ಮಲ್ಲಿಗೆ ಪ್ರಿಯೆ ಸೀಮೆಯೊಡತಿಗೆ ನೇಮ ನಡಾವಳಿಯ ಸಂಭ್ರಮ


Team Udayavani, Apr 26, 2019, 5:50 AM IST

31

ನಗರ: ಪುತ್ತೂರು ಸೀಮೆಯ ಶ್ರೀ ಮಹಾಲಿಂಗೇಶ್ವರ ದೇವಾಲಯದ ಜಾತ್ರೆಯ ಬಳಿಕ ನಡೆಯುವ ಇನ್ನೊಂದು ಧಾರ್ಮಿಕ ಕಾರ್ಯಕ್ರಮ ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವಗಳ ನೇಮ ನಡಾವಳಿ. ಮಲ್ಲಿಗೆ ಪ್ರಿಯೆ ಸೀಮೆಯೊಡತಿಯ ನೇಮ ನಡಾವಳಿಗೆ ಬಲ್ನಾಡು ಕ್ಷೇತ್ರ, ಭಕ್ತರು ಸಿದ್ಧಗೊಂಡಿದ್ದಾರೆ.

ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ ಮತ್ತು ಬ್ರಹ್ಮರಥೋತ್ಸವ ಎ. 17 ರಂದು ನಲ್ಕುರಿ ಸಂಪ್ರದಾಯದಂತೆ ನಡೆಯುವಂತೆ ಬಲಾ°ಡಿನ ನೇಮ ನಡಾವಳಿ ಎ. 28 ರಂದು ಪ್ರತಿವರ್ಷ ನಡೆಯುತ್ತದೆ. ಇದು ನಿಗದಿತ ದಿನ. ಮಹಾಲಿಂಗೇಶ್ವರನಿಗೆ ಭಕ್ತಿಪೂರ್ವಕ ವಾಗಿ ನಡೆದುಕೊಂಡ ರೀತಿಯಲ್ಲಿಯೇ ಸೀಮೆಯ ಭಕ್ತರು ಬಲಾ°ಡಿನ ದಂಡನಾಯಕ ಉಳ್ಳಾಲ್ತಿ ದೈವಗಳಿಗೂ ನಡೆದುಕೊಳ್ಳುತ್ತಾರೆ.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೆಯ ಕೊಡಿ ಎ. 19 ರಂದು ಇಳಿಯುತ್ತದೆ. ಮರುದಿನ ಎ. 20 ರಂದು ಬಲಾ°ಡು ದೈವಸ್ಥಾನದಲ್ಲಿ ಗೊನೆ ಮುಹೂರ್ತ ನಡೆದು ನೇಮ ನಡಾವಳಿಗೆ ಚಾಲನೆ ನೀಡಲಾಗುತ್ತದೆ. ಎ. 25 ರಂದು ದೈವಗಳಿಗೆ ಮುಂಡ್ಯ ಹಾಕುವುದು (ಅಂದರೆ ಬಾಳೆ ಎಲೆಯಲ್ಲಿ ವಿವಿಧ ವಸ್ತುಗಳನ್ನು ಇರಿಸುವುದು). ಎ. 27 ರಂದು ರಾತ್ರಿ ಮೂಲಸ್ಥಾನದ ಭಂಡಾರದ ಕೊಟ್ಟಿಗೆಯಿಂದ ಭಂಡಾರ ತೆಗೆದು ದೈವಸ್ಥಾನಕ್ಕೆ ತೆಂಗಿನ ಗರಿಗಳ ಸೂಟೆಯ ಬೆಳಕಿನಲ್ಲಿ ಭಂಡಾರದ ಸವಾರಿ ಬರುತ್ತದೆ. ಅನಂತರ ತಂಬಿಲ ಸೇವೆ. ಅನ್ನ ಸಂತರ್ಪಣೆ ನಡೆಯುತ್ತದೆ. ಮರುದಿನ ದೈವಗಳ ನೇಮ ನಡೆಯುತ್ತದೆ.

ಮಹಿಳೆಯರಿಗೆ ನಿಷಿದ್ಧ
ಬಲಾ°ಡು ದೈವಸ್ಥಾನದ ಪೂರ್ವ ಶಿಷ್ಠ ಸಂಪ್ರದಾಯದಂತೆ ಉಳ್ಳಾಳ್ತಿ ದೈವದ ನೇಮವನ್ನು ಮಹಿಳೆಯರು ನೋಡ ಬಾರದು. ಮಹಿಳೆಯರಿಗೆ ನೇಮ ವೀಕ್ಷಣೆ ನಿಷಿದ್ಧ. ಉಳ್ಳಾಳ್ತಿ ದೈವವು ಹೆಣ್ಣು ದೈವವಾ ದರೂ ಹೆಂಗಸರು ನೇಮ ನೋಡ ಬಾರದು ಎಂಬ ಸಂಪ್ರದಾಯ ಇಲ್ಲಿ ಇದೆ. ಸಂಪ್ರದಾ ಯವನ್ನು ಕೂಡ ಭಕ್ತರು ಪಾಲಿಸುತ್ತಾರೆ.

ಶ್ರೀ ಉಳ್ಳಾಳ್ತಿ ದೈವವು ನೇಮ ಕಟ್ಟಿ ನಿಂತಾಗ ತನ್ನ ನುಡಿಕಟ್ಟಿನಲ್ಲಿ “ಯಾನ್‌ ದಂಡನಾಯಕನ ಮಚ್ಚರದ ತಂಗಡಿ’ (ನಾನು ದಂಡನಾಯಕನ ಮತ್ಸರದ ತಂಗಿ) ಎಂದು ಹೇಳುತ್ತದೆ. ಈ ನುಡಿಕಟ್ಟಿನ ಸಾಲು ಕೂಡ ಮಹಿಳೆಯರು ನೇಮ ನೋಡುವುದು ಸರಿಯಲ್ಲ ಎಂದು ಸಾಂಕೇತಿಸುತ್ತದೆ. ಯಾಕೆಂದರೆ ಬಲಾ°ಡಿನಲ್ಲಿ ಮಕ್ಕಳ ಸಹಿತ ಮಹಿಳೆಯರು ಕಾಲಿಗೆ ಬೆಳ್ಳಿಗಜ್ಜೆ ಕಟ್ಟಬಾರದು. ಯಾರೂ ಮುಖಕ್ಕೆ ಬಣ್ಣ ಹಚ್ಚಿ ನಾಟಕ ಮಾಡಬಾರದು, ಯಕ್ಷಗಾನ ಪ್ರದರ್ಶನ, ಭರಟನಾಟ್ಯ ಎಲ್ಲವೂ ಇಲ್ಲಿ ನಿಷಿದ್ಧ. ಮನೆಯಲ್ಲಿ ಜೋಕಾಲಿ ಕಟ್ಟವುದು ಕೂಡ ನಿಷಿದ್ಧ. ಅದೇ ರೀತಿ ಮಹಿಳೆಯರು ಮಲ್ಲಿಗೆ ಹೂವನ್ನು ಜಿಡೆಗೆ ಜೆಲ್ಲಿ ಬಿಡಬಾರದು. ಈ ನಿಯಮ ಈಗಲೂ ಪಾಲನೆಯಲ್ಲಿದೆ.

ಮಲ್ಲಿಗೆ ಹರಕೆ
ಎ. 28ರಂದು ಏರು ಹೊತ್ತಿನಲ್ಲಿ ನಡೆಯುವ ಬಲಾ°ಡು ಶ್ರೀ ಉಳ್ಳಾಳ್ತಿ ಅಮ್ಮನವ ನೇಮಕ್ಕೆ ಸೀಮೆಯ ಪ್ರತಿ ಮನೆಯಿಂದಲೂ ಮಲ್ಲಿಗೆ ಚೆಂಡುಗಳನ್ನು, ಕುಂಕುಮ, ಎಳನೀರು ಮತ್ತು ಕಾಣಿಕೆಯನ್ನು ಚಾಚೂ ತಪ್ಪದೆ ಸಮರ್ಪಿಸುವುದು ಇಲ್ಲಿನ ವಾಡಿಕೆ. ನೇಮೋತ್ಸವದಲ್ಲಿ ಪಾಲ್ಗೊಳ್ಳಲು ಅಸಾಧ್ಯವಾದವರು ನೇಮಕ್ಕೆ ತೆರಳುವ ಭಕ್ತಾದಿಗಳ ಕೈಯಲ್ಲಿ ತಮ್ಮ ಕಾಣಿಕೆ, ಹರಕೆ ಸೀರೆ, ಮಲ್ಲಿಗೆ ಹೂವನ್ನು ಕಳುಹಿಸುತ್ತಾರೆ.

ವಿಶಿಷ್ಟ ಪದ್ಧತಿಗಳು
·  ನಾಡಿನೆಲ್ಲೆಡೆ ಉಳ್ಳಾಲ್ತಿ ದೈವದ ನೇಮ ನಡೆಯುತ್ತದೆ. ಬಲಾ°ಡಿನಲ್ಲಿ ಉಳ್ಳಾಲ್ತಿ ದೈವ ಮದುವಣಗಿತ್ತಿಯ ಸಿಂಗಾರದಲ್ಲಿ ನೇಮ ಕಟ್ಟುತ್ತದೆ. ದೈವದ ಪಾತ್ರಿ ಮೂಗುತಿ ಧರಿಸುವ ವೇಳೆಗೆ ದೈವ ಆವೇಶಗೊಳ್ಳುತ್ತದೆ.

·  ಕೊಡಿಪ್ಪಾಡಿ ನಟ್ಟೋಜ ಶಾರ ಮನೆತನದವರು ಉಳ್ಳಾಲ್ತಿಯು ನೇಮದ ವೇಳೆ ಧರಿಸುವ ಬೆಳ್ಳಿಯ ಮುಗುಳ ಮಲ್ಲಿಗೆಯ ಆಭರಣವನ್ನು ತಂದೊಪ್ಪಿಸುತ್ತಾರೆ. ನೇಮದ ಬಳಿಕ ಈ ಆಭರಣವನ್ನು ಅವರ ವಶಕ್ಕೆ ಒಪ್ಪಿಸಲಾಗುತ್ತದೆ.

·  ಸೀಮೆಯ ಭಕ್ತರು ಉಳ್ಳಾಲ್ತಿ ದೈವಕ್ಕೆ ನೇಮದ ದಿನ ಸೀರೆ ಮತ್ತು ಮಲ್ಲಿಗೆಯನ್ನು ಒಪ್ಪಿಸುತ್ತಾರೆ. ಜತೆಗೆ ಎಳನೀರು, ಕುಂಕುಮ ಕಾಣಿಕೆ ಸಮರ್ಪಣೆ ಮಾಡುತ್ತಾರೆ.

·  ನೇಮದ ಸಂದರ್ಭದಲ್ಲಿ ಬಲಾ°ಡಿನಲ್ಲಿ ಯಾವುದೇ ವ್ಯಾಪಾರ ಮಾಡಲು ಅವಕಾಶವಿಲ್ಲ. ಭಕ್ತರು ಇಲ್ಲಿ ಉಚಿತವಾಗಿ ಮಜ್ಜಿಗೆ, ಪಾನಕ, ಲಿಂಬೆ ಶರಬತ್‌, ಕಬ್ಬಿನ ಹಾಲನ್ನು ವಿತರಿಸುತ್ತಾರೆ.

·  ಬಲ್ನಾಡಿನಲ್ಲಿ ನೇಮ ಸಂದರ್ಭದಲ್ಲಿ ನಡೆಯುವ ಅನ್ನಸಂತರ್ಪಣೆಗೆ ಮಾವಿನ ಕಾಯಿಯ ಚಟ್ನಿ ಇಲ್ಲಿ ಕಡ್ಡಾಯವಾಗಿ ಇರುತ್ತದೆ. ಮಾವಿನ ಕಾಯಿಯ ಚಟ್ನಿ ವಿಶೇಷ ರುಚಿಯನ್ನು ಹೊಂದಿರುತ್ತದೆ.

·  ಪುತ್ತೂರು ನಗರದ ಗ್ರಾಮ ಚಾವಡಿಯ ಬಳಿಯಿಂದ ಬಲಾ°ಡಿಗೆ ನೇಮಕ್ಕೆ ತೆರಳಲು ಉಚಿತ ವಾಹನ ವ್ಯವಸ್ಥೆ ಇರುತ್ತದೆ. ಯಾವುದೇ ಕಾರಣಕ್ಕೂ ಬಾಡಿಗೆ ಪಡೆದು ವಾಹನ ಸಂಚಾರ ಮಾಡುವಂತಿಲ್ಲ. ಆದ ಕಾರಣ ನಗರದ ರಿಕ್ಷಾ ಚಾಲಕರು, ಟೆಂಪೋ ಚಾಲಕರು ಮತ್ತು ಟೂರಿಸ್ಟ್‌ ವಾಹನದವರು ಎ. 28 ರಂದು ಬಲ್ನಾಡು ದೈವಸ್ಥಾನಕ್ಕೆ ಉಚಿತ ವಾಹನ ಸೇವೆಯನ್ನು ನಡೆಸುತ್ತಾರೆ.

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.