ಕಂಬಳ ಕರೆಗೆ ಶಾಶ್ವತ ವಿದಾಯ ಹೇಳಿದ ಅಲೆವೂರು- ತಡಂಬೈಲ್ ಕುಟ್ಟಿ.. ಅಭಿಮಾನಿಗಳ ಕಂಬನಿ
ಕೀರ್ತನ್ ಶೆಟ್ಟಿ ಬೋಳ, Mar 8, 2021, 9:12 AM IST
ಮಣಿಪಾಲ: ಅವನು ಸಾಮಾನ್ಯದವನಲ್ಲ, ಕಂಬಳದ ಕರೆಯಲ್ಲಿ ಚಿಗರೆಯಂತೆ ಓಡಿದವ.. ತನ್ನ ಜೊತೆಯಾದ ಚಾಂಪಿಯನ್ ಕೋಣಗಳಿಗೆ ಸರಿಯಾಟಿಯಾದವ. ಏದೋಟ್ಟುವಿನಿಂದ ತಂಡಬೈಲ್ ವರೆಗೆ ಸಲಹಿದ ಯಜಮಾನರಿಗೆ ಗೌರವ ತಂದಾತ.. ಅದೆಷ್ಟೋ ಕಂಬಳ ಕರೆಯಲ್ಲಿ ಪದಕಗಳಿಗೆ ಕೊರಳೊಡ್ಡಿದ ಕುಟ್ಟಿ ಇದೀಗ ಶಾಶ್ವತ ನಿದ್ದೆಗೆ ಜಾರಿದ್ದಾನೆ.
ಕಂಬಳ ಕ್ಷೇತ್ರದಲ್ಲಿ ಕಳೆದೊಂದು ದಶಕದಿಂದ ಮೆರೆದಾಡಿದ್ದ ಕುಟ್ಟಿ ಎಂಬ ಕೋಣ ರವಿವಾರ ಮೃತಪಟ್ಟಿದೆ. ಕೆಸರು ಗದ್ದೆಯಲ್ಲಿ ಕ್ಷಣ ಮಾತ್ರದಲ್ಲಿ ಗುರಿ ಮುಟ್ಟುತ್ತಿದ್ದ ಕುಟ್ಟಿ ಅಲ್ಪ ಕಾಲದ ಅಸೌಖ್ಯದಿಂದ ಸಾವನ್ನಪ್ಪಿದೆ.
ಏದೋಟ್ಟು ರಾಜು ಶೆಟ್ಟಿಯವರ ಬಳಿಯಿದ್ದ ಇನ್ನೂ ಸಣ್ಣ ಪ್ರಾಯದ ಕುಟ್ಟಿ 2008-09ರ ಸೀಸನ್ ನಲ್ಲಿ ಮೀಯ್ಯಾರಿನಲ್ಲಿ ನಡೆದ ಅಭ್ಯಾಸದಲ್ಲಿ (ಕುದಿ) ಪಾಲ್ಗೊಂಡಿದ್ದ. ಚಿಗರೆಯಂತೆ ಓಡುತ್ತಿದ್ದ ಕುಟ್ಟಿ ಅದಾಗಲೇ ಹಲವರ ಹುಬ್ಬು ಮೇಲೇರುವಂತೆ ಮಾಡಿದ್ದ. ಮುಂದೆ ಮಣಿಪಾಲದಲ್ಲಿ ನಡೆದ ಅನಂತ – ಮಾಧವ ಕಂಬಳದಲ್ಲಿ ಹಗ್ಗ ಕಿರಿಯ ವಿಭಾಗದಲ್ಲಿ ಓಡಿದ ಕುಟ್ಟಿ ದ್ವಿತೀಯ ಬಹುಮಾನ ಪಡೆದಿದ್ದ.
ಇದನ್ನೂ ಓದಿ:Women’s Day Special: ಮನೆ ಮನೆಗೆ ಪತ್ರಿಕೆ ವಿತರಿಸುವ 4 ಛಲಗಾತಿ ಮಹಿಳೆಯರ ಬದುಕಿನ ಚಿತ್ರಣ
ಈ ಓಟವನ್ನು ಗಮನಿಸಿದ ಅಲೆವೂರು ರಾಘು ಶೆಟ್ಟಿಯವರು ಆತನನ್ನು ತಮ್ಮ ಬಳಗಕ್ಕೆ ಸೇರಿಸಿದ್ದರು. ಅಲ್ಲಿಗೆ ಆತ ಅಲೆವೂರು ಕುಟ್ಟಿ ಎಂದು ಹೆಸರಾದ. ಬಾರಾಡಿ ಸೂರ್ಯ- ಚಂದ್ರ ಕಂಬಳದಲ್ಲಿ ಮೊದಲ ಬಾರಿಗೆ ನೇಗಿಲು ಕಿರಿಯ ವಿಭಾಗದಲ್ಲಿ ಪದಾರ್ಪಣೆ ಮಾಡಿದ ಕುಟ್ಟಿ ಅಂದೇ ಪ್ರಶಸ್ತಿ ಮುಡಿಗೇರಿಸಿದ್ದ. ಮುಂದೆ 2009-10ರ ಸೀಸನ್ ನಲ್ಲಿ ಅಲೆವೂರು ಕುಟ್ಟಿ ಹಲವಾರು ಕಡೆ ಪ್ರಶಸ್ತಿ ಪಡೆದಿದ್ದ.
2010-11ರ ಸೀಸನ್ ನಲ್ಲಿ ಸೀನಿಯರ್ ವಿಭಾಗಕ್ಕೆ ಎಂಟ್ರಿ ಕೊಟ್ಟ ಕುಟ್ಟಿ ಆ ಸೀಸನ್ ನಲ್ಲಿ 14 ಕಂಬಳದಲ್ಲಿ ಮೊದಲ ಪ್ರಶಸ್ತಿ ಗೆದ್ದುಕೊಂಡಿದ್ದ. ಮುಂದಿನ ವರ್ಷ 12 ಪ್ರಥಮ, ಎರಡು ದ್ವಿತೀಯ ಪ್ರಶಸ್ತಿ ಅಲೆವೂರು ತಂಡಕ್ಕೆ. ಅದು ನೇಗಿಲು ವಿಭಾಗದಲ್ಲಿ ಅಲೆವೂರು ತೆಂಕುಮನೆ ರಾಘು ಶೆಟ್ರು ಎಂದರೆ ದೊಡ್ಡ ಹೆಸರು. ಅದಕ್ಕೆ ಪ್ರಮುಖ ಕಾರಣ ಈ ಕುಟ್ಟಿ ಎಂದರೆ ತಪ್ಪಾಗಲಾರದು.
ಇದನ್ನೂ ಓದಿ: ತುಳು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರಕ್ಕೆ ಪ್ರಸ್ತಾವ: ಲಿಂಬಾವಳಿ
ಮುಂದೆ ಹಗ್ಗ ಹಿರಿಯ ವಿಭಾಗದಲ್ಲಿ ಸ್ಪರ್ಧಿಸಿದ ಕುಟ್ಟಿ, ಅಲ್ಲೂ ಕರಿಂಜೆ, ಕೊಳಚೂರು ಕೊಂಡೊಟ್ಟು, ಕೊಳಕೆ ಇರ್ವತ್ತೂರು ಮನೆತನದ ಕೋಣಗಳ ಜೊತೆಯಾಗಿ ವಿಜೃಂಭಿಸಿದ್ದ. ನಂತರದ ದಿನಗಳ ತಂಡಬೈಲ್ ನಾಗೇಶ್ ದೇವಾಡಿಗರು ಕುಟ್ಟಿಯನ್ನು ತಮ್ಮ ಬಳಗಕ್ಕೆ ಸೇರಿಸಿಕೊಂಡರು. ಅಲೆವೂರು ಕುಟ್ಟಿ ಅಲ್ಲಿಂದ ತಡಂಬೈಲ್ ಕುಟ್ಟಿಯಾದ.
ಕಾರ್ಕಳ ಜೀವನ್ ದಾಸ್ ಅಡ್ಯಂತಾಯ ಮತ್ತು ತಂಡಬೈಲ್ ನಾಗೇಶ್ ದೇವಾಡಿಗರ ಜಂಟಿ ತಂಡದಲ್ಲಿ ಮಿಂಚಿದ್ದು ಚಾಂಪಿಯನ್ ಕೋಣ ಮುಕೇಶ ಮತ್ತು ಕುಟ್ಟಿ. ನಾಲ್ಕೈದು ವರ್ಷಗಳ ಹಿಂದೆ ಮೂಡುಬಿದಿರೆ ಕಂಬಳದಲ್ಲಿ 144.5 ಮೀಟರ್ ದೂರವನ್ನು ಕೇವಲ 14.01 ಸೆಕೆಂಡ್ ನಲ್ಲಿ ಓಡಿ ಗುರಿ ತಲುಪಿದ್ದ ಕುಟ್ಟಿ ಮುಕೇಶ ಆ ಕಾಲದ ದಾಖಲೆ ನಿರ್ಮಿಸಿದ್ದರು.
ಕಂಬಳದಲ್ಲಿ ಮುಕೇಶ ಮತ್ತು ಕುಟ್ಟಿ ಓಡುವುದನ್ನು ಕಂಡರೆ ಪಾಪ ಪರಿಹಾರವಾಗುವುದು, ಅಷ್ಟು ಚಂದದ ಓಟ ಅವುಗಳದ್ದು ಎನ್ನುವುದು ಅಭಿಮಾನಿಗಳ ಮಾತು. ಹಲವಾರು ಪ್ರಶಸ್ತಿ, ದಾಖಲೆಗಳು, ಅಭಿಮಾನಿಗಳನ್ನು ಸಂಪಾದಿಸಿದ್ದ ‘ಚಾಂಪಿಯನ್ ಕುಟ್ಟಿ’ ಇನ್ನು ನೆನಪು ಮಾತ್ರ.
ಮಾಹಿತಿ: ಸೀತಾರಾಮ್ ಶೆಟ್ಟಿ, ಬಂಟ್ವಾಳ ಮತ್ತು ವಿಜಯ್ ಕುಮಾರ್ ಕಂಗಿನಮನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Theft; 13 ರಾಜ್ಯಗಳಿಗೆ ಬೇಕಾಗಿದ್ದ ಕಳ್ಳ ಕೋಟದಲ್ಲಿ ಪೊಲೀಸರ ಬಲೆಗೆ!
MUST WATCH
ಹೊಸ ಸೇರ್ಪಡೆ
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ