ತುಳು ಸಾ.ಅ: ಸಂಜೀವ ಬಂಗೇರ,ಕೃಷ್ಣಪ್ಪ ಉಪ್ಪೂರು,ಉಲ್ಲಾಸ ಕೃಷ್ಣ ಪೈರಿಗೆ ಗೌರವ ಪ್ರಶಸ್ತಿ
Team Udayavani, Jul 22, 2022, 6:52 AM IST
ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು ಜಾನಪದ ಕ್ಷೇತ್ರದ ಸಾಧಕ ಸಂಜೀವ ಬಂಗೇರ ತಲಪಾಡಿ, ನಿರ್ದೇಶಕ/ನಿರ್ಮಾಪಕ ಕೃಷ್ಣಪ್ಪ ಉಪ್ಪೂರು ಮತ್ತು ಸಾಹಿತಿ ಉಲ್ಲಾಸ ಕೃಷ್ಣ ಪೈ ಪುತ್ತೂರು ಅವರು ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲಸಾರ್ ಪತ್ರಿಕಾಗೋಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತರ ವಿವರ ಪ್ರಕಟಿಸಿದರು. ವಿಶೇಷ ಬಾಲ ಪ್ರತಿಭಾ ಪುರಸ್ಕಾರ, ಯುವ ಸಾಧಕ ಪುರಸ್ಕಾರ, ಮಾಧ್ಯಮ ಪುರಸ್ಕಾರ, ಸಂಘಟನ ಪುರಸ್ಕಾರಕ್ಕೆ ರಾಜ್ಯ, ಹೊರ ರಾಜ್ಯ ಮತ್ತು ಹೊರ ರಾಷ್ಟ್ರದಲ್ಲಿ ವಿಶೇಷವಾಗಿ ಗುರುತಿಸಿ ಆಯ್ಕೆ ಮಾಡಲಾಗಿದೆ ಎಂದರು.
ಪುಸ್ತಕ ಬಹುಮಾನ :
ಕವನ ಸಂಕಲನ ವಿಭಾಗದಲ್ಲಿ ಯೋಗೀಶ್ ಕಾಂಚನ್ ಬೈಕಂಪಾಡಿ ಅವರ “ತಂಞನ ಬೊಳ್ಳಿ’, ನಾಟಕ ವಿಭಾಗದಲ್ಲಿ ಅಕ್ಷತಾ ರಾಜ್ ಪೆರ್ಲ ಅವರ “ಬೇಲಿ, ಸಾಪೊದ ಕಣ್ಣ್’, ಅಧ್ಯಯನ ವಿಭಾಗದಲ್ಲಿ ಡಾ| ಅಶೋಕ ಆಳ್ವ ಸುರತ್ಕಲ್ ಅವರ “ತುಳುನಾಡಿನ ಪ್ರಾಣಿ ಜಾನಪದ’ ಆಯ್ಕೆಯಾಗಿದೆ.
ವಿಶೇಷ ಪುರಸ್ಕಾರ :
ಬಾಲ ಪ್ರತಿಭಾ ಪುರಸ್ಕಾರಕ್ಕೆ ನಿರೀಕ್ಷಾ ಕೋಟ್ಯಾನ್ ಕೋಡಿಕೆರೆ, ಜೀವಿಕಾ ಶೆಟ್ಟಿ ಮುಂಬಯಿ, ಸಾನ್ವಿ ಯುಎಸ್ಎ, ಯುವ ಸಾಧಕ ಪುರಸ್ಕಾರಕ್ಕೆ ಹರಿಪ್ರಸಾದ್ ನಂದಳಿಕೆ, ಚಿನ್ಮಯಿ ಮೋಹನ್ ಸಾಲಿಯಾನ್ ಮುಂಬಯಿ, ರಮಾನಂದ ಶೆಟ್ಟಿ ಒಮನ್, ಮಾಧ್ಯಮ ಪುರಸ್ಕಾರಕ್ಕೆ ಶಶಿ ಬಂಡಿಮಾರ್, ರೋನ್ಸ್ ಬಂಟ್ವಾಳ ಮುಂಬಯಿ ಆಯ್ಕೆಯಾಗಿದ್ದಾರೆ. ಸಂಘಟನ ಪುರಸ್ಕಾರಕ್ಕೆ ಜೈ ತುಳುನಾಡು, ತುಳು ಕೂಟ ಫೌಂಡೇಶನ್ ನಾಲಸೋಪಾರ ಮುಂಬಯಿ, ತುಳುಕೂಟ ಕತಾರ್ ಆಯ್ಕೆಯಾಗಿವೆ.
ಗೌರವ ಪ್ರಶಸ್ತಿ 50,000 ರೂ. ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ, ಪುಸ್ತಕ ಬಹುಮಾನ 25,000 ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ವಿಶೇಷ ಪುರಸ್ಕಾರ 10,000 ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಒಳಗೊಂಡಿರುತ್ತದೆ ಎಂದು ಕತ್ತಲಸಾರ್ ತಿಳಿಸಿದರು.
ಅಕಾಡೆಮಿ ಸದಸ್ಯರಾದ ಲೀಲಾಕ್ಷ ಕರ್ಕೇರ, ಕಾಂತಿ ಶೆಟ್ಟಿ ಬೆಂಗಳೂರು, ನಾಗೇಶ್ ಕುಲಾಲ್ ಕುಳಾಯಿ, ರಿಜಿಸ್ಟ್ರಾರ್ ಕವಿತಾ ಪತ್ರಿಕಾಗೋಷ್ಠಿಯಲ್ಲಿದ್ದರು.
ಜಾನಪದ ಕ್ಷೇತ್ರದ ಸಾಧಕ ಸಂಜೀವ ಬಂಗೇರ :
ದೈವಗಳ ನೇಮಕಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ಜತೆಗೆ ಪಾಡªನ ಗಾಯಕರಾಗಿದ್ದಾರೆ. ತುಳುನಾಡಿನ ಪ್ರಸಿದ್ಧ ಕ್ಷೇತ್ರಗಳಾದ ಪಾವೂರು, ಬೆಳ್ಮ ದಬ್ಬೆಲಿ, ಕುದುಕೋಳಿ, ಕುರ್ನಾಡು ಗುರುಪುರ, ಮಂಜೇಶ್ವರ, ವರೇಕಳ, ಕೋಟ್ರಗುತ್ತು, ಪಟ್ಟೋರಿಗಳಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಉದ್ಯಾವರ ಅರಸು ಮಂಜಿಷ್ಣಾರ್ ಮಾಡದ ಅರಸುದೈವಗಳ ಪಾಡ್ದನ, (ಮೂಡದಾಯ) ವೈದ್ಯನಾಥ ದೈವದ, ಜುಮಾದಿ, ಜಾರಂದಾಯ, ಪಂಜುರ್ಲಿ, ಉಗೆದಲ್ತಾಯ, ಬಂಟ ಹೀಗೆ ಅನೇಕ ರಾಜದೈವಗಳ ನೇಮಕಟ್ಟುವ ಸೇವೆ ಮಾಡಿದ್ದಾರೆ.
ಕೃಷ್ಣಪ್ಪ ಉಪ್ಪೂರು
ಉಪನ್ಯಾಸಕರಾಗಿ ಇವರು ಚಲನ ಚಿತ್ರಗಳಲ್ಲಿ ವೃತ್ತಿಪರರಾಗಿ ಹಾಗೂ ನಾಟಕಗಳಲ್ಲಿ ಹವ್ಯಾಸಿ ಕಲಾವಿದನಾಗಿ ಕಲಾ ಸೇವೆ ಮಾಡಿದ್ದಾರೆ. ಇವರ ವಿಶೇಷ ಸಾಮಾಜಿಕ ಪರಿಣಾಮ ಬೀರಿದ “ಮಾರಿಬಲೆ’ ತುಳು ಚಿತ್ರಕ್ಕೆ 1997-98ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ಕರ್ನಾಟಕ ಚಲನಚಿತ್ರ ಕೈಗಾರಿಕಾ ಅಭಿವೃದ್ಧಿ ನಿಗಮದ ನೋಂದಾಯಿತ ನಿರ್ದೇಶಕರಾಗಿದ್ದು ಹಲವಾರು ತುಳು ಸಿನೆಮಾ,ನಾಟಕಗಳಿಗೆ ಮಾರ್ಗದರ್ಶನ ನೀಡಿದ್ದಾರೆ.
ಉಲ್ಲಾಸ ಕೃಷ್ಣ ಪೈ ಪುತ್ತೂರು :
ಗೌರವ ಸಂದರ್ಶಕ ಶಿಕ್ಷಕರಾಗಿರುವ ಇವರು 3 ದಶಕಗಳಿಂದ ಉಚಿತವಾಗಿ ಸೇವೆ ಸಲ್ಲಿಸುತ್ತಿದ್ದಾರೆ. 6 ಭಾಷೆಗಳಲ್ಲಿ ಮಕ್ಕಳ ಸಾಹಿತ್ಯ ರಚಿಸಿದ್ದಾರೆ. 25ಕ್ಕೂ ಅಧಿಕ ಭಾಷೆಗಳಲ್ಲಿ ಶಿಶುಪ್ರಾಸ, ಅಭಿನಯ ಗೀತೆಗಳನ್ನು ಕಲಿಸಿಕೊಡುತ್ತಿದ್ದಾರೆ. 20ಕ್ಕೂ ಮಿಕ್ಕಿ ತುಳು ವಿಕಾಸಮಾಲೆಯ ಕೃತಿಗಳನ್ನು, ಇತರ ಭಾಷೆಗಳಲ್ಲಿ ನೂರಾರು ಕೃತಿಗಳನ್ನು ರಚಿಸಿದ್ದಾರೆ. ಕಡ್ಲೆಪುಂಡಿ, ಪುಳಿಂಕೊಟೆ ಬಾಂಬೆ ಮಿಠಾಯಿ, ಸಾಂತಾಣಿ, ಚಿತ್ರಾಕ್ಷರ ಶಬ್ದಬಂಧ, ಅಕ್ರೋಟು, ಚಿಲಿಪಿಲಿ ಗುರ್ಬಿ ಪಕ್ಕಿ, ಕಿಟ್ಟಣ್ಣ ಕುರ್ಲರಿ, ಮೋಕೆದ ಜೋಸ್ತಿ, ಕಮಲನ ಕಿಲಕಿಲ ಇವರ ತುಳು ವಿಕಾಸ ಮಾಲೆಯ ಕೃತಿಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
MUST WATCH
ಹೊಸ ಸೇರ್ಪಡೆ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!