಈ ಹಿಂದಿನಂತೆ ಕಿಡಿಕಾರಿದ ಜನಾರ್ದನ ಪೂಜಾರಿ, ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಶನಿ ಇದ್ದಂತೆ. ಅವರಿಗೆ ಯಾವಾಗ ಬುದ್ಧಿ ಬರುತ್ತದೋ ಗೊತ್ತಿಲ್ಲ ಎಂದರು.
ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.
ಮೋದಿ ಸತ್ಕಾರ್ಯ
ಪ್ರಧಾನಿ ನರೇಂದ್ರ ಮೋದಿ ಅವರಿಂದ ಒಳ್ಳೆಯ ಕೆಲಸಗಳಾಗಿವೆ. ಆಗಿರುವ ಕೆಲಸಗಳ ಬಗ್ಗೆ ಇಲ್ಲ ಎಂದು ಹೇಳಲಾಗದು. ಒಳ್ಳೆಯದಾದರೆ ದೇಶಕ್ಕೇ ಒಳ್ಳೆಯದಾಗುತ್ತದೆ. ಹಾಗೆಂದು ಕೆಟ್ಟ ಕೆಲಸಗಳಾದರೆ ಮೋದಿಯವರನ್ನು ನಾನೇ ಟೀಕಿಸುತ್ತೇನೆ ಎಂದು ಜನಾರ್ದನ ಪೂಜಾರಿ ಹೇಳಿದರು. “ಮುಂದಿನ ಪ್ರಧಾನಿಯಾರಾಗಲಿದ್ದಾರೆ’? ಎಂಬ ಸುದ್ದಿಗಾರರ ಪ್ರಶ್ನೆಗೆ “ಯಾರ ಹಣೆಯಲ್ಲಿ ಬರೆದಿದೆಯೋ ಅವರು ಪ್ರಧಾನಿ ಆಗುತ್ತಾರೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ