ಕುಕ್ಕೆ: ಸಿದ್ಧವಾಗುತ್ತಿದೆ ಪಾರಂಪರಿಕ ಶಿಲ್ಪ ವೈಭವದ ಬ್ರಹ್ಮರಥ

 ಕೋಟೇಶ್ವರದಲ್ಲಿ ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯರ ಮಾರ್ಗದರ್ಶನದಲ್ಲಿ ಕೆತ್ತನೆ ಕಾರ್ಯ

Team Udayavani, Sep 2, 2019, 5:01 AM IST

SUB-1

 ವಿಶೇಷ ವರದಿ-ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೂತನ ಬ್ರಹ್ಮರಥವು ಈಗಿನ 400 ವರ್ಷಗಳ ಪುರಾತನವಾದ ರಥದ ಪ್ರಾಚೀನ ಶಿಲ್ಪ ಕಲೆಗೆ ಧಕ್ಕೆ ಬರದಂತೆ ಅದೇ ಆಯ, ಅಳತೆ ಶಾಸ್ತ್ರಗಳ ತದ್ರೂಪದಲ್ಲಿ ಕೋಟೇಶ್ವರದಲ್ಲಿ ನಿರ್ಮಾಣವಾಗುತ್ತಿದೆ.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಮಾರ್ಗದರ್ಶನದಲ್ಲಿ ಶಿಲ್ಪಿ ರಾಜಗೋಪಾಲ ನೇತೃತ್ವದಲ್ಲಿ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯಲ್ಲಿ ಬ್ರಹ್ಮರಥ ನಿರ್ಮಾಣಗೊಂಡಿದೆ. ನವರಾತ್ರಿ ಆರಂಭವಾಗುವ ಸೆ. 29ರ ರಾತ್ರಿ ಚಿತ್ತ ನಕ್ಷತ್ರದ ಶುಭ ಮುಹೂರ್ತದಲ್ಲಿ ರಥವನ್ನು ಕುಕ್ಕೆಗೆ ತರಲಾಗುತ್ತಿದೆ. ಅತ್ಯಲ್ಪ ಅವಧಿಯ ಏಳು ತಿಂಗಳಲ್ಲಿ ಶಿಲ್ಲಿಗಳ ಕಲಾ ನೈಪುಣ್ಯದಿಂದ ಹೊರಹೊಮ್ಮಿದ ರಥ ಸುಂದರವಾಗಿ ಮೂಡಿಬಂದಿದೆ.

ರಥದ ವಿಶೇಷ
ನೆಲದಿಂದ ರಥದ ಜಿಡ್ಡೆಯ ತನಕ 17 ಅಡಿ ಎತ್ತರ, ಅಗಲ, ಉದ್ದ ಇರಲಿದೆ. 6 ಚಕ್ರಗಳಿದ್ದು ಚಕ್ರ 8 ಅಡಿ ಎತ್ತರವಿದೆ. ರಥ ನೆಲದಿಂದ ಕಲಶದ ತುದಿವರೆಗೆ 63 ಅಡಿ ಎತ್ತರವಿರುತ್ತದೆ. ರಥ ಅಂದಾಜು 22 ಟನ್‌ ಭಾರವಿರಲಿದೆ. 16 ಅಂತಸ್ತುಗಳನ್ನು ಹೊಂದಿದ್ದು, ವಿವಿಧ ಜಾತಿಯ 2000 ಸಿಎಫ್ಎಫ್ ಮರ ಬಳಸಿಕೊಳ್ಳಲಾಗಿದೆ. ಉತ್ತರ ಭಾರತದಿಂದ ಸಾಗುವಾನಿ, ಗುಜರಾತಿನಿಂದ ಬೋಗಿ ಮರ ಹಾಗೂ ಸುಬ್ರಹ್ಮಣ್ಯ ಪ್ರಾಂತದಿಂದ ಕಿಲಾರ್‌ ಬೋಗಿ ಮರವನ್ನು ಬಳಸಿಕೊಳ್ಳಲಾಗಿದೆ.

ರಥದಲ್ಲಿ ಚತುರ್ವಂಶಿ ವಿಗ್ರಹ, ಶಿವ ಹಾಗೂ ಸುಬ್ರಹ್ಮಣ್ಯ ಸ್ವಾಮಿಯ ಲೀಲಾವಲಿಗಳು, ಅಷ್ಟ ದಿಕಾ³ಲರು, ಮಹಾಭಾರತ, ಪಾರ್ವತಿ ಕಲ್ಯಾಣ, ದಕ್ಷ ಯಜ್ಞ, ಪುತ್ರ ಕಾಮೇಷ್ಠಿ ಯಾಗ ಹಾಗೂ ಪ್ರಪಂಚದ ಸಕಲ ಜೀವರಾಶಿಗಳಿರುವ ಸಹಸ್ರಾರು ಚಿತ್ರಗಳ ಕೆತ್ತನೆಯಿಂದ ಕೂಡಿದೆ. ದೇವತೆಗಳು ಹಾಗೂ ದೇವರನ್ನು ಅತ್ಯಂತ ನಾಜೂಕಾಗಿ ಕೆತ್ತಲಾಗಿದ್ದು, ರಥ ಗಮನ ಸೆಳೆಯುತ್ತಿದೆ.

ರಥವು ನೆಗಳನ ಆನೆಕಾಲು, ಸಿಂಹಗಳು ಕೇನೆ ಅಡ್ಡಗಾಲು ಇತ್ಯಾದಿ ಇದೆ. ನಾಲ್ಕು ದಿಕ್ಕುಗಳಲ್ಲಿ ದ್ವಾರಪಾಲಕರು, ಕೆತ್ತನೆ, ಶಿಲ್ಪಗಳು ಶಿಲ್ಪಿಗಳ ಕಲಾ ಕುಸುರಿಗೆ ಸಾಕ್ಷಿಯಾಗಿವೆ. ಹಲವು ವೈಶಿಷ್ಟéಗಳ ಚಿತ್ರ ರಥದ ಸುತ್ತ ಮೂಡಿಬಂದಿವೆ. ಕಲೆಗಾಗಿ ಸಾಗುವಾನಿ ಮರ ಬಳಸಿಕೊಳ್ಳಲಾಗಿದೆ. ಚಕ್ರ ಮತ್ತು ಅಚ್ಚಿಗೆ ಬೋಗಿ ಮರ ಉಪಯೋಗಿಸಲಾಗಿದೆ.

 ಅನುಮತಿ ಪ್ರಕ್ರಿಯೆ
ನಿರೀಕ್ಷಿತ ಆವಧಿಯಲ್ಲಿ ರಥ ಸುಂದರ ರೂಪ ಪಡೆದು ಹೊರಹೊಮ್ಮಿದೆ. ಕೋಟೇಶ್ವರದಿಂದ ರಥವನ್ನು ಕುಕ್ಕೆಗೆ ತರುವ ಕುರಿತು ಸಿದ್ಧತೆಗಳನ್ನು ನಡೆಸುತ್ತಿದ್ದೇವೆ. ಇಲಾಖಾವಾರು ಅನುಮತಿ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ.
– ನಿತ್ಯಾನಂದ ಮುಂಡೋಡಿ
ಅಧ್ಯಕ್ಷರು, ಕುಕ್ಕೆ ದೇಗುಲ ವ್ಯವಸ್ಥಾಪನ ಸಮಿತಿ

 116ನೇ ರಥ
1969ರಲ್ಲಿ ರಥ ನಿರ್ಮಾಣ ಕೆಲಸ ಆರಂಭಿಸಿದ್ದೆವು. ಇಂದು 116ನೇ ರಥವಾಗಿ ಕುಕ್ಕೆ ಸುಬ್ರಹ್ಮಣ್ಯದ ಬ್ರಹ್ಮರಥ ನಿರ್ಮಿಸಿ ಕೊಡುತ್ತಿದ್ದೇವೆ. ಇದೊಂದು ಅತ್ಯದ್ಭುತ ಅನುಭವ ನೀಡಿದೆ. ಶೀಘ್ರ ಹಸ್ತಾಂತರಿಸುತ್ತಿದ್ದೇವೆ.
– ರಾಜಗೋಪಾಲ
ರಥದ ಶಿಲ್ಪಿ, ಕೊಟೇಶ್ವರ

ರಥ ಸಮರ್ಪಣೆ ವಿಳಂಬ
ರಥ ಕುಕ್ಕೆಗೆ ಅಕ್ಟೋಬರ್‌ನಲ್ಲಿ ತಲುಪಿದರೂ ರಥ ಸಮರ್ಪಣೆಗೆ ದೀಪಾವಳಿ ತನಕ ಕಾಯಬೇಕಿದೆ. ದೀಪಾವಳಿ ಸಂದರ್ಭ ದೇವರ ಉತ್ಸವಗಳು ಬೀದಿಗೆ ಬರಲಿದ್ದು, ಅಲ್ಲಿಯ ತನಕ ಸಮರ್ಪಣೆ ಅಸಾಧ್ಯ. ರಥಕ್ಕೆ ಸಂಬಂಧಿಸಿ ಉಳಿದ ಕೆಲಸ ಕಾರ್ಯಗಳು ನಡೆದು ದೀಪಾವಳಿ ಸಂದರ್ಭ (ನವೆಂಬರ್‌) ರಥ ಸಮರ್ಪಣೆಯಾಗಲಿದೆ. ಡಿಸೆಂಬರ್‌ನಲ್ಲಿ ನಡೆಯುವ ಚಂಪಾ ಷಷ್ಠಿ ಸಂದರ್ಭ ನೂತನ ಬ್ರಹ್ಮರಥದಲ್ಲಿ ದೇವರು ಆರೋಹಣರಾಗುವರು.

ಟಾಪ್ ನ್ಯೂಸ್

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

8-

Kaniyoor: ಕೆರೆ ಸ್ವಚ್ಛಗೊಳಿಸುವಾಗ ಮುಳುಗಿ ವ್ಯಕ್ತಿ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.