ಕೇರಳ ಸಿಎಂ ಭಾಗವಹಿಸುವುದು ಸ್ವಾಗತಾರ್ಹ: ಜೆಡಿಎಸ್
Team Udayavani, Feb 25, 2017, 10:35 AM IST
ಮಂಗಳೂರು: ಸಿಪಿಎಂ ಪಕ್ಷ ಫೆ. 25ರಂದು ಆಯೋಜಿಸುತ್ತಿರುವ ಸೌಹಾರ್ದ ರ್ಯಾಲಿಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿಸುವುದನ್ನು ಮಂಗಳೂರು ವಿಧಾನ ಸಭಾ ಕ್ಷೇತ್ರ ಜಾತ್ಯತೀತ ಜನತಾ ದಳ ಸ್ವಾಗತಿಸುತ್ತದೆ ಎಂದು ಪಕ್ಷದ ಮಂಗಳೂರು ನಗರ ದಕ್ಷಿಣ ವಿಧಾನ ಪರಿಷತ್ ಅಧ್ಯಕ್ಷ ಎ. ವಸಂತ ಪೂಜಾರಿ ತಿಳಿಸಿದ್ದಾರೆ.
ರಾಲಿ ಸಾಮರಸ್ಯದಿಂದ ನಡೆಯಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಅಂದು ಕರೆ ನೀಡಿರುವ ಬಂದ್ಗೆ ಜೆಡಿಎಸ್ ಬೆಂಬಲ ನೀಡುವುದಿಲ್ಲ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.