ಶಿರಾಡಿ ಮೂಲಕ ಕೆಎಸ್ಸಾರ್ಟಿಸಿ ಸಂಚಾರ ಪುನರಾರಂಭ
Team Udayavani, Aug 14, 2019, 6:17 AM IST
ಮಂಗಳೂರು: ಶಿರಾಡಿ ಘಾಟಿ ಮಾರ್ಗವಾಗಿ ಮಂಗಳೂರು – ಬೆಂಗಳೂರು ಹಗಲು ಮತ್ತು ರಾತ್ರಿ ಬಸ್ ಸಂಚಾರ ಪುನರಾರಂಭಗೊಂಡಿದೆ. ಈವರೆಗೆ ಮಂಗಳೂರಿನಿಂದ ಬೆಂಗಳೂರಿಗೆ ಶಿರಾಡಿ ಘಾಟಿ ರಸ್ತೆ ಮಾರ್ಗವಾಗಿ ಹಗಲು ಮಾತ್ರ ಬಸ್ ಸಂಚಾರವಿತ್ತು. ರಾತ್ರಿ ವೇಳೆ ಸಂಪಾಜೆ ಘಾಟಿ ಮಾರ್ಗವಾಗಿ ಬಸ್ ಸಂಚರಿಸುತ್ತಿತ್ತು. ಆದರೆ ಮಂಗಳವಾರ ರಾತ್ರಿಯಿಂದ ಬಸ್ಗಳು ಶಿರಾಡಿ ಮಾರ್ಗವಾಗಿ ಸಂಚರಿಸಲಿವೆ ಎಂದು ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದ ನಿಯಂತ್ರಣಾಧಿಕಾರಿ ಕೆ.ಎಂ. ಆಶ್ರಫ್ “ಉದಯವಾಣಿ’ಗೆ ತಿಳಿಸಿದ್ದಾರೆ.
ಮಂಗಳೂರು ವಿಭಾಗದಿಂದ ಪುಣೆಗೆ ಬಸ್ ಸಂಚಾರ ಆರಂಭಗೊಂಡಿದೆ.
ಮುಂಬಯಿ ಮತ್ತು ಕುಂದಾಪುರ- ಕೊಲ್ಹಾಪುರ ಬಸ್ ಸಂಚಾರ ಇನ್ನೂ ಆರಂಭಗೊಂಡಿಲ್ಲ. ಪುತ್ತೂರು ವಿಭಾಗದಿಂದ ಹಾಸನ ಕಡೆಗೆ ತೆರಳುವ ಎಲ್ಲ ಬಸ್ಗಳು ಮಂಗಳವಾರ ಹಗಲು ಮತ್ತು ರಾತ್ರಿ ವೇಳೆ ಶಿರಾಡಿ ಮೂಲಕ ತೆರಳಿವೆ. ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಎಲ್ಲ ಖಾಸಗಿ ಬಸ್ಗಳು ಸೋಮವಾರದಿಂದ ಶಿರಾಡಿ ಘಾಟಿ ರಸ್ತೆಯಲ್ಲಿ ಸಂಚರಿಸುತ್ತಿವೆ.
ರೈಲು ಸಂಚಾರ ವ್ಯತ್ಯಯ
ಎರ್ನಾಕುಳಂನಿಂದ ಓಖಾಗೆ ಹೊರಡುವ (16338) ರೈಲು ಬುಧವಾರ ರದ್ದುಗೊಂಡಿದೆ. ಬುಧವಾರ ಪುಣೆಯಿಂದ ಎರ್ನಾಕುಲಂಗೆ ತೆರಳುವ (22150) ರೈಲು ಪನ್ವೇಲ್ನಿಂದ ಎರ್ನಾಕುಳಂವರೆಗೆ ಮಾತ್ರ ಸಂಚರಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
Mangaluru ಪೆಟ್ರೋಲ್, ಡೀಸೆಲ್ ತುಟ್ಟಿ : ಪುಷ್ಪಾ ಅಮರನಾಥ್
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ