ಬಿಲ್ಲವ ಮುಂದಾಳು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಧು ಪೂಜಾರಿ ನಿಧನ
Team Udayavani, Feb 7, 2021, 10:24 AM IST
ಸುರತ್ಕಲ್: ಕಾಟಿಪಳ್ಳ ಶ್ರೀನಾರಾಯಣ ಗುರು ಶಿಕ್ಷಣ ಸಮೂಹ ಸಂಸ್ಥೆಗಳ ಸ್ಥಾಪಕ, ಬಿಲ್ಲವ ಮುಂದಾಳು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಧು ಪೂಜಾರಿ ಶನಿವಾರ ತಡ ರಾತ್ರಿ ನಿಧನ ಹೊಂದಿದರು.
ಕುಳಾಯಿ ನಿವಾಸಿ ಆಗಿರುವ ಇವರು ಉದ್ಯಮಿಯಾಗಿ, ದಾನಿಯಾಗಿ, ಶಿಕ್ಷಣ ಪ್ರೇಮಿಯಾಗಿ ಪ್ರಸಿದ್ದಿ ಹೊಂದಿದ್ದರು.
ಇದನ್ನೂ ಓದಿ:ಐಕಳ ಕಂಬಳ ಕರೆಯಲ್ಲಿ ಬೋಳದಗುತ್ತು ರಾಕೆಟ್ ಬೊಲ್ಲ- ಧೋನಿ ಕೋಣಗಳ ದಾಖಲೆ ಓಟ
ಮೃತರ ಅಂತ್ಯಕ್ರಿಯೆಯು ಇಂದು ಮದ್ಯಾಹ್ನ ನಡೆಯಲಿರುವುದು.
ಸಾಧು ಪೂಜಾರಿ ಅವರ ನಿಧನಕ್ಕೆ ಮಾಜಿ ಕೇಂದ್ರ ಸಚಿವರಾದ ಜನಾರ್ಧನ ಪೂಜಾರಿ, ಆಸ್ಕರ್ ಫರ್ನಾಂಡೀಸ್, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಮೊಯಿದೀನ್ ಬಾವಾ, ಬಿಲ್ಲವ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.