ಕಲ್ಲಬೆಟ್ಟು: ಬ್ಯಾಂಕ್ ಸಾಲಗಾರನಿಂದ ಉಪವಾಸ ಸತ್ಯಾಗ್ರಹ
Team Udayavani, Jul 25, 2019, 5:59 AM IST
ಮೂಡುಬಿದಿರೆ: ಸಹಕಾರಿ ಬ್ಯಾಂಕ್ನಿಂದ ತಾನು ಪಡೆದ ಸಾಲದ ಮೊತ್ತಕ್ಕಿಂತ ಹೆಚ್ಚಿನ ಮೊತ್ತವನ್ನು ತೋರಿಸಿ, ಅಡವಿಟ್ಟಿದ್ದ ನನ್ನ ಆಸ್ತಿಯನ್ನು ಏಲಂ ಮಾಡಿರುವುದಾಗಿ ಆರೋಪಿಸಿ ಸಾಲಗಾರ ಶಿರ್ತಾಡಿ ನಿವಾಸಿ ರವಿರಾಜ್ ಹೆಗ್ಡೆ ಅವರು ಕಲ್ಲಬೆಟ್ಟು ಸಹಕಾರಿ ಬ್ಯಾಂಕ್ ಎದುರು ಬುಧವಾರ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.
ಐದು ವರ್ಷಗಳ ಹಿಂದೆ ಅವರು ಕಲ್ಲಬೆಟ್ಟು ಸಹಕಾರಿ ಬ್ಯಾಂಕಿನಿಂದ ಸಾಲ ಪಡೆದಿದ್ದು, ಅದನ್ನು ಮರುಪಾವತಿಸದೆ ಇರುವುದರಿಂದ ಬ್ಯಾಂಕ್ ಸಹಕಾರಿ ಉಪನಿಬಂಧಕರ ನ್ಯಾಯಾಲಯದಲ್ಲಿ ದಾವೆ ಹೂಡಿ, ಅಡವಿಟ್ಟಿದ್ದ ಆಸ್ತಿಯನ್ನು ಏಲಂ ನಡೆ ಸಲು ಪ್ರಕ್ರಿಯೆ ಆರಂಭಿ ಸಿ ತ್ತು. ಬುಧವಾರ ರವಿರಾಜ್ ಹೆಗ್ಡೆ ಅವರು ತನಗೆ ಅನ್ಯಾಯವಾಗಿದೆ ಎಂದು ಬ್ಯಾಂಕ್ ಮುಂದೆ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಸ್ಥಳದಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಅಧ್ಯಕ್ಷರ ಹೇಳಿಕೆ
ಈ ಬಗ್ಗೆ ಬ್ಯಾಂಕ್ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ಹೇಳಿಕೆ ನೀಡಿದ್ದು “ರವಿರಾಜ್ ಅವರು ಸೂಕ್ತ ದಾಖಲೆಯನ್ನಿಟ್ಟು ಸಾಲ ಪಡೆದಿದ್ದು ಮರುಪಾವತಿಸದೆ ಇರುವುದರಿಂದ ಬ್ಯಾಂಕ್ ಕಾನೂನು ಕ್ರಮ ಕೈಗೊಂಡಿದೆ. ಬ್ಯಾಂಕ್ ಅವರಿಗೆ ಅನ್ಯಾಯವೆಸಗಿಲ್ಲ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ