ಕುವೈಟ್ ಸಂತ್ರಸ್ತರು: ಮಂಗಳೂರಿನ ಓರ್ವ ಇಂದು ಆಗಮಿಸುವ ನಿರೀಕ್ಷೆ
Team Udayavani, Jul 15, 2019, 9:58 AM IST
ಮಂಗಳೂರು: ಕುವೈಟ್ನಲ್ಲಿ ಅತಂತ್ರ ಸ್ಥಿತಿಯಲ್ಲಿ ರುವ ಭಾರತೀಯ ಸಂತ್ರಸ್ತ ಕಾರ್ಮಿಕರ ಪೈಕಿ ಇಬ್ಬರು ಶನಿವಾರ ತಾಯ್ನಾಡಿಗೆ ಮರಳಿದ್ದು, ಇನ್ನುಳಿದವರಲ್ಲಿ 15 ಜನರ ತಂಡ ಸೋಮವಾರ ಕುವೈಟ್ನಿಂದ ಹೊರಡಲಿದೆ.
ಪ್ರಥಮ ಹಂತದಲ್ಲಿ ಮಂಜೇಶ್ವರದ ಅಭಿಷೇಕ್ ಮತ್ತು ಉತ್ತರ ಪ್ರದೇಶದ ಪಂಕಜ್ ಸ್ವದೇಶಕ್ಕೆ ಹೊರಟಿದ್ದಾರೆ.
ಅಭಿಷೇಕ್ ರವಿವಾರ ಮುಂಬಯಿ ತಲುಪಿದ್ದು, ಅಲ್ಲಿಂದ ಬಸ್ ಮೂಲಕ ಮಂಗಳೂರು ಕಡೆಗೆ ಪ್ರಯಾಣಿಸಿದ್ದಾರೆ. ಸೋಮವಾರ ಅವರು ಮಂಗಳೂರಿಗೆ ತಲುಪಲಿದ್ದಾರೆ.
ಅಭಿಷೇಕ್ ಮತ್ತು ಪಂಕಜ್ ಕುಮಾರ್ ಅವರಿಗೆ ಶುಕ್ರವಾರ ಪಾಸ್ಪೋರ್ಟ್ ಹಸ್ತಾಂತರಿಸಲಾಗಿತ್ತು. ಕುವೈಟ್ನಲ್ಲಿ ನೆಲೆಸಿರುವ ಮೋಹನ್ದಾಸ್ ಕಾಮತ್ ಮತ್ತು ಳಂಗೋವನ್ ವಿಮಾನ ಟಿಕೆಟ್ ಪ್ರಾಯೋಜಿಸಿದ್ದರು.
ಅಭಿಷೇಕ್ ಮತ್ತು ಪಂಕಜ್ ಕುಮಾರ್ ಅವರನ್ನು ಮೋಹನ್ದಾಸ್ ಕಾಮತ್, ರಾಜ್ ಭಂಡಾರಿ, ಅಲ್ವಿನ್ ಡಿ’ಸೋಜಾ, ಅಮಿತಾಶ್ ಪ್ರಭು ಮತ್ತಿತರರು ಶನಿವಾರ ರಾತ್ರಿ ಕುವೈಟ್ ವಿಮಾನ ನಿಲ್ದಾಣದಲ್ಲಿ ಭಾರತಕ್ಕೆ ಬೀಳ್ಕೊಟ್ಟಿದ್ದರು.
ಕುವೈಟ್ ವಿಮಾನ ನಿಲ್ದಾಣದಿಂದ ದೂರವಾಣಿ ಮೂಲಕ “ಉದಯವಾಣಿ’ ಯೊಂದಿಗೆ ಮಾತನಾಡಿದ ಅಭಿಷೇಕ್, ಹಲವು ಸಮಸ್ಯೆಗಳಿಗೆ ಸಿಲುಕಿ ಅತಂತ್ರ ಸ್ಥಿತಿಯನ್ನು ಎದುರಿಸುತ್ತಿದ್ದ ನನಗೆ ಭಾರತಕ್ಕೆ ಮರಳಿ ಬರಲು ಅವಕಾಶ ದೊರಕಿರುವುದು ಸಂತಸ ತಂದಿದೆ. ಇದಕ್ಕೆ ಮೋಹನ್ದಾಸ್ ಕಾಮತ್, ರಾಜ್ಭಂಡಾರಿ, ಬಿನಫಿಲೀಸ್ ಮೊದಲಾದವರು, ಬಂಟರ ಸಂಘ ಕುವೈಟ್ ನೆರವು ನೀಡಿದೆ ಎಂದು ಕೃತಜ್ಞತೆ ಸಲ್ಲಿಸಿದ್ದರು.
ಜು.15ರಂದು 15 ಮಂದಿ ಆಂಧ್ರದವರು ಹೊರಡಲಿದ್ದು, ಅವರ ಟಿಕೆಟ್ ಅನ್ನು ಅನಿವಾಸಿ ಉದ್ಯಮಿ ಆಂಧ್ರದ ಆಕಾಶ್ ಪನ್ವಾರ್ ಪ್ರಾಯೋಜಿಸಿದ್ದಾರೆ. ಜು. 17ರಂದು ಮಂಗಳೂರಿನ 19 ಮಂದಿ ಬರಲಿದ್ದು, ಇವರ ಟಿಕೆಟ್ನ್ನು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮತ್ತು ಇತರ ದಾನಿಗಳು ಭರಿಸಲು ಮುಂದಾಗಿದ್ದಾರೆ. ಕುವೈಟ್ನಲ್ಲಿ ಅತಂತ್ರರಾದವರಿಗೆ ಕಂಪೆನಿ ನೀಡಿದ ಬಾಡಿಗೆ ಮನೆಯನ್ನೇ ಮುಂದುವರಿಸಲಾಗಿದ್ದು, ಜು. 17ರವರೆಗೆ ಇದರಲ್ಲಿ ತಂಗಲು ಮನೆಯ ಮಾಲಕರು ಒಪ್ಪಿಗೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ