ಜೈನಕಾಶಿ ಮೂಡಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಹತ್ತು ಹಲವು ಬೇಡಿಕೆ


Team Udayavani, Apr 25, 2018, 9:00 AM IST

Namma-Pranalike-600.jpg

ದ.ಕ. ಜಿಲ್ಲೆಯಲ್ಲಿಯೇ ಅತಿವೇಗದ ಬೆಳವಣಿಗೆಯನ್ನು ದಾಖಲಿಸುತ್ತಿರುವ, ಭೌಗೋಳಿಕವಾಗಿ ಜಿಲ್ಲಾ ಕೇಂದ್ರ ಸ್ಥಾನದಲ್ಲಿರುವ ಮೂಡಬಿದಿರೆ ವಿಧಾನಸಭಾ ಕ್ಷೇತ್ರ ಅತ್ತ ಪಶ್ಚಿಮ ಘಟ್ಟ – ಕಡಲು ನಡುವೆ ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗುವ ವಿಶಿಷ್ಟ ಪ್ರದೇಶ. ಐತಿಹಾಸಿಕ, ಸಾಹಿತ್ಯಕ, ಸಾಂಸ್ಕೃತಿಕ ಪರಂಪರೆಯೊಂದಿಗೆ ಕೃಷಿ, ನಿಧಾನವಾಗಿ ಉದ್ಯಮರಂಗದಲ್ಲೂ ಬೆಳವಣಿಗೆ ಕಾಣಿಸುತ್ತ ಬೆಳೆಯುತ್ತಿರುವ ಈ ಕ್ಷೇತ್ರದಲ್ಲಿ ವಿಶೇಷವಾಗಿ ಪ್ರವಾಸೋದ್ಯಮದ ಬೆಳವಣಿಗೆಗೂ ಅವಕಾಶವಿದೆ. ಈ ಶಿಕ್ಷಣಕಾಶಿಯಲ್ಲಿ ಬಡವರ ಉನ್ನತ ಶಿಕ್ಷಣಕ್ಕೂ ಅವಕಾಶ ಕಲ್ಪಿಸಬೇಕಾಗಿದೆ. ಜನರ ಇತರ ಮೂಲಭೂತ ಆವಶ್ಯಕತೆಗಳನ್ನೂ ಪೂರೈಸಬೇಕಾಗಿದೆ.

1. ಒಳಚರಂಡಿ ಯೋಜನೆ
ಅತಿವೇಗದ ಬೆಳವಣಿಗೆ ಕಾಣುತ್ತಿರುವ ಮೂಡಬಿದಿರೆಯಲ್ಲಿ ಒಳಚರಂಡಿ ಯೋಜನೆ ಚುರುಕುಗೊಳಿಸುವುದು ಅಗತ್ಯ. ಮುಂದೆ ಎದುರಾಗಬಹುದಾದ ಆರೋಗ್ಯ ಸಮಸ್ಯೆ ನಿವಾರಣೆಗೆ ಇದು ಅಗತ್ಯ.

2. ಬೈಪಾಸ್‌ ನಿರ್ಮಾಣ
ಬೈಪಾಸ್‌ ಯೋಜನೆಯನ್ನು ಕೂಡಲೇ ಸ್ಪಷ್ಟ ಮಾರ್ಗದೊಂದಿಗೆ ಕೈಗೆತ್ತಿಕೊಳ್ಳುವ ಮೂಲಕ ವಾಹನ ದಟ್ಟಣೆಗೆ ಪರಿಹಾರ ಕೈಗೊಳ್ಳ ಬೇಕು. ಪೇಟೆಯ ನಡುವೆ ಕನಿಷ್ಠ ದ್ವಿಪಥ ಮಾರ್ಗವನ್ನಾದರೂ ನಿರ್ಮಿಸಬೇಕು.

3. ಶಿಕ್ಷಣ
ಮೂಡಬಿದಿರೆ, ಅಳಿಯೂರಿಗೆ ಸರಕಾರಿ ಪದವಿಪೂರ್ವ, ಪದವಿ ಕಾಲೇಜು, ಮಾರ್ಪಾಡಿ ಗ್ರಾಮಕ್ಕೆ ಸರಕಾರಿ ಪ್ರೌಢಶಾಲೆ. ಆರ್ಥಿಕ ದುರ್ಬಲರಿಗೆ ಸರಕಾರಿ ವಿದ್ಯಾ ಸಂಸ್ಥೆಗಳ ಮೂಲಕ ಹೆಚ್ಚಿನ ಶಿಕ್ಷಣಾವಕಾಶ ಸಾಧ್ಯ.

4. ಗ್ರಂಥಾಲಯ
ಸರಕಾರಿ ಗ್ರಂಥಾಲಯಗಳ ಡಿಜಿಟಲೀಕರಣ ಸಹಿತ ಮೇಲ್ದರ್ಜೆಗೇರಿಸುವುದು. ಅಪೇಕ್ಷಿತರಿಗೆ ಮಾಹಿತಿಗಳ ಮುದ್ರಣ ವ್ಯವಸ್ಥೆ ಕಲ್ಪಿಸುವುದು. ಗ್ರಂಥಾಲಯದತ್ತ ಓದುಗರನ್ನು ಸೆಳೆಯುವ ಕಾರ್ಯಕ್ರಮಗಳನ್ನು ನಿರಂತರ ಹಮ್ಮಿಕೊಳ್ಳುವುದು.

5. ವಸತಿ ಸೌಲಭ್ಯ
ವಸತಿ ರಹಿತರ ಸಮರ್ಪಕ ಸಮೀಕ್ಷೆ- ನಿಜವಾದ ಫಲಾನುಭವಿಗಳಿಗೆ ಮನೆ/ಮನೆ ನಿವೇಶನ. ವೈಯಕ್ತಿಕ ಮನೆ ನಿರ್ಮಾಣಕ್ಕಿಂತ ವಸತಿ ಸಂಕೀರ್ಣಗಳನ್ನು ರಚಿಸಿ ಹಂಚುವುದು ಮತ್ತು ಮಾರುವ, ಪರಭಾರೆ ಕ್ರಮವನ್ನು ನಿಷೇಧಿಸುವುದು. 

6. ಆರೋಗ್ಯ
ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು  ಮೇಲ್ದರ್ಜೆಗೇರಿಸುವುದು, 24 ತಾಸೂ ವೈದ್ಯಕೀಯ ಸವಲತ್ತು ಇರುವಂತೆ ನೋಡಿಕೊಳ್ಳುವುದು. ವಿಶೇಷವಾಗಿ ಹೆರಿಗೆ ಪ್ರಕರಣಗಳನ್ನು ಸ್ಥಳೀಯವಾಗಿ ನಿರ್ವಹಿಸುವಂತಾಗಬೇಕು.

7. ಕಂದಾಯ
ಮೂಡಬಿದಿರೆ ತಾಲೂಕು ಕಚೇರಿ ಸಿಬಂದಿಯನ್ನು ನಿಯಮಾನುಸಾರ ನಿಯೋಜಿಸುವ ಮೂಲಕ ಈಗ ನಿಧಾನಗತಿಯಲ್ಲಿರುವ ಕಾರ್ಯವಾಹಿನಿಗೆ ಚುರುಕು ಮುಟ್ಟಿಸುವುದು ಅಗತ್ಯ. ಪಂಚಾಯತ್‌ ಮಟ್ಟದಲ್ಲೇ ಪಹಣಿ ಪತ್ರ ವಿತರಿಸುವುದು.

8. ಕುಡಿಯುವ ನೀರು
ಅಸಮರ್ಪಕವಾಗಿರುವ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯನ್ನು ಸರಿಪಡಿಸಿ ಸಮರ್ಥವಾಗಿಸುವುದು. ಕಳಪೆ ಕಾಮಗಾರಿಯ ಬಗ್ಗೆ ನಿಗಾವಹಿಸುವುದು ನಿರ್ವ ಹಣೆಗಾಗಿ ಸ್ಥಳೀಯ ಸಮಿತಿಗಳನ್ನು ರೂಪಿಸುವುದು.  

9. ಬಿಪಿಎಲ್‌ ಕಾರ್ಡ್‌
ಬಿಪಿಎಲ್‌ ಕಾರ್ಡುದಾರರ ನೈಜ ಅರ್ಹತೆಯನ್ನು ಎನ್‌ಜಿಒ ಮೂಲಕ ಖಚಿತಪಡಿಸಿ ಕ್ರಮಕೈಗೊಳ್ಳುವುದು. ಬಡವರಿಗೆ ನೀಡುತ್ತಿರುವ ಸವಲತ್ತುಗಳು ಉಳ್ಳವರ ಪಾಲಾಗುವುದಕ್ಕೆ ಕಡಿವಾಣ ಹಾಕುವುದು.

10. ಅಕ್ಷರ ದಾಸೋಹ
ಸರಕಾರಿ/ಅನುದಾನಿತ/ ಅನುದಾನ ರಹಿತ ಶಾಲೆಗಳಿಗೆ ಅಕ್ಷರ ದಾಸೋಹದ ಸೌಲಭ್ಯ (ಅಪೇಕ್ಷೆ ಇಲ್ಲದ ಶಾಲೆಗಳನ್ನು ಹೊರತು ಪಡಿಸಿ). ವರ್ಗಭೇದವಿಲ್ಲದೆ ಆಹಾರ ವಿತರಿಸಲು ಕ್ರಮ ಕೈಗೊಳ್ಳಬೇಕಿದೆ.

11. ಪ್ರವಾಸೋದ್ಯಮ
ಪ್ರವಾಸೋದ್ಯಮ ಸಾಧ್ಯತೆಗಳ ಬಗ್ಗೆ ಜಾಗೃತಿ ಮತ್ತು ಇಲಾಖಾ ಪರಿವೀಕ್ಷಣೆ, ಪ್ರೋತ್ಸಾಹ, ನಿರುದ್ಯೋಗಿಗಳಿಗೆ ತಾತ್ಕಾಲಿಕ ಮಾರ್ಗದರ್ಶಕ ಹುದ್ದೆ ನೀಡಿ ಪ್ರೋತ್ಸಾಹಿಸುವುದು ಅಗತ್ಯವಾಗಿದೆ.

12. ಕೃಷಿ 
ಪಟ್ಲ ಗದ್ದೆಗಳ (ಮಳೆಗಾಲದಲ್ಲಿ  ಕನಿಷ್ಠ 2 ಅಡಿ ನೀರು ನಿಲ್ಲುವ ಹೊಲಗಳು) ಕನ್ವರ್ಷನ್‌ ನಿಷೇಧ, ತನ್ಮೂಲಕ ಜಲಮೂಲಗಳ ವೃದ್ಧಿಗೆ ಕ್ರಮ, ಭತ್ತ ಬೆಳೆಯುವವರಿಗೆ ಪ್ರೋತ್ಸಾಹ (ಕೇರಳ ಮಾದರಿ) ನೀಡುವುದು ಅಗತ್ಯ.

ಟಾಪ್ ನ್ಯೂಸ್

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.