ಕಲ್ಮಕಾರು ; ಸೇತುವೆ ನೀರುಪಾಲು, 150ಕ್ಕೂ ಅಧಿಕ ಮನೆಗಳ ಸಂಪರ್ಕ ಕಡಿತ
Team Udayavani, Aug 2, 2022, 7:50 AM IST
ಸುಬ್ರಹ್ಮಣ್ಯ: ರವಿವಾರ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆಗೆ ಸುಳ್ಯದ ಕಲ್ಮಕಾರು, ಕೊಲ್ಲಮೊಗ್ರು, ಹರಿಹರ ಪಲ್ಲತ್ತಡ್ಕ, ಕಡಬ ತಾಲೂಕಿನ ಸುಬ್ರಹ್ಮಣ್ಯ ತತ್ತರಿಸಿದೆ.
ಕಲ್ಮಕಾರಿನ ಪೇಟೆಯ ಬಳಿಯಿರುವ ಸಂತಡ್ಕ ಬೈಲು, ಗುಳಿಕಾನ ಸೇರಿದಂತೆ ಹಲವು ಪ್ರದೇಶಗಳ ಸುಮಾರು 150 ಕ್ಕೂ ಹೆಚ್ಚಿನ ಮನೆಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುರಿದುಬಿದ್ದು ಅಲ್ಲಿನ ಮನೆಗಳ ಸಂಪರ್ಕ ಕಡಿತಗೊಂಡಿದೆ.
ರವಿವಾರ ಸೇತುವೆ ಹಾನಿಯಾಗಿತ್ತು ಸೋಮವಾರ ತಡರಾತ್ರಿ ಸೇತುವೆ ಮುರಿದುಬಿದ್ದು ಸಂಪರ್ಕ ಕಡಿತವಾಗಿದೆ.
ಇದನ್ನೂ ಓದಿ : ಭಾರಿ ಮಳೆ : ಸುಳ್ಯ, ಕಡಬ ತಾಲೂಕಿನ ಅಂಗನವಾಡಿ, ಶಾಲಾ, ಕಾಲೇಜುಗಳಿಗೆ ಇಂದು ರಜೆ