ಖಾಲಿಯಾ ರಫೀಕ್ ಕೊಲೆ: ಮೂವರ ಬಂಧನ
Team Udayavani, Mar 1, 2017, 12:07 PM IST
ಮಂಗಳೂರು: ರೌಡಿಶೀಟರ್, ಉಪ್ಪಳ ನಿವಾಸಿ ಖಾಲಿಯಾ ರಫೀಕ್ ಹತ್ಯೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಮಂಗಳೂರಿನ ಸಿಸಿಬಿ ಪೊಲೀಸರು ಹಾಗೂ ಉಳ್ಳಾಲ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಉಪ್ಪಳ ಕೊಂಡೆಕೂರು ನಿವಾಸಿ ಟಿಪ್ಪರ್ ಚಾಲಕ ವೃತ್ತಿಯ ನೂರ್ ಆಲಿ (36), ಹೊಸ ದುರ್ಗ ತಾಲೂಕು ಪನಂತ್ತೂರ್ ರಾಜಪುರಂ ನಿವಾಸಿ ಚಾಲಕ ವೃತ್ತಿಯ ರಶೀದ್ ಟಿ.ಎಸ್. (30) ಹಾಗೂ ಬಂಟ್ವಾಳ ತಾಲೂಕು ಸಂಗಬೆಟ್ಟು ನಿವಾಸಿ ಕೂಲಿ ಕೆಲಸದ ಹುಸೈನಬ್ಬ ಅಲಿಯಾಸ್ ಹುಸೈನ್ ಅಲಿಯಾಸ್ ಸುಹೈಲ್ ಬಂಧಿತರು. ಇನ್ನೂ ಐವರು ಆರೋಪಿಗಳ ಬಂಧನವಾಗಬೇಕಾಗಿದೆ.
ಕೇರಳ ಮತ್ತು ಕರ್ನಾಟಕದಲ್ಲಿ ಕೊಲೆಯತ್ನ, ಕೊಲೆ ಹಾಗೂ ದರೋಡೆ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಕುಖ್ಯಾತ ಗೂಂಡಾ ಖಾಲಿಯಾ ರಫೀಕ್ನನ್ನು (38) ಫೆ. 14 ರಂದು ತಡರಾತ್ರಿ ದುಷ್ಕರ್ಮಿಗಳ ತಂಡ ನಗರದ ಕೋಟೆಕಾರು ಪೆಟ್ರೋಲ್ ಬಂಕ್ ಬಳಿ ಗುಂಡಿಕ್ಕಿ, ತಲವಾರಿನಿಂದ ಕಡಿದು ಹತ್ಯೆ ಮಾಡಿತ್ತು.
ಆರೋಪಿಗಳ ಬಂಧನದ ಬಗ್ಗೆ ಮಂಗಳೂರಿನ ತಮ್ಮ ಕಚೇರಿಯಲ್ಲಿ ಪೊಲೀಸ್ ಆಯುಕ್ತ ಎಸ್. ಚಂದ್ರಶೇಖರ್ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ತಲೆ ಮರೆಸಿಕೊಂಡಿರುವ ಆರೋಪಿಗಳ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮಂಜನಾಡಿ ನೆತ್ತಿಲಪದವು ರಸ್ತೆಯ ಕಲ್ಲರಕೋಡಿ ಬಳಿ ಕಾರಿನಲ್ಲಿದ್ದ ಮೂವರು ಆರೋಪಿಗಳನ್ನು ಬಂಧಿಸಿದರು.
ಬಂಧಿತರಿಂದ ಕೃತ್ಯಕ್ಕೆ ಉಪಯೋಗಿಸಿದ ನಾಡ ಪಿಸ್ತೂಲ್, ತಲವಾರು ಹಾಗೂ ಮಾರುತಿ ಎರ್ಟಿಗಾ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಶೋಧ ಮುಂದುವರಿದಿದೆ ಎಂದು ಆಯುಧಿಕ್ತರು ವಿವರಿಸಿದರು.
ಖಾಲಿಯಾ ಮತ್ತು ಇನ್ನೋರ್ವ ಜಿಯಾ ನಡುವೆ ಸಂಘರ್ಷವಿತ್ತು. ಖಾಲಿಯಾ 2013 ರಲ್ಲಿ ಮುತ್ತಲಿಬ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದ. ಬಳಿಕ ಆತನನ್ನು ಬಂಧನವಾಗಿತ್ತು. ಮುತ್ತಲಿಬ್ ತಮ್ಮ ನೂರ್ ಆಲಿ ಜಿಯಾ ಜತೆ ಸೇರಿ ಖಾಲಿಯಾ ಕೊಲೆ ಸಂಚು ರೂಪಿಸಿದ್ದು ಖಾಲಿಯಾ ಚಲನವಲನಗಳ ಬಗ್ಗೆ ತಂಡ ಗಮನಿಸುತ್ತಿತ್ತು. ಮೂರು ತಿಂಗಳಿನಿಂದ ಐದು ಬಾರಿ ಸತತ ಆತನ ಕೊಲೆಗೆ ಪ್ರಯತ್ನಗಳು ನಡೆದಿತ್ತು.
ಫೆ. 14ರಂದು ರಾತ್ರಿ ಖಾಲಿಯಾ ಕಾಸರಗೋಡಿನಿಂದ ಮಂಗಳೂರಿಗೆ ಬರುವ ಬಗ್ಗೆ ಮಾಹಿತಿ ಪಡೆದ ತಂಡ ಆತನನ್ನು ಹಿಂಬಾಲಿಸಿಕೊಂಡು ಬಂದಿತ್ತು. ಕೋಟೆಕಾರು ಬಳಿ ರಾಂಗ್ಸೈಡ್ನಲ್ಲಿ ನಿಲ್ಲಿಸಿದ್ದ ಟಿಪ್ಪರ್ನಿಂದ ಆತನ ಕಾರಿಗೆ ಢಿಕ್ಕಿ ಹೊಡೆಸಿ ಬಳಿಕ ಎರಡು ಗುಂಡು ಹಾರಿಸಿ ತಲವಾರಿನಿಂದ ಕಡಿದು ಕೊಲೆ ಮಾಡಲಾಗಿತ್ತು ಎಂದವರು ತಿಳಿಸಿದರು.
ಖಾಲಿಯಾ ಕಲಿ ಯೋಗೀಶ ಪರವಾಗಿ ಕೆಲಸ ಮಾಡಿದ್ದು ಜುವೆಲರಿ ಮಳಿಗೆ ಶೂಟೌಟ್ನಲ್ಲಿ ಭಾಗಿಯಾಗಿದ್ದ ಎಂದರು.
ಎಸಿಸಿ ಶ್ರುತಿ ಅವರ ನೇತೃತ್ವದಲ್ಲಿ ಸಿಸಿಬಿ ಘಟಕದ ಇನ್ಸ್ಪೆಕ್ಟರ್ ಸುನೀಲ್ ವೈ. ನಾಯ್ಕ ಅವರ ತಂಡ ಹಾಗೂ ಉಳ್ಳಾಲ ಪಿಐ ಗೋಪಿಕೃಷ್ಣ ಅವರ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.
ಕಾಸರಗೋಡು ಪೊಲೀಸರು ಹಾಗೂ ಮಂಗಳೂರು ಪೊಲೀಸರು ಅಪರಾಧ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದೆ.
ಇತ್ತೀಚೆಗೆ ದರೋಡೆಗೆ ತಂತ್ರ ರೂಪಿಸುತ್ತಿದ್ದ ಆರು ಮಂದಿಯನ್ನು ಬಂಧಿಸಲಾಗಿತ್ತು ಎಂದರು. ಡಿಸಿಪಿಗಳಾದ ಶಾಂತರಾಜು ಹಾಗೂ ಡಾ| ಸಂಜೀವ ಪಾಟೀಲ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!
Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ
Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು
MUST WATCH
ಹೊಸ ಸೇರ್ಪಡೆ
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ