ಅಧ್ಯಾದೇಶ ವಜಾಕ್ಕೆ ಆಗ್ರಹ: ಕಂಬಳಕ್ಕೆ ಮತ್ತೆ ಕಂಟಕ?


Team Udayavani, Nov 13, 2017, 6:00 AM IST

kambala.jpg

ಮಂಗಳೂರು: ವರ್ಷದ ಬಳಿಕ ಮೂಡಬಿದಿರೆಯಲ್ಲಿ ಶನಿವಾರ ನಡೆದ ಕಂಬಳದಲ್ಲಿ ಕೋಣಗಳಿಗೆ ಹಿಂಸಾತ್ಮಕವಾಗಿ ಹೊಡೆಯಲಾಗಿದೆ ಎಂದು ಆರೋಪಿಸಿ ಪೆಟಾ (ಪೀಪಲ್‌ ಫಾರ್‌ ದ ಎಥಿಕಲ್‌ ಟ್ರೀಟ್‌ಮೆಂಟ್‌ ಆಫ್‌ ಎನಿಮಲ್ಸ್‌) ಸಂಘಟನೆ ಸುಪ್ರೀಂ ಕೋರ್ಟ್‌ಗೆ ದೂರು ಸಲ್ಲಿಸಲು ನಿರ್ಧರಿಸಿದ್ದು, ಇದರಿಂದ ಕಂಬಳಕ್ಕೆ ಮತ್ತೂಮ್ಮೆ ವಿಘ್ನ ಎದುರಾಗುವ ಸಾಧ್ಯತೆ ಇದೆ. 

ಶನಿವಾರ ಮೂಡಬಿದಿರೆಯ ಕಡಲಕೆರೆ ನಿಸರ್ಗಧಾಮದ ಬಳಿ ನಡೆದ ಕೋಟಿ-ಚೆನ್ನಯ ಜೋಡುಕರೆ ಹೊನಲು ಬೆಳಕಿನ ಕಂಬಳದ ಸಮಗ್ರ ದೃಶ್ಯಾವಳಿಯನ್ನು ಪೆಟಾ ಸಂಘಟನೆ ವೀಡಿಯೋ ಮತ್ತು ಫೋಟೊ ಮೂಲಕ ಚಿತ್ರೀಕರಿಸಿದ್ದು, ಕೋಣಗಳನ್ನು ಓಡಿಸುವಾಗ ಕ್ರೂರವಾಗಿ ಹೊಡೆಯಲಾಗಿದೆ ಎನ್ನಲಾದ 5 ಫೋಟೊಗಳನ್ನು  ಸುಪ್ರೀಂ ಕೋರ್ಟಿಗೆ ಸಲ್ಲಿಸಲು ನಿರ್ಧರಿಸಿದೆ.

ಈ ನಡುವೆ ಕಂಬಳಕ್ಕೆ ಅನುಮತಿ ನೀಡಿ ಕರ್ನಾಟಕ ಸರಕಾರ ಹೊರಡಿಸಿದ ಅಧ್ಯಾದೇಶ ವಜಾಗೊಳಿಸಬೇಕೆಂದು ಕೋರಿ ಪೆಟಾ ಸಲ್ಲಿಸಿದ್ದ ಅರ್ಜಿ ಸುಪ್ರೀಂ ಕೋರ್ಟಿನಲ್ಲಿ ಸೋಮವಾರ ವಿಚಾರಣೆಗೆ ಬರಲಿದೆ.

ಪೆಟಾದ ಈ ಅರ್ಜಿಯನ್ನು ನ. 6ರಂದು ಸ್ವೀಕರಿಸಿದ್ದ ಸುಪ್ರೀಂ ಕೋರ್ಟ್‌ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಕೇಂದ್ರ, ರಾಜ್ಯ (ಕರ್ನಾಟಕ) ಸರಕಾರಗಳಿಗೆ ನೋಟಿಸ್‌ ಜಾರಿ ಮಾಡಿತ್ತು. 

ನ. 11ರಂದು ನಡೆದ ಕಂಬಳ ದಲ್ಲಿ  ಕೋಣಗಳನ್ನು ಹೊಡೆದು ಹಿಂಸೆ ನೀಡಿರುವುದು ಮನದಟ್ಟಾಗಿದೆ ಎಂದು ಪೆಟಾ ಸಂಘಟನೆಯ ಮುಖಂಡ ನಿಕುಂಜ್‌ ಶರ್ಮ ಅವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನೂರರಷ್ಟು ಕೋಣಗಳನ್ನು ಭಾಗವಹಿಸು ವಂತೆ ಬಲವಂತಪಡಿಸಲಾಗಿದೆ. ಅವುಗಳಿಗೆ ಬೆತ್ತದಿಂದ ಹೊಡೆದು ಬಾಲ ಎಳೆಯಲಾಗಿದೆ. ಕೆಲವು ಕೋಣಗಳಿಗೆ ಓಟದಲ್ಲಿ ಭಾಗವಹಿಸುವ ಮೊದಲೇ ಹೊಡೆದಿರುವುದು ಅವುಗಳ ಶರೀರದ ಮೇಲೆ ಕಂಡು ಬಂದ ಗಾಯದ ಕಲೆಗಳು ಸೂಚಿಸುತ್ತವೆ. 

ಗಾಯಗೊಂಡಿದ್ದ ಕೋಣಗಳನ್ನು ಕೂಡ ಓಟಕ್ಕೆ ಬಳಸಲಾಗಿದೆ. ಓಟ ಮುಗಿಸಿದ ಕೋಣಗಳು ಉಸಿರಾಟಕ್ಕೂ ಕಷ್ಟಪಡುವ ಸ್ಥಿತಿಯಲ್ಲಿದ್ದವು. ಐದಾರು ಜನ ಕೋಣಗಳನ್ನು ಹೊಡೆದು, ಅವುಗಳ ಮೂಗುದಾರ ಹಿಡಿದೆಳೆದು ತಮ್ಮ ನಿಯಂತ್ರಣಕ್ಕೆ ತರಲು ಯತ್ನಿಸಿದ್ದು, ಇದರಿಂದ ಅವುಗಳು ತೀವ್ರ ಒತ್ತಡದಲ್ಲಿ ಸಿಲುಕಿದಂತೆ ಕಂಡು ಬಂದಿವೆ.

ಕೋಣಗಳನ್ನು ಬಲವಂತವಾಗಿ ಎಳೆದು ಕೆಸರಿನ ಗದ್ದೆಗೆ ಇಳಿಸಲಾಗಿದೆ. ಕೆಲವು ಕೋಣಗಳಿಗೆ 2- 2.5 ದಪ್ಪದ ಎರಡು ಮೂರು ಸುತ್ತು ಗಟ್ಟಿಯಾಗಿ ಬಿಗಿದ ದಾರಗಳನ್ನು ಮೂಗಿನ ಹೊಳ್ಳೆಗಳಿಗೆ ತುರುಕಿ ಅಧಿಕ ನೋವು ಉಂಟು ಮಾಡಲಾಗಿದೆ. ಕೋಣಗಳಿಗೆ ಸುಪ್ರೀಂ ಕೋರ್ಟ್‌ ನಿಂದ ಸಂಪೂರ್ಣ ರಕ್ಷಣೆಗೆ ಆವಶ್ಯಕತೆ ಇದೆ ಎಂದು ಪೆಟಾ ಪ್ರಕಟನೆ ತಿಳಿಸಿದೆ.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!

Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!

Mangaluru: ಕುಡಿಯುವ ನೀರಿನ ಕೊರತೆ, ಬೋಟ್‌, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ

Mangaluru: ಕುಡಿಯುವ ನೀರಿನ ಕೊರತೆ, ಬೋಟ್‌, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.