ಜೋಡುಪಾಲ ನಿರಾಶ್ರಿತರ ಬಸ್ ಪಾಸ್ ನವೀಕರಣ
Team Udayavani, Nov 12, 2018, 9:24 AM IST
ಅರಂತೋಡು: ಜೋಡುಪಾಲ ಪ್ರಕೃತಿ ವಿಕೋಪದಲ್ಲಿ ನಿರಾಶ್ರಿತರಾಗಿ ಸಂಪಾಜೆ ಮತ್ತು ಕಲ್ಲುಗುಂಡಿ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವವರಿಗೆ ನೀಡಿದ್ದ ಕೆಎಸ್ಸಾರ್ಟಿಸಿ ಬಸ್ ಪಾಸನ್ನು 15 ದಿವಸಗಳ ಬಳಿಕ ನವೀಕರಿಸಲಾಗಿದೆ.
ಎರಡು ತಿಂಗಳ ಹಿಂದೆ ಸಚಿವ ಯು.ಟಿ. ಖಾದರ್ ನಿರಾಶ್ರಿತರ ಶಿಬಿರಕ್ಕೆ ಆಗಮಿಸಿದ ಸಂದರ್ಭ ನಿರಾಶ್ರಿತರು ತಮಗೆ ಉಚಿತ ಪಾಸ್ ನೀಡಬೇಕೆಂದು ಆಗ್ರಹಿಸಿದ ಹಿನ್ನೆಲೆಯಲ್ಲಿ ಸಚಿವರು ಉಚಿತ ಪಾಸ್ ವ್ಯವಸ್ಥೆ ಕಲ್ಪಿಸಿದ್ದರು. ಒಂದು ತಿಂಗಳು ನಿರಾಶ್ರಿತರು ಉಚಿತವಾಗಿ ಬಸ್ಸಲ್ಲಿ ಪ್ರಯಾಣ ಮಾಡಿದ್ದರು. ಅವಧಿ ಮುಗಿದ ಬಳಿಕ ಪಾಸನ್ನು ನವೀಕರಿಸಬೇಕಿದ್ದರೂ ಕೆಎಸ್ಸಾರ್ಟಿಸಿ ಅಧಿಕಾರಿಗಳು ನವೀಕರಿಸದೆ ಸತಾಯಿಸುತ್ತಿದ್ದರು.ವಿದ್ಯಾರ್ಥಿ ಗಳಿಗೆ ನೀಡಿದ್ದ ಬಸ್ ಪಾಸನ್ನೂ ನವೀಕರಿಸಿಲ್ಲ ಎಂದು ದೂರಲಾಗಿತ್ತು. ಈ ಕಾರಣದಿಂದ ನಿರಾಶ್ರಿತರ ಕೇಂದ್ರದಲ್ಲಿರುವ ಜನರು ತಮ್ಮ ಭೂಮಿ ಇರುವ ಜಾಗ ಜೋಡುಪಾಲ ಮತ್ತು ಮೊಣ್ಣಂಗೇರಿಗೆ ದಿನನಿತ್ಯ ಹೋಗಿ ಬರಲು ಹಾಗೂ ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ತೆರಳಲು ಹಣ ನೀಡಬೇಕಾಗಿತ್ತು. ಈ ಬಗ್ಗೆ “ಉದಯವಾಣಿ‘ ವರದಿ ಪ್ರಕಟಿಸಿತ್ತು.
ಪಾಸ್ನ ಅವಧಿ ಒಂದು ತಿಂಗಳಿನದಾಗಿದ್ದು, ಅಗತ್ಯವಿದ್ದಲ್ಲಿ ಒಂದು ವರ್ಷ ಕಾಲ ಪ್ರತೀ ತಿಂಗಳು ನವೀಕರಿಸುತ್ತಿರಬಹುದಾಗಿದೆ. ಕೊಡಗು ಸಂಪಾಜೆ ಪರಿಹಾರ ಕೇಂದ್ರ ದಲ್ಲಿ ಈಗ 24 ಕುಟುಂಬಗಳ 73 ಜನರಿದ್ದಾರೆ. ಈ ಪೈಕಿ 13 ಮಂದಿ ವಿದ್ಯಾರ್ಥಿಗಳು. ದ.ಕ. ಸಂಪಾಜೆ ಕಲ್ಲುಗುಂಡಿ ಪರಿಹಾರ ಕೇಂದ್ರದಲ್ಲಿ 11 ಕುಟುಂಬಗಳಿದ್ದು, 9 ವಿದ್ಯಾರ್ಥಿಗಳ ಸಹಿತ 42 ಜನರಿದ್ದಾರೆ. ಒಬ್ಬರು ವೃದ್ಧೆಯೂ ಇದ್ದು, ಅನಾರೋಗ್ಯ ಪೀಡಿತರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
Politics: ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ಎಚ್.ವಿಶ್ವನಾಥ್
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್