ಕುಕ್ಕೆ: ಸೇವಾ ರೂಪದಲ್ಲಿ ಬೆಳ್ಳಿಯ ಪುಷ್ಪಕನ್ನಡಿ ಕೊಡುಗೆ
Team Udayavani, May 24, 2018, 12:51 PM IST
ಸುಬ್ರಹ್ಮಣ್ಯ: ನಾಗಾರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕೆ.ಎಲ್.
ರಮೇಶ್ ಬೆಂಗಳೂರು, ಇಂದಿರಾ ಮತ್ತು ಮಕ್ಕಳು ಸೇವಾ ರೂಪದಲ್ಲಿ ಬೆಳ್ಳಿಯ ಪುಷ್ಪಕನ್ನಡಿಯನ್ನು ಅರ್ಪಿಸಿದರು. ಉದ್ಯಮಿ ಕೆ.ಎಲ್. ರಮೇಶ್ ದಂಪತಿ ಸುಮಾರು 1.60 ಲಕ್ಷ ರೂ. ಮೌಲ್ಯದ ಪುಷ್ಪಕನ್ನಡಿಯನ್ನು ಗುರುವಾರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅವರಿಗೆ ಆಡಳಿತ ಕಚೇರಿಯಲ್ಲಿ ಹಸ್ತಾಂತರಿಸಿದರು.
ಬಳಿಕ ಆಡಳಿತ ಮಂಡಳಿ ಅಧ್ಯಕ್ಷರು ಸೇವಾಕರ್ತರಿಗೆ ಶಾಲು ಹೊದೆಸಿ, ಶ್ರೀ ದೇವರ ಬೆಳ್ಳಿಯ ಭಾವಚಿತ್ರ ನೀಡಿ ಗೌರವಿಸಿದರು. ಬಳಿಕ ದೇವಸ್ಥಾನದಲ್ಲೂ ಅರ್ಚಕರು ಸೇವಾರ್ಥಿಗಳಿಗೆ ಶಾಲು ಹೊದೆಸಿ, ಮಹಾ ಪ್ರಸಾದ ನೀಡಿದರು.
ಈ ಸಂದರ್ಭ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್., ಶಿಷ್ಟಾಚಾರ ಅಧಿಕಾರಿ ಕೆ.ಎಂ. ಗೋಪಿನಾಥ್ ನಂಬೀಶನ್ ಮೊದಲಾದವರು ಉಪಸ್ಥಿತರಿದ್ದರು.