ಸರಕಾರಿ ಬಸ್‌ಗಳ ಮುಖಾಮುಖೀ ಢಿಕ್ಕಿ: 20 ಮಂದಿಗೆ ಗಾಯ


Team Udayavani, May 10, 2017, 10:58 AM IST

10-REPORT-1.jpg

ಉಪ್ಪಿನಂಗಡಿ: ಕೆಎಸ್‌ ಆರ್‌ಟಿಸಿ ಬಸ್‌ಗಳೆರಡು ಮುಖಾ ಮುಖೀ ಢಿಕ್ಕಿ ಹೊಡೆದು ಬಸ್‌ನಲ್ಲಿದ್ದ ಸುಮಾರು 20 ಜನರು ಗಾಯ ಗೊಂಡ ಘಟನೆ ಉಪ್ಪಿನಂಗಡಿ  ಠಾಣಾ ವ್ಯಾಪ್ತಿಯ ಉಪ್ಪಳಿಗೆಯಲ್ಲಿ ಮಂಗಳವಾರ ಸಂಭವಿಸಿದೆ.

ಚಾಲಕ ಮುಗುಳು ಮಲ್ಲಪ್ಪ, ಬೇಲೂರಿನ ರಾಘವೇಂದ್ರ (18)ಇಚ್ಲಂಪಾಡಿಯ ವಿಬಿನ್‌ (17), ಶೆರ್ಲಿ (48), ಕೊಕ್ಕಡದ ಜೆಸ್ಸಿ ಯಾನೆ ಡೆಸ್ಟಿ (38), ಬೇಲೂರಿನ ಉಮೇಶ, ಸಕಲೇಶಪುರದ ನಾಗೇಂದ್ರ, ನೆಲ್ಯಾ ಡಿಯ ಹರ್ಫಾನ್‌, ಚಿಕ್ಕೋಡಿಯ ಉಮರಬ್ಬ, ಮಂಗಳೂರು ಅಳಕೆಯ ಅಶ್ವಿ‌ನಿ (25), ಕುಲಶೇಖರದ ನಿತಿನ್‌ (35), ಕೊಕ್ಕಡದ ಕುಸುಮಾ (62), ನೆಲ್ಯಾಡಿಯ ಮುಫಿÌಝ ಕೆ.ಎಂ. (25), ಕೊಕ್ಕಡದ ದಿಗಂತ್‌ (8), ಕೊಕ್ಕಡದ ನಿತ್ಯಾನಂದ (45), ವಸಂತಿ ಹಾಗೂ ಚನ್ನರಾಯ ಪಟ್ಟಣದ ಮಾಸ್ತಿಗೌಡ (36)  ಸೇರಿ ದಂತೆ ಸುಮಾರು 20 ಮಂದಿ  ಗಾಯಗೊಂಡಿದ್ದು, ಇವರನ್ನು ಪುತ್ತೂರು ಹಾಗೂ ಮಂಗಳೂರಿನ ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಸುಮಾ ಅವರು ಪುತ್ತೂರು ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದರೆ, ನಿತ್ಯಾನಂದ ಹಾಗೂ ಮಾಸ್ತಿ ಗೌಡ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸ್ಥಿತಿ ಗಂಭೀರ ವಾಗಿದೆ. ಅಪರಾಹ್ನ 2:35ರ ಸುಮಾರಿಗೆ ಈ ಅಪಘಾತ ಸಂಭವಿ ಸಿದ್ದು, ಈ ಸಂದರ್ಭ ವಳಾಲು, ನೀರಕಟ್ಟೆ ಸೇರಿದಂತೆ ಈ ಭಾಗದಲ್ಲಿ ಮಳೆ ಸುರಿಯುತ್ತಿತ್ತು. ಎರಡೂ ಬದಿಯ ಹೆದ್ದಾರಿಯಂಚುಗಳಿಗೆ ಮಣ್ಣು ಹಾಕಿ ಸಮತಟ್ಟುಗೊಳಿಸ ಲಾಗಿದ್ದು, ಮಳೆಗೆ ಇದು ಕೆಸರಾಗಿ ರಸ್ತೆ ಕೂಡ ಕೆಸರಾಗಿತ್ತು. ಆದ್ದರಿಂದ ತತ್‌ಕ್ಷಣಕ್ಕೆ ವಾಹನಗಳ ಬ್ರೇಕ್‌ ಕೂಡ ಹಿಡಿಯದಂತಹ ಸ್ಥಿತಿ ಇತ್ತು. ಅಪಘಾತದ ಸಂದರ್ಭ ಪುತ್ತೂರು ನಗರ ಠಾಣಾ ಪೊಲೀಸರು ಅನ್ಯ ಕರ್ತವ್ಯದ ನಿಮಿತ್ತ ಈ ದಾರಿಯಾಗಿ ಹೋಗುತ್ತಿದ್ದು, ಗಾಯಾಳುಗಳನ್ನು ಸಾಗಿಸಲು ಸಾರ್ವಜನಿಕರೊಂದಿಗೆ ತತ್‌ಕ್ಷಣದ ನೆರವು ನೀಡಿದರು. ನೆಲ್ಯಾಡಿ ಎಸ್‌ಡಿಪಿಐ ಆ್ಯಂಬುಲೆನ್ಸ್‌, ಉಪ್ಪಿನಂಗಡಿ 108 ಸೇರಿದಂತೆ ಕೆಲವು ಖಾಸಗಿ ವಾಹನಗಳಲ್ಲಿ ಗಾಯಾಳು ಗಳನ್ನು ವಿವಿಧ ಆಸ್ಪತ್ರೆಗೆ ಸಾಗಿಸಲಾಯಿತು. ಕೆಲವರನ್ನು ಉಪ್ಪಿನಂಗಡಿಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಪುತ್ತೂರಿಗೆ ಸಾಗಿಸಲಾಯಿತು. ಬಳಿಕ ನೆಲ್ಯಾಡಿ ಹೊರಠಾಣಾ ಪೊಲೀಸ್‌ ಸಿಬಂದಿ, ಪುತ್ತೂರು ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ, ಕಾರ್ಯಾಚರಣೆಯಲ್ಲಿ ಕೈಜೋಡಿಸಿದರು. ಬಳಿಕ ಬಸ್‌ಗಳನ್ನು ಕ್ರೇನ್‌ ಸಹಾಯದಿಂದ ಎಳೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಪ್ರಕರಣ ದಾಖಲಾಗಿದೆ.

ಬೆಂಗಳೂರಿನಿಂದ ಕುಂದಾಪುರಕ್ಕೆ ಆಗಮಿಸುತ್ತಿದ್ದ ಕುಂದಾಪುರ ಡಿಪೋದ ಕೆಎ 19 ಎಫ್ 3349 ಕೆಎಸ್ಸಾರ್ಟಿಸಿ ಬಸ್‌ ಹಾಗೂ ಮಂಗಳೂರಿನಿಂದ ಅರಸೀಕೆರೆ ತೆರಳುತ್ತಿದ್ದ ಅರಸೀಕೆರೆ ಡಿಪೋದ ಕೆಎ 18 ಎಫ್ 708 ಕೆಎಸ್ಸಾರ್ಟಿಸಿ ಬಸ್‌ಗಳ ಮಧ್ಯೆ ಈ ಅಪಘಾತ ಸಂಭವಿಸಿದೆ. ಬಜತ್ತೂರು ಹಾಗೂ ಗೋಳಿತೊಟ್ಟು ಗ್ರಾಮಗಳ ಗಡಿ ಪ್ರದೇಶವಾದ ಉಪ್ಪಳಿಗೆಯ ಬಳಿಯ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ಅರಸೀಕೆರೆಗೆ ತೆರಳುತ್ತಿದ್ದ ಬಸ್‌ನ ಚಾಲಕ ವಾಹನವೊಂದನ್ನು ಓವರ್‌ಟೇಕ್‌ ಮಾಡಲು ಯತ್ನಿಸಿ ಹೆದ್ದಾರಿಯ ವಿರುದ್ಧ ದಿಕ್ಕಿನಲ್ಲಿ ಬಸ್‌ ಅನ್ನು ಚಲಾಯಿಸಿದ್ದು, ಈ ಸಂದರ್ಭ ಎದುರಿನಿಂದ ಬರುತ್ತಿದ್ದ ಕುಂದಾಪುರಕ್ಕೆ ತೆರಳುವ ಬಸ್‌ಗೆ ಮುಖಾಮುಖೀ ಢಿಕ್ಕಿಯಾಗಿದೆ. ಅಪಘಾತದಿಂದ ಬಸ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಬಸ್‌ನ ಚಾಲಕ ಸೇರಿದಂತೆ ಕೆಲವರ ಕಾಲು ಮುರಿತಕ್ಕೊಳಗಾಗಿವೆ.

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.