ರಾಜ್ಯದಲ್ಲಿ ಅತೃಪ್ತರ ಸರಕಾರ: ಕೆ.ಎಸ್. ಈಶ್ವರಪ್ಪ
Team Udayavani, Jun 21, 2018, 6:00 AM IST
ಸುಬ್ರಹ್ಮಣ್ಯ: ರಾಜ್ಯದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಗುಂಪು ಗಾರಿಕೆ ಇದೆ. ಕಾಂಗ್ರೆಸ್ನಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಗುಂಪು ಗಾರಿಕೆ ತಲೆದೋರಿದೆ. ಎರಡೂ ಪಕ್ಷಗಳಲ್ಲಿ ಅತೃಪ್ತರ ಸಂಖ್ಯೆಯೇ ಹೆಚ್ಚಿದ್ದು, ರಾಜ್ಯದಲ್ಲಿ ಅತೃಪ್ತರ ಸರಕಾರ ಆಡಳಿತ ದಲ್ಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಬುಧವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲಕ್ಕೆ ಆಗಮಿಸಿದ ಅವರು ದೇವರ ದರ್ಶನ ಪಡೆದು ತುಲಾಭಾರ ಸೇವೆ, ಪಂಚಾಮೃತ ಅಭಿಷೇಕ, ಮಹಾ ಪೂಜೆ ನೆರವೇರಿಸಿ ಬಳಿಕ ಪತ್ರಕರ್ತರ ಜತೆ ಮಾತನಾಡಿದರು. ಸಮ್ಮಿಶ್ರ ಸರಕಾರ ಆಡಳಿತಕ್ಕೆ ಬಂದು ಇನ್ನು ಎರಡು ತಿಂಗಳೂ ಪೂರೈಸಿಲ್ಲ. ಅಷ್ಟರಲ್ಲೇ ಒಳಗೊಳಗೆ ಅಪಸ್ವರ ಎದ್ದಿದೆ. ಈ ಅತೃಪ್ತರ ಸರಕಾರ ಹೆಚ್ಚು ದಿನ ಬಾಳಿಕೆ ಬರಲಾರದು. ಶೀಘ್ರ ಬಿಜೆಪಿ ಸರಕಾರ ಆಡಳಿತಕ್ಕೆ ಬರಲಿದೆ ಎಂದವರು ಭವಿಷ್ಯ ನುಡಿದರು.
ಕ್ಷೇತ್ರ ದರ್ಶನ; ಮೂರು ಕಾರಣ
ಬಿಜೆಪಿ ಅತೀ ಹೆಚ್ಚು ಕ್ಷೇತ್ರ ಗಳಲ್ಲಿ ಜಯ ಸಾಧಿಸಿದ್ದಕ್ಕೆ , ನಾನು ನಿರೀಕ್ಷೆಗೆ ಮೀರಿದ ಮತ ಪಡೆದು ಗೆಲುವು ಸಾಧಿಸಿರುವುದಕ್ಕೆ, ಮೂರನೆಯದು ಮುಂದಿನ ಲೋಕಸಭಾ ಚುನಾವಣೆ ಯಲ್ಲಿ ಮೋದಿಯವರ ನೇತೃತ್ವದ ಬಿಜೆಪಿ ಗೆಲುವು ಸಾಧಿಸಿ ಬರಲೆಂದು ಪ್ರಾರ್ಥನೆ ಸಲ್ಲಿಸಲು ಇಲ್ಲಿಗೆ ಬಂದಿರುವೆ ಎಂದು ಅವರು ತಿಳಿಸಿದರು.
ತುಲಾಭಾರ ಸೇವೆ
ದೇಗುಲದಲ್ಲಿ ಅವರು ಎಳ್ಳು, ಅಕ್ಕಿ ಹಾಗೂ ಬೆಲ್ಲದಲ್ಲಿ ತುಲಾಭಾರ ನೆರವೇರಿಸಿದರು. ಮಗಳು, ಅಳಿಯ ಮತ್ತು ಜೋತಿಷಿ ದ್ವಾರಕನಾಥ ಜತೆಗಿದ್ದರು. ಶಿಷ್ಟಾಚಾರ ಅಧಿಕಾರಿ ಗೋಪಿನಾಥ ನಂಬೀಶ, ಸ್ಥಳೀಯ ಯುವ ಮುಖಂಡ ಶ್ರೀಕುಮಾರ್ ನಾಯರ್ ಬಿಲದ್ವಾರ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
Narayan Gowda: ಹೆಚ್ಚಿನ ಮತಗಳಿಂದ ಎಚ್ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Raksha Ramaiah: ಯಾರಿಗೆ ಟಿಕೆಟ್ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ
World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?